ಬೆಳ್ಳೂರು ಬ್ಯಾಂಕ್ ಆಡಳಿತ ಸಮಿತಿಗೆ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧ ಆಯ್ಕೆ

ಮುಳ್ಳೇರಿಯ: ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಸಮಿತಿಗೆ ಬಿಜೆಪಿ ನೇತೃತ್ವದ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ ವಿ.ಎಸ್. ಸುಬ್ರಹ್ಮಣ್ಯ ಕಡಂಬಳಿತ್ತಾ ಯರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಜಯರಾಜ ರೈ ಇ.ಜಿ, ನಿರ್ದೇಶಕರಾಗಿ  ಸುಂದರ ರೈ, ಆಶೀರ್ವಾದ್ ಎಚ್.ಎಸ್, ಅಶೋಕ ಎಂ, ಮುರಳೀಧರ ಭೋಗಲ್ಕರ್, ಮುರಳೀಧರ ಎಸ್,  ಗೋಪಾಲನ್, ಪ್ರಶಾಂತಿ ಪಿ. ನಾಯ್ಕ್, ಶ್ಯಾಮಲ ಎಂ. ಬಲ್ಲಾಳ್, ಚಂದ್ರಕಲಾ ಎಚ್. ಎಂಬಿವರು ಆಯ್ಕೆಗೊಂಡಿದ್ದಾರೆ. ಚುನಾ ವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ ೧೮ ಕೊನೆಯ ದಿನವಾಗಿತ್ತು. ಆದರೆ ಸರಕಾರ ಭಾರತಿ ಅಭ್ಯರ್ಥಿಗಳು ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

RELATED NEWS

You cannot copy contents of this page