ಮಡಲಿನ ಚಪ್ಪರಕ್ಕೆ ಬೆಂಕಿ ತಗಲಿ ಎರಡು ಬೈಕ್‌ಗಳು ಉರಿದು ನಾಶ

ಮಾನ್ಯ: ಮನೆಗೆ ಹೊಂದಿ ಕೊಂಡು ಮಡಲಿನಿಂದ ನಿರ್ಮಿ ಸಿದ ಚಪ್ಪರಕ್ಕೆ ಬೆಂಕಿ ತಗಲಿದ ಪರಿಣಾಮ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳು ಉರಿದು ನಾಶಗೊಂಡ ಘಟನೆ ಮಾನ್ಯ ಬಳಿಯ ಮುಂಡೋಡಿನಲ್ಲಿ ಸಂಭವಿಸಿದೆ. ಮುಂಡೋಡಿನ ನಾರಾಯಣ ನಾಯ್ಕ್‌ರ ಕಾಂಕ್ರೀಟ್ ಮನೆಯ ಛಾವಣಿಗೆ ಹೊಂದಿಕೊಂಡು ಮಡಲಿನ ಚಪ್ಪರ ನಿರ್ಮಿಸಲಾಗಿತ್ತು. ಚಪ್ಪರಕ್ಕೆ ನಿನ್ನೆ ಬೆಳಿಗ್ಗೆ ಬೆಂಕಿ ಹತ್ತಿಕೊಂಡಿದ್ದು, ಈ ವೇಳೆ ಚಪ್ಪರದ ಅಡಿಯಲ್ಲಿ ನಿಲ್ಲಿಸಲಾಗಿದ್ದ ಸ್ಪ್ಲೆಂಡರ್, ಕೆಟಿಎಂ 200 ಎಂಬೀ ಬೈಕ್‌ಗಳಿಗೆ ಬೆಂಕಿ ತಗಲಿದೆ. ವಿಷಯ ತಿಳಿದು ತಲುಪಿದ ಕಾಸರಗೋಡು ಅಗ್ನಿಶಾಮಕ ದಳದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣು ಗೋಪಾಲ್‌ರ ನೇತೃತ್ವದಲ್ಲಿ ಬೆಂಕಿ ನಂದಿಸಲಾಯಿತು. ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಎಂ. ರಮೇಶ್, ಅಮಲ್‌ರಾಜ್ ಟಿ, ಮುಹಮ್ಮದ್ ಸಿರಾಜುದ್ದೀನ್ ಪಿ.ಸಿ, ವುಮನ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಅರುಣ ಪಿ. ನಾಯರ್, ಹೋಂಗಾರ್ಡ್ ವಿ. ರಾಜು ಮೊದಲಾದವರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಚಪ್ಪರಕ್ಕೆ ಬೆಂಕಿ ತಗಲಿರಬಹುದೆಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page