ಅಧಿವೇಶನ ರಾಜ್ಯಪಾಲರ ಭಾಷಣದೊಂದಿಗೆ ಚಾಲನೆ: ಕಲ್ಯಾಣ ಪಿಂಚಣಿ 3000 ರೂ.ಗೇರಿಕೆ ; ವಿದ್ಯಾರ್ಥಿನಿಯರಿಗ ಮೂರು ದಿನ ಋತುಚಕ್ರ ರಜೆ

ತಿರುವನಂತಪುರ: 16ನೇ ವಿಧಾನಸಭೆಯ ಮೊದಲ ನೀತಿಗಳನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಭಾಷಣದ ಮೂಲಕ ಘೋಷಿಸುವುದರೊಂದಿಗೆ  ವಿಧಾ ನಸಭಾ ಅಧಿವೇಶನ ಇಂದು ಬೆಳಿಗ್ಗೆ ಪುನರಾರಂಭಗೊಂಡಿತು. ಕೇರಳದ ವಿಧಾನಸಭೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಂಬಂತೆ ವಂದೇ ಮಾತರಂ ಗೀತೆಯ ಆಲಾಪನೆಯೊಂದಿಗೆ ಆರಂಭಗೊಡ ವಿಧಾನಸಭಾ ಅಧಿವೇಶನ ಇದಾಗಿದೆಯೆಂಬ ವಿಶೇಷತೆಯೂ ಇಂದಿನ ಅಧಿವೇಶನ ಹೊಂದಿದೆ. ಆದರೆ ವಂದೇ ಮಾತರಂ ಗೀತೆಯ ಪೂರ್ಣ ಆಲಾಪನೆ ನಡೆಸದೆ  ಮೊದಲ ಸಾಲನ್ನು ಮಾತ್ರವೇ ಆಲಾಪಿಸಲಾಯಿತು. ರಾಜ್ಯದ ಎಲ್ಲಾ ಕುಟುಂಬದವರಿಗೂ ತಲಾ 25 ಲಕ್ಷ ರೂ.ಗಳ …

ಒಂದು ತಿಂಗಳ ಹಿಂದೆ ಮದುವೆಯಾದ ಯುವತಿ ವಿಷ ಸೇವಿಸಿ ಸಾವಿಗೆ ಶರಣು

ಕಾಸರಗೋಡು: ಒಂದು ತಿಂಗಳ ಹಿಂದೆ ವಿವಾಹಿತೆಯಾದ ಯುವತಿ ವಿಷ ಸೇವಿಸಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕುಟ್ಟಿಕ್ಕೋಲ್ ಬೇತೂರುಪಾರ ವಟ್ಟಂತಟ್ಟ ನಿವಾಸಿಯಾದ ಅಶ್ವತಿ (25) ಸಾವಿಗೀಡಾದ ಯುವತಿಯಾಗಿದ್ದಾಳೆ. ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾದಿಯಾಗಿದ್ದ ಅಶ್ವತಿ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಪರಕ್ಕಳಾಯಿ ಚೀಟ್ಟಕ್ಕಾವ್ ನಿವಾಸಿ ರೂಪೇಶ್‌ರ ಪತ್ನಿಯಾಗಿದ್ದಾಳೆ. ಒಂದು ತಿಂಗಳ ಹಿಂದೆ ಇವರ ಮದುವೆ ನಡೆದಿತ್ತು. ಮೇ 18ರಂದು ಕಾಸರಗೋಡಿನ ವಾಸ ಸ್ಥಳದಲ್ಲಿ ಅಶ್ವತಿ ವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸ್ಥಿತಿ …

4 ತಿಂಗಳ ಹಿಂದೆ ಮದುವೆಯಾದ ನೃತ್ಯ ಅಧ್ಯಾಪಿಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ನಾಲ್ಕು ತಿಂಗಳ ಹಿಂದೆ ವಿವಾಹಿತೆಯಾದ ಯುವತಿ ಪತಿ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಳಿಪರಂಬ ಕರಿಂಬತ್‌ನ ಆಕಾಶ್ ಮೋಹನ್‌ರ ಪತ್ನಿ ಸಾಂದ್ರತಾರ (22) ಸಾವಿಗೀಡಾದ ಯುವತಿ.  ಈಕೆ ನೃತ್ಯ ಅಧ್ಯಾಪಿಕೆಯಾಗಿದ್ದಳು. ನಿನ್ನೆ ಸಂಜೆ ಪತಿ ಮನೆಯ ಬೆಡ್‌ರೂಂನಲ್ಲಿ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಈಕೆ ಪತ್ತೆಯಾಗಿದ್ದಾಳೆ. ನಾಲ್ಕು ತಿಂಗಳ ಹಿಂದೆ ಸಾಂದ್ರತಾರ ಹಾಗೂ ಆಕಾಶ್‌ಮೋಹನ್‌ರ ಮದುವೆ ನಡೆದಿತ್ತು.  ಸಾಂದ್ರತಾರಳ ತಂದೆ ರಮೇಶ್, ತಾಯಿ ತಾರ ಕೊಲ್ಲಂ ನಿವಾಸಿಗಳಾಗಿದ್ದರು.  ಈ ಮೊದಲು ಪರಶ್ಶಿನಿ ತಳಿಯಿಲ್ …

ಬೆಳ್ಳೂರು: ನೇಣು ಬಿಗಿದು ಯುವತಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಮಕ್ಕಳಿಲ್ಲದ ಹೆಸರಲ್ಲಿ ಸರೀನ ಭಾರೀ ಮಾನಸಿಕ ಕಿರುಕುಳ ಎದುರಿಸಿರುವುದಾಗಿ ಸಹೋದರನ ಹೇಳಿಕೆ

ಮುಳ್ಳೇರಿಯ: ಬೆಳ್ಳೂರು ಪಳ್ಳಪ್ಪಾಡಿಯಲ್ಲಿ ನೇಣುಬಿಗಿದು   ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕರ್ನಾಟಕದ ಪುತ್ತೂರು  ಬಳಿಯ ಮಾಡಾವು ಬದ್ರಿಯಾ ಜುಮಾ ಮಸೀದಿ ಪರಿಸರ ದಲ್ಲಿ ನಿನ್ನೆ ರಾತ್ರಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಬೆಳ್ಳೂರು ಪಳ್ಳ ಪ್ಪಾಡಿಯ ಸೈನುದ್ದೀನ್ ಎಂಬವರ ಪತ್ನಿ ಸರೀನ (27) ಮನೆ ಸಮೀಪದ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೊನ್ನೆ ಸಂಜೆ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ನಾಲ್ಕನೇ …

ವಾಹನ ಅಪಘಾತದಲ್ಲಿ ಯುವಕ ಮೃತ್ಯು: ತಂದೆಗೆ ಗಂಭೀರ ಗಾಯ

ಕುಂಬಳೆ: ಪೆರ್ಮುದೆ -ಬಂದ್ಯೋಡು ರಸ್ತೆಯ ಪೆರ್ಮುದೆ ಪೆರಿಯಡ್ಕದಲ್ಲಿ ನಿನ್ನೆ ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಚಿಪ್ಪಾರು ಬಾಯಾರು ನೇತ್ರಗುಳಿ ನಿವಾಸಿ ಎನ್. ಕಿಶನ್ (25) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಿಶನ್ ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ವೇಳೆ ಕಿಶನ್‌ರ ಜತೆಗೆ ಇದ್ದ ತಂದೆ ಮಾಧವ ದೇವಾಡಿಗ (55) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಿಶನ್ ವೆಲ್ಡಿಂಗ್ ಕಾರ್ಮಿಕನಾಗಿ …

ಕಾಂಕ್ರೀಟ್ ಗೋಡೆಗೆ ಢಿಕ್ಕಿ ಹೊಡೆದ ಸಾರಿಗೆ ಬಸ್

ಕಾಸರಗೋಡು: ಮೊಗ್ರಾಲ್ ಕೊಪ್ಪರಬಜಾರ್‌ನ ಸರ್ವೀಸ್ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಬಸ್ ರಸ್ತೆ ಬದಿಯ ಕಾಂಕ್ರೀಟ್ ಗೋಡೆಗೆ ಬಡಿದು ಅಪಘಾತ ಸಂಭ ವಿಸಿದೆ. ಕಾಸರಗೋಡಿನಿಂದ ಮಂಗ ಳೂರಿಗೆ ತೆರಳುತ್ತಿದ್ದ ಬಸ್  ನಿನ್ನೆ ಮಧ್ಯಾಹ್ನ ನಿಯಂತ್ರಣ ತಪ್ಪಿ ಅಪ ಘಾತಕ್ಕೀಡಾಗಿದೆ. ಇದರಿಂದ ಬಸ್‌ನ ಮುಂಭಾಗ ಹಾನಿಗೊಂಡಿದ್ದು, ಚಾಲಕ ಹಾಗೂ ಕೆಲವು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.

ಇ.ಡಿ ತಂಡದ ಮೇಲೆ ದಾಳಿ: ಕೊಲೆಯತ್ನ ಪ್ರಕರಣ ದಾಖಲು; ತನಿಖೆ ವಿಶೇಷ ತಂಡಕ್ಕೆ

ತಿರುವನಂತಪುರ: ವಿವಾದಿತ ಕಲ್ಲಿದ್ದಲು ಗಣಿ ಕಂಪೆನಿ ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೆಲ್ಸ್ ಲಿಮಿಟೆಡ್ (ಸಿಎಂಆರ್‌ಎಲ್) ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ ವಿಜಯನ್‌ರ ಮಾಲಕತ್ವದ ಲ್ಲಿರುವ  ಬೆಂಗಳೂರು ಮೂಲಕ ಐಟಿ ಸಂಸ್ಥೆಯಾಗಿರುವ ಎಕ್ಸಾಲಾಜಿಕಲ್ ಸೊಲ್ಯೂಶನ್ಸ್ ನಡುವೆ ನಡೆದಿದೆ ಎನ್ನಲಾದ 1.72 ಕೋಟಿ ರೂ.ಗಳ  ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ತಿರುವನಂ ತಪುರದಲ್ಲಿರುವ ಬಾಡಿಗೆ ಮನೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಮೊನ್ನೆ ನಡೆಸಿದ ದಾಳಿ ಮತ್ತು ತಪಾಸಣೆ ಬಳಿಕ ಕಾರುಗಳಲ್ಲಿ …

ಕೇರಳದಲ್ಲಿ ಮುಂಗಾರು ಮಳೆ ಪ್ರವೇಶ ವಿಳಂಬ: ಜೂನ್ 11ರ ನಂತರವೇ ಮಳೆ ಚುರುಕು

ತಿರುವನಂತಪುರ: ಕೇರಳಕ್ಕೆ ಮುಂಗಾರು ಮಳೆ ಮೇ 25ರಂದು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿದ್ದರೂ ಅದರ ಇತ್ತೀಚೆಗಿನ ವಿಸ್ತೃತ ಶ್ರೇಣಿಯ ಮುನ್ಸೂಚನೆಯಲ್ಲಿ ಮೇ 28ರಿಂದ ಜೂನ್ 4ರವರೆಗೆ ಕೇರಳದಲ್ಲಿ ಬಹುತೇಕ ಒಣಹವೆಯೇ ಇರಲಿದೆ ಎಂದು ತೋರಿಸಿದೆ. ಜೂನ್ 4ರಿಂದ 11ರ ನಡುವೆ ಈ ಪರಿಸ್ಥಿತಿಯಲ್ಲಿ ಅತ್ಯಲ್ಪ ಸುಧಾರಣೆಯಷ್ಟೇ ನಿರೀಕ್ಷಿಸಲಾಗಿದೆ ಎಂದು ಇಲಾಖೆ ಹೇಳಿದೆ. ಹೊಸ ವಿಸ್ತೃತ ಶ್ರೇಣಿಯ ಮುನ್ಸೂಚನೆಯ ಪ್ರಕಾರ, ಜೂನ್ 11ರ ನಂತರವೇ ಮಳೆ ಚುರುಕಾಗುವ ಸಾಧ್ಯತೆ ಇದೆ. ಪಶ್ಚಿಮ …

ಲಲಿತ ನಿಧನ

ಕಾಸರಗೋಡು: ಬೀರಂತಬೈಲು ಕೊಳ್ಕೆಬೈಲು ಮಾತೃಛಾಯ ನಿಲಯದ ದಿ| ಶೀನ ಪೂಜಾರಿಯವರ ಪತ್ನಿ ಲಲಿತ (70) ನಿಧನ ಹೊಂದಿದರು. ಮೃತರು ಮಕ್ಕಳಾದ ಅಶೋಕ, ಕಿಶೋರ್, ಪ್ರಿಯ, ಚಿತ್ರ, ಅಳಿಯ-ಸೊಸೆಯಂದಿ ರಾದ ವಸಂತ, ಮಮತ, ಭವ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಅಳಿಯ ಹರೀಶ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.

ಅನಂತಪುರ ಕಾರ್ಖಾನೆಗಳಿಂದ ಸಮಸ್ಯೆ ಸೃಷ್ಟಿ:  ಅನಂತಪುರ ರಕ್ಷಾ ಸಮಿತಿಯಿಂದ ಸಮಾಲೋಚನಾ ಸಭೆ 31ರಂದು

ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪರಿಸರ ಸಹಿತ ಸಮೀಪದ ಸುಮಾರು 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಕಾರ್ಖಾನೆಗಳಿಂದ ವ್ಯಾಪಕ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ  ಈ ಬಗ್ಗೆ ಸಮಾಲೋಚನೆ ನಡೆಸಲು  ಮೇ 31ರಂದು ಅಪರಾಹ್ನ 3 ಗಂಟೆಗೆ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಪರಿಸರದಲ್ಲಿ ಸಭೆ ನಡೆಸಲು ಅನಂತಪುರ ರಕ್ಷಾಸಮಿತಿ ತೀರ್ಮಾನಿಸಿದೆ. ಕಾರ್ಖಾನೆಗಳಿಂದ ಹೊರ ಸೂಸುವ ದುರ್ನಾತದಿಂದ ಅನಂತಪುರ ಕ್ಷೇತ್ರದ  ಪಾವಿತ್ರ್ಯತೆಗೂ ಧಕ್ಕೆಯಾಗುತ್ತಿದೆ. ಸಮೀಪದ ಜಲಮೂಲಗಳು ಕಲುಷಿತಗೊಂಡಿವೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಶ್ರೀ …