ಬಿಜೆಪಿಯಿಂದ ಎಲ್ಲಾ ಜಿಲ್ಲೆಗಳಲ್ಲೂ ಕರಾವಳಿ ಜಾಥಾ

ಕಾಸರಗೋಡು: ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನತೆ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂಬ ಬೇಡಿಕೆಯೊಂದಿಗೆ ಬಿಜೆಪಿ ಇಂದು ಎರ್ನಾಕುಳಂನಲ್ಲಿ ನಡೆಸುವ ಕರಾವಳಿ ಜಾಥಾವನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ನವಂಬರ್ ೧ರಂದು ತೃಶೂರಿನಲ್ಲಿ ಕರಾವಳಿ ಜಾಥಾ ನಡೆಯಲಿದೆ. ಕೇಂದ್ರ ಸರಕಾರ ಮೀನು ಕಾರ್ಮಿಕರಿಗಾಗಿ ಮಂಜೂರು ಮಾಡುವ ಯಾವುದೇ ಯೋಜನೆಗಳನ್ನು ರಾಜ್ಯ ಸರಕಾರ ಜ್ಯಾರಿಗೆ ತರುತ್ತಿಲ್ಲ. ಇದರ ವಿರುದ್ಧ ಬಿಜೆಪಿ ತೀವ್ರ ಚಳವಳಿ ನಡೆಸುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಎಸ್. ರಾಧಾಕೃಷ್ಣನ್ ಆರೋಪಿಸಿದ್ದಾರೆ.

You cannot copy contents of this page