ರಿಕ್ಷಾದಲ್ಲಿ ಸಾಗಿಸುತ್ತಿದ್ದ 86.4 ಲೀಟರ್ ಕರ್ನಾಟಕ ಮದ್ಯ ವಶ: ಇಬ್ಬರ ಸೆರೆ

ಕುಂಬಳೆ: ಕಾಸರಗೋಡು  ಎಕ್ಸೈ ಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಬಂದ್ಯೋಡಿನಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಕರ್ನಾಟ ಕದಲ್ಲಿ ಮಾತ್ರ ಮಾರಾಟಮಾಡಬ ಹುದಾದ 86.4 ಲೀಟರ್ ಮದ್ಯ ವಶಪಡಿಸಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಮದ್ಯ ಸಾಗಿಸಲು ಬಳಸಿದ ಆಟೋ ರಿಕ್ಷಾವನ್ನು ಕಸಡಿಗೆ ಸಾಗಿಸಲಾಗಿದೆ.   ಕಿಳಿಂಗಾರು ಮುಗು ರೋಡ್‌ನ ಹರಿ ಪ್ರಸಾದ್ ಕೆ,  ಬಾಡೂರು ಬಾಳಿಗ ನಿವಾಸಿ ಸತ್ಯ ನಾರಾಯಣ ಎಂಬವರನ್ನು ಬಂಧಿಸಿ ರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮದ್ಯ ಹಾಗೂ ಆರೋಪಿಗಳನ್ನು ಕುಂಬಳೆ ಅಬಕಾರಿ ರೇಂಜ್ ಕಚೇರಿಯಲ್ಲಿ ಹಾಜರು ಪಡಿಸಲಾಯಿತು. ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಮುರಳಿ ಕೆ.ವಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಇಒಗಳಾದ ಮಂಜುನಾಥನ್ ವಿ, ಸೋನು ಸೆಬಾಸ್ಟಿಯನ್, ಪ್ರಶಾಂತ್ ಕುಮಾರ್, ಅಜೀಶ್ ಸಿ, ಚಾಲಕ ಸಜೀಶ್ ಪಿ ಎಂಬವರಿದ್ದರು.

You cannot copy contents of this page