ಮುಳ್ಳೇರಿಯ ಬಳಿ ವಾಹನ ಅಪಘಾತ ಯುವಕ ದಾರುಣ ಮೃತ್ಯು

ಮುಳ್ಳೇರಿಯ: ಇಲ್ಲಿಗೆ ಸಮೀಪದ ದೇಲಂಪಾಡಿಯಲ್ಲಿ ಇಂದು ಬೆಳಿಗ್ಗೆ ಸಂಭವಿ ಸಿದ ವಾಹನ ಅಪಘಾತ ದಲ್ಲಿ ಓರ್ವ ಯುವಕ ದಾರುಣವಾಗಿ ಮೃತ ಪಟ್ಟ ಘಟನೆ ನಡೆದಿದೆ.  ಆದೂರು ಸಿಎ ನಗರ ಬೀಟಿಯಡಿ ನಿವಾಸಿ ಖಾದರ್-ರಮ್ಲ ದಂಪತಿ ಯ ಪುತ್ರ  ರೈಸ್ ಅನ್ವರ್ (೧೮) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಇವರು ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬಂದ ಟೆಂಪೋ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ರೈಸ್ ಅನ್ವರ್  ಮುಳ್ಳೇರಿ ಯದ ತರಕಾರಿ ಅಂಗಡಿಯೊಂದರಲ್ಲಿ ನೌಕರನಾಗಿದ್ದರು. ಇವರು    ಇಂದು ಬೆಳಿಗ್ಗೆ ಬೇರೊಬ್ಬರ ಸ್ಕೂಟರ್ ನಲ್ಲಿ ಬದಿಯಡ್ಕ ಭಾಗಕ್ಕೆ ತೆರಳುತ್ತಿದ್ದಾಗ  ಅಪಘಾತ ಸಂಭವಿಸಿದೆಯೆಂದು ಹೇಳಲಾ ಗುತ್ತಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page