ಕ್ವಾರ್ಟರ್ಸ್ಗೆ ನುಗ್ಗಿ ಯುವಕನಿಗೆ ಹಲ್ಲೆ
ಉಪ್ಪಳ: ಕ್ವಾರ್ಟರ್ಸ್ಗೆ ನುಗ್ಗಿ ಯುವಕನಿಗೆ ಹಲ್ಲೆಗೈದ ಆರೋಪದಂತೆ ಕ್ವಾರ್ಟರ್ಸ್ನ ಮಾಲಕನ ವಿರುದ್ಧ ಮಂ ಜೇಶ್ವರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ದುರ್ಗಿಪಳ್ಳದ ಕ್ವಾರ್ಟ ರ್ಸ್ನಲ್ಲಿ ವಾಸಿಸುವ ಸಿದ್ದಿಕ್ (೪೫) ಎಂಬವರು ನೀಡಿದ ದೂರಿನಂತೆ ಅದೇ ಕ್ವಾರ್ಟರ್ಸ್ನ ಮಾಲಕ ಹಮೀದ್ ವಿರುದ್ಧ ಕೇಸುದಾಖಲಿಸಲಾಗಿದೆ. ಕ್ವಾರ್ಟರ್ಸ್ನ ಬಾಡಿಗೆ ನೀಡಲು ಬಾಕಿಯಿದೆಯೆಂದು ಹೇಳಲಾಗುತ್ತಿದೆ. ಈ ಕಾರಣದಿಂದ ಈ ತಿಂಗಳ ೧೬ರಂದು ಬೆಳಿಗ್ಗೆ ಹಮೀದ್ ಕ್ವಾರ್ಟರ್ಸ್ಗೆ ನುಗ್ಗಿ ಸಿದ್ದಿಕ್ಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ.