ವೈದ್ಯರುಗಳ ಚೀಟಿ ಇಲ್ಲದೆ ಆಂಟಿ ಬಯೋಟಿಕ್ ಮಾರಾಟ: 450 ಔಷಧ ಅಂಗಡಿಗಳ ಲೈಸನ್ಸ್ ಅಮಾನತು
ತಿರುವನಂತಪುರ: ವೈದ್ಯರುಗಳ ಲಿಖಿತ ಚೀಟಿ ಇಲ್ಲದೆ ಆಂಟಿ ಬಯೋಟಿಕ್ ಮಾರಾಟ ಮಾಡಿದ ರಾಜ್ಯದ ಅಂಗಡಿಗಳ ಲೈಸನ್ಸ್ನ್ನು ರಾಜ್ಯ ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ. ಇದರ ಹೊರತಾಗಿ ಐದು ಔಷಧ ಅಂಗಡಿಗಳ ಲೈಸನ್ಸ್ಗಳನ್ನು ರದ್ದುಪಡಿಸಲಾಗಿದೆ. ಆಂಟಿ ಬಯೋಟಿಕ್ ಔಷಧಗಳ ಅಮಿತ ಸೇವನೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಹಾಗೂ ರೋಗ ದೇಹದಲ್ಲಿ ಪ್ರತಿರೋಧಕ ಶಕ್ತಿಗಳನ್ನು ಕಡಿಮೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಮಿತವಾದ ರೀತಿಯಲ್ಲಿ ಆಂಟಿ ಬ್ಯಾಟಿಕ್ ಔಷಧ ಸೇವನೆಯನ್ನು ತಡೆಗಟ್ಟುವ ಕ್ರಮದಂತೆ ವೈದ್ಯರ ಲಿಖಿತ ಚೀಟಿಗಳಿಲ್ಲದೆ ಯಾವುದೇ ಆಂಟಿ ಬಯೋಟಿಕ್ ಔಷಧಗಳನ್ನು ಮಾರಾಟ ಮಾಡಬಾರದೆಂಬ ಕಠಿಣ ನಿರ್ದೇಶವನ್ನು ರಾಜ್ಯದ ಎಲ್ಲಾ ಔಷಧ ಅಂಗಡಿಗಳಿಗೆ ಆರೋಗ್ಯ ಇಲಾಖೆ ಈ ಹಿಂದೆಯೇ ನೀಡಿತ್ತು.
ಮಾತ್ರವಲ್ಲದೆ ವೈದ್ಯರ ಚೀಟಿ ಇಲ್ಲದೆ ಇಂತಹ ಔಷಧ ಮಾರಾಟ ಮಾಡಿದಲ್ಲಿ ಅಂತಹ ಔಷಧ ಅಂಗಡಿಗಳ ಲೈಸನ್ಸ್ ರದ್ದುಪಡಿಸುವ ಇತ್ಯಾದಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂಬ ಮುನ್ನೆಚ್ಚರಿಕೆಯನ್ನೂ ಇಲಾಖೆ ನೀಡಿತ್ತು. ಅದರಂತೆ ಆರಂಭಿಸಲಾದ ಕಾರ್ಸಾಪ್ (ಕೇರಳ ಆಂಟಿ ಮೈಕ್ರೋ ಬಿಎನ್ ರೆಸಿಸ್ಟೆನ್ಸ್ ಸ್ಟ್ಯಾಟಜಿಕ್ ಆಕ್ಷನ್ ಪ್ಲಾನ್)ನಂತೆ ಈ 450 ಔಷಧ ಅಂಗಡಿಗಳ ಲೈಸನ್ಸ್ ಅಮಾನತುಗೊಳಿಸಲಾಗಿದೆ ಮಾತ್ರವಲ್ಲದೆ 10 ಔಷಧ ಅಂಗಡಿಗಳ ಲೈಸನ್ಸ್ಗಳನ್ನು ರದ್ದುಪಡಿಸುವ ತೀರ್ಮಾನವನ್ನು ಆರೋಗ್ಯ ಇಲಾಖೆ ಕೈಗೊಂಡಿದೆ. ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ರ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಉನ್ನತ ಮಟ್ಟದ ಸಭೆ ಕರೆದು ಚರ್ಚಿಸಲಾಯಿತು. ಇನ್ನು ಕೆಲವರು ಹಾಲು, ಮಾಂಸ ಮತ್ತು ಮೀನುಗಳಲ್ಲಿ ಆಂಟಿ ಬಯೋಟಿಕ್ ಅಂಶಗಳನ್ನು ಬಳಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಅದನ್ನು ಪತ್ತೆಹಚ್ಚುವ ಕ್ರಮವನ್ನು ಇನ್ನಷ್ಟು ತೀವ್ರಗೊಳಿಸಲು ಸಭೆ ತೀರ್ಮಾನಿಸಿದೆ.