ಏತಡ್ಕದಲ್ಲಿ ಕಟ್ಟದ ದಿನಾಚರಣೆ

ಬದಿಯಡ್ಕ: ಎಲ್ಲರೂ ಜೊತೆಗೂಡಿ ಕಟ್ಟಗಳನ್ನು ಕಟ್ಟಿದರೆ ಆ ಕಟ್ಟದಿಂದ ಕೃಷಿಕನಿಗೆ ನಷ್ಟವಿಲ್ಲ. ಜಲಸಂಪನ್ಮೂಲವನ್ನು ವೃದ್ಧಿಸುವ ಕಟ್ಟಗಳ ಮೂಲಕ ಜನರು ಒಂದು ಗೂಡಿದಾಗ ಸಂಘಟನೆ ಬಲವಾಗು ತ್ತದೆ. ಪರಸ್ಪರ ಬಾಂಧವ್ಯದೊAದಿಗೆÀ ಸದೃಢವಾದ ಕಟ್ಟವನ್ನೇ ಕಟ್ಟಬೇಕು ಎಂದು ಪ್ರಗತಿಪರ ಕೃಷಿಕ ಗಣಪತಿ ಭಟ್ ಪತ್ತಡ್ಕ ಅಭಿಪ್ರಾಯಪಟ್ಟರು.
ಏತಡ್ಕ ಕುಂಬÁ್ಡಜೆ ಗ್ರಾಮಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಏತಡ್ಕ ಅವರ ಅಧ್ಯಕ್ಷತೆಯೊಂದಿಗೆ ಸಮಾಜಮಂದಿರ ಏತಡ್ಕದಲ್ಲಿ ಜರಗಿದ ಕಟ್ಟದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಕುಂಬÁ್ಡಜೆ ಪಂಚಾಯತ್ ವಾರ್ಡು ಪ್ರತಿನಿದಿs ಕೃಷ್ಣಶರ್ಮ ಜಿ ಮಾತನಾಡಿ ಕಟ್ಟಗಳೇ ನದೀ ತೀರದ ಜನರ ಜೀವನಾಡಿ ಸರಿಯಾಗಿ ಕಟ್ಟಗಳನ್ನು ಕಟ್ಟಿದಾಗ ಬರಗಾಲದಿಂದ ಮುಕ್ತಿ ಹೊಂದಲು ಸಾಧ್ಯ ಎಂದರು. ಬೇರ್ಕಡವು ಕಟ್ಟದ ಮೇಲ್ವಿಚಾರಕ ಉದಯಶಂಕರ ಭಟ್ ಸಿ ನದೀ ತೀರದಲ್ಲಿ ಕಟ್ಟಕಟ್ಟುವ ಜನರಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಒಗ್ಗಟ್ಟು ಇದ್ದಲ್ಲಿ ಮಾತ್ರವೇ ಸಾಂಪ್ರದಾಯಿಕ ಕಟ್ಟಗಳು ಯಶಸ್ವಿಯಾಗಲು ಸಾಧ್ಯ ಎಂದು ನುಡಿದರು. ಡಾ ವೇಣುಗೋಪಾಲ್ ಕಳೆಯತ್ತೋಡಿ ಸ್ವಾಗತಿಸಿ, ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ. ಏತಡ್ಕ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page