ಉದ್ಯಾವರದಲ್ಲಿ ದುಬೈ ಸಮಿತಿಯಿಂದ ರಕ್ತದಾನ ಶಿಬಿರ

ಮಂಜೇಶ್ವರ : ಉದ್ಯಾವರ ದುಬೈ ಕಮಿಟಿ ಹಾಗೂ ಸ್ಟೋರ್ಟಿಂಗ್ ಉದ್ಯಾವರ ಆರ್ಟ್ಸ್ ಆಂಡ್ ಸ್ಟೋರ್ಟ್ಸ್ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ ಕೆ ಎಂ ಸಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. ಉದ್ಯಾವರ ಕೇಂದ್ರ ಮಹಲ್ ಮದ್ರಸದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ ರಕ್ತದಾನ ಮಾಡಿದರು. ಉದ್ಯಾವರ ಸಾವಿರ ಜಮಾಯತ್ ಖತೀಬ್ ಅಬ್ದುಲ್ ಕರೀಂ ದಾರಿಮಿ ಪ್ರಾರ್ಥನೆ ಗೈದರು. ಜಮಾಯತ್ ಮುದರಿಸ್ ಅಬ್ದುಲ್ ಖಾದರ್ ಮದನಿ, ಅಬ್ದುಲ್ ಖಾದರ್ ಫೈಜಿ, ಮುಕ್ತಾರ್ ಎ, ಭಾವ ಹಾಜಿ, ಇಬ್ರಾಹಿಂ, ಸೈಫುಲ್ಲ, ಮೊಹಮ್ಮದ್ ಅರಬಿ, ಸಲೀಂ ಸನ, ಫಕ್ರುದ್ದೀನ್ ಸಲೀಂ, ಶಾಕಿರ್ ಪೋಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page