ಮದುವೆ ಅಗತ್ಯಕ್ಕಾಗಿ ಕಾರು ಪಡೆದು ಹಿಂತಿರುಗಿಸದ ದೂರಿನಂತೆ ಕೇಸು ದಾಖಲು

ಕಾಸರಗೋಡು: ಮದುವೆಯ ಅಗತ್ಯಕ್ಕಾಗಿ ಕಾರು ಪಡೆದು ಬಳಿಕ ಅದನ್ನು ಹಿಂತಿರುಗಿಸದ ದೂರಿನಂತೆ ವಿದ್ಯಾನಗರ ಪೊಲೀಸರು ಆಲಂಪಾ ಡಿಯ ಹೈದರ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಚೆಂಗಳ ಇಂದಿರಾನಗರದ ಮಹರೂಫ್ ಎಂಬವರು ಈ ಬಗ್ಗೆ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮದುವೆ ಅಗತ್ಯಕ್ಕಾಗಿ ಹೈದರ್ ಕಳೆದ ನವಂಬರ್ ೯ರಂದು ತನ್ನ ಕಾರು ಪಡೆದುಕೊಂಡಿದ್ದರೆಂದೂ ಬಳಿಕ ಅದನ್ನು ಆತ ಹಿಂತಿರುಗಿಸಿಲ್ಲವೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲ್ಲಿ ಮಹರೂಫ್  ಆರೋಪಿಸಿದ್ದಾರೆ.

RELATED NEWS

You cannot copy contents of this page