ರಾಷ್ಟ್ರಕವಿ ಗೋವಿಂದ ಪೈ ಜನ್ಮದಿನಾಚರಣೆ 23ರಂದು ಮಂಜೇಶ್ವರದಲ್ಲಿ

ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಗಿಳಿವಿಂಡು ಕನ್ನಡ ಸಾಹಿತ್ಯಿಕ , ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ 141ನೇ ಜನ್ಮದಿನಾಚರಣೆ ಮಾ.23ರಂದು ಅಪರಾಹ್ನ 2 ಗಂಟೆಗೆ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮೊಹಮ್ಮದ್ ಆಲಿ .ಕೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ.ಪಿ, ಡಾ.ಸಚೀಂದ್ರನ್,ಡಾ.ಸಿAಧು ಜೋಸೆಫ್,ಡಾ. ರಮಾ, ಆಗ್ನೇಯ ಸಾಯಿ,ದಿನೇಶ ಕೆ.ಎನ್ ಶುಭ ಹಾರೈಸುವರು. ಬಳಿಕ ಗೋವಿಂದ ಪೈ ಅವರ ಬದುಕು -ಬರಹಗಳ ಕುರಿತು ವಿಚಾರಗೋಷ್ಠಿ ನಡೆಯುವುದು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸಮನ್ವಯಕಾರರಾಗಿರುವರು .ವಿದ್ಯಾಶ್ರೀ, ಸುಮಿತ್ರಾ. ಕೆ.ಆರ್, ದೀಕ್ಷಿತ.ಕೆ, ಸರ್ವಾಣಿ ಬಿ.ಕೆ, ಆದಿಶ್ರೀ. ಎಸ್.ಎನ್, ವಿವೇಕ್.ಎ ಇವರು ಕ್ರಮವಾಗಿ ಗೋವಿಂದ ಪೈ ಅವರ ಬದುಕು, ಕವನಗಳು, ನಾಟಕ, ತಾಯಿ ಮತ್ತು ನೋ ನಾಟಕಗಳು, ಸಂಶೋಧನೆಗಳು ಮತ್ತುಖಂಡಕಾವ್ಯಗಳ ಕುರಿತು ಪ್ರಬಂಧ ಮಂಡಿಸುವರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು, ಉಪನ್ಯಾಸಕರಾದ ಡಾ.ಸುಜೇಶ್.ಎಸ್,ಜಯಂತಿ.ಕೆ ಉಪಸ್ಥಿತರಿರುವರು.

Leave a Reply

Your email address will not be published. Required fields are marked *

You cannot copy content of this page