ಮೋದಿ ಪ್ರಮಾಣವಚನ ಬಿಜೆಪಿಯಿಂದ ಹರ್ಷಾಚರಣೆ

ಮಂಜೇಶ್ವರ: ಕೇಂದ್ರದಲ್ಲಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಾಗೂ ಕೇರಳದಿಂದ ಸುರೇಶ್‌ಗೋಪಿ, ಜೋರ್ಜ್ ಕುರ್ಯನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ವ್ಯಾಪ್ತಿಯ ಹೊಸಂಗಡಿ, ಮೀಯಪದವು, ಮಜೀರ್ಪಳ್ಳ, ಮೊರತ್ತಣೆಗಳಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಮಂಡಲಾಧ್ಯಕ್ಷ ಆದರ್ಶ್ ಬಿ.ಎಂ., ಮುಖಂಡರಾದ ಯತಿರಾಜ್ ಶೆಟ್ಟಿ, ಹರೀಶ್ಚಂದ್ರ ಮಂಜೇಶ್ವರ, ನವೀನ್‌ರಾಜ್, ಕೆ.ವಿ. ಭಟ್, ಎ.ಕೆ. ಕಯ್ಯಾರ್, ತುಳಸಿ ಕುಮಾರಿ, ನಿಶಾ ಭಟ್, ರಾಜ ಕುಮಾರ್, ಧೂಮಪ್ಪ ಶೆಟ್ಟಿ, ಪದ್ಮನಾಭ ಕಡಪ್ಪುರ, ನಾರಾಯಣ ನಾಯ್ಕ್, ವೇಣು ಬಾಯಾರ್, ಸದಾಶಿವ ಚೇರಾಲ್ ನೇತೃತ್ವ ನೀಡಿದರು.

RELATED NEWS

You cannot copy contents of this page