ಜ್ಯೋತಿಷಿ ಅಸೌಖ್ಯ ಬಾಧಿಸಿ ಸಾವು

ಬದಿಯಡ್ಕ: ಬದಿಯಡ್ಕದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಜ್ಯೋತಿಷಿ ಅಸೌಖ್ಯದಿಂದ ಮೃತಪಟ್ಟರು. ಮಂಗಳೂರಿನಲ್ಲಿ ಜ್ಯೋತಿಷಿಯಾಗಿದ್ದ ಕರ್ನಾಟಕದ ಹಾಸನ ನಿವಾಸಿ ರಂಗಸ್ವಾಮಿ (೩೯) ಎಂಬವರು ಮೃತ ವ್ಯಕ್ತಿ.  ನಿನ್ನೆ ಸಂಜೆ ೪ ಗಂಟೆಗೆ ವೇಳೆ ಅಪಸ್ಮಾರ ಉಂಟಾದ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಮುಂಜಾನೆ ಇವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page