ಯುವಕನ ಮೇಲೆ ಹಲ್ಲೆ ನಡೆಸಿ ಸ್ಕೂಟರ್  ಹಿಡಿದೆಳೆದು ಸಾಗಿಸಿದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ಕಳೆದ ನವಂಬರ್ ೧೬ರಂದು ರಾತ್ರಿ ತಳಂಗರೆಯ ಹೋಟೆಲೊಂದಕ್ಕೆ ಆಹಾರ ಸೇವಿಸಲು ಹೋಗಿದ್ದ ಅಡ್ಕತ್ತಬೈಲು ನಿವಾಸಿ ರಾಜೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಹಿಡಿದೆಲೆದು ಎಸೆದ ಬಳಿಕ ಅವರ ಕೈಯಲ್ಲಿದ್ದ ಸ್ಕೂಟರ್‌ನ ಕೀಲಿಯನ್ನು ಹಿಡಿದೆಳೆದು  ಆ ಸ್ಕೂಟರ್‌ನೊಂದಿಗೆ ಸಾಗಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಕೆ.ವಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಈ ಹಿಂದೆ ತೆರುವತ್ ಸಿರಾಮಿಕ್ಸ್ ರೋಡ್ ಕ್ವಾರ್ಟರ್ಸ್ ಒಂದರಲ್ಲಿ  ವಾಸಿಸುತ್ತಿದ್ದು ಈಗ ಉಳಿಯತ್ತಡ್ಕದಲ್ಲಿ ನೆಲೆಸಿರುವ ಜಾವೀದ್ ಎಚ್.ಎಂ (೨೩) ಬಂಧಿತ ಆರೋಪಿ. ಈತ ಕಸಿದೊಯ್ದ ಸ್ಕೂಟರನ್ನು ಬಳಿಕ ತಳಂಗರೆ ಕಡವತ್ತ್‌ನಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ.

RELATED NEWS

You cannot copy contents of this page