ಅಕ್ರಮ ಹಣ ವರ್ಗಾವಣೆ: ಇ.ಡಿ ಮುಂದೆ ಹಾಜರಾದ  ವೀಣಾ ವಿಜಯನ್: ಬಿಗಿ ಭದ್ರತೆ

ಕೊಚ್ಚಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ಹಾಗೂ ಎಕ್ಸಾಲೋಜಿಕಲ್ ಎಂಬ ಸಂಸ್ಥೆಯ ಮಾಲಕಿಯಾಗಿರುವ ವೀಣಾ ವಿಜಯನ್ ಈ ಪ್ರಕರಣದ ವಿಚಾರಣೆಗಾಗಿ ಇಂದು ಬೆಳಿಗ್ಗೆ ಕೊಚ್ಚಿಯಲ್ಲಿರುವ ಡೈರೆಕ್ಟರ್ ಆಫ್ ಎನ್‌ಫೋರ್ಸ್‌ಮೆಂಟ್ (ಇ.ಡಿ) ಕಚೇರಿ ಮುಂದೆ ಹಾಜರಾದರು. ಬಳಿಕ ಉನ್ನತ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆಯ ವಿಷಯದಲ್ಲಿ ಹಲವು ಪ್ರಶ್ನೆಗಳನ್ನು ವೀಣಾರ ಮುಂದಿರಿಸಿ ಆ ಕುರಿತಾಗಿ ಅವರ ಹೇಳಿಕೆಯನ್ನು ದಾಖಲಿಸುವ ಕ್ರಮದಲ್ಲಿ ತೊಡಗಿದರು.   ಪತಿ ಮಾಜಿ ಸಚಿವ ಮೊಹಮ್ಮದ್ ರಿಯಾಸ್‌ರ ಜತೆ …

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಯಕ್ಷಗಾನ ಕಲಾವಿದ ಕೆ.ಸಿ. ಪಾಟಾಳಿ ಪಡುಮಲೆ ನಿಧನ

ಮುಳ್ಳೇರಿಯ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರಾಗಿದ್ದ ಯಕ್ಷಗಾನ ಕಲಾವಿದ, ಗುರು ಕೆ. ಚಂದ ಪಾಟಾಳಿ ಪಡುಮಲೆ (80) ಇಂದು ಬೆಳಿಗ್ಗೆ ನಿಧನ ಹೊಂದಿದರು.  ಸುಳ್ಯಪದವು ಬಳಿಯ ಪಡುಮಲೆಯಲ್ಲಿ ವಾಸವಾಗಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ದುಡಿದಿದ್ದರು. ಪಡುಮಲೆ ಚರಿತ್ರೆಯನ್ನು ಸಂಗ್ರಹಿಸಿ ಪ್ರಕಟಿಸಿದ್ದರು. ಹಲವಾರು ಪುಸ್ತಕಗಳನ್ನು ರಚಿಸಿದ ಇವರು ಓರ್ವ ಪ್ರಸಂಗಕರ್ತೃ ಕೂಡಾ ಆಗಿದ್ದರು. ಕೆ.ಸಿ. ಪಾಟಾಳಿ ಎಂದೇ ಪ್ರಸಿದ್ಧರಾಗಿದ್ದ ಇವರು ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ಸ್ಥಾಪಕ ಸದಸ್ಯ ಹಾಗೂ ಗೌರವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. …

ಆಸ್ಪತ್ರೆಗೆ ಹೋದ ಬಾಲಕಿ ನಾಪತ್ತೆ

ಉಪ್ಪಳ: ಆಸ್ಪತ್ರೆಗೆಂದು ತಿಳಿಸಿ ವಾಸಸ್ಥಳದಿಂದ ಹೋದ ಬಾಲಕಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮಜೀರ್ಪಳ್ಳ ಧರ್ಮನಗರ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಝಾಕಿಯಬಾನು (17) ನಾಪತ್ತೆಯಾದ ಬಾಲಕಿ. ಈಬಗ್ಗೆ ತಂದೆ ಮುಹಮ್ಮದ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ನಿನ್ನೆ ಬೆಳಿಗ್ಗೆ 9.30 ಕ್ಕೆ ಮಜೀರ್ಪಳ್ಳದ ಸರಕಾರಿ ಆಸ್ಪತ್ರೆಗೆಂದು ತಿಳಿಸಿ ಬಾಲಕಿ ಕ್ವಾರ್ಟರ್ಸ್‌ನಿಂದ ತೆರಳಿದ್ದು ಅನಂತರ ಮರಳಿ ಬಂದಿಲ್ಲವೆಂದು ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪಟ್ಲದಲ್ಲಿ ಪೊಲೀಸ್ ಕಾರ್ಯಾಚರಣೆ: ಕಾರಿನಲ್ಲಿ ಸಾಗಿಸುತ್ತಿದ್ದ 21,873 ಪ್ಯಾಕೆಟ್ ತಂಬಾಕು ಉತ್ಪನ್ನ ವಶ; ಓರ್ವ ಸೆರೆ

ಕಾಸರಗೋಡು: ಮಧೂರಿಗೆ ಸಮೀಪದ ಪಟ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರದಲ್ಲಿ ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ 21,873 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರು ಪಟ್ಲ ಲಕ್ಷಂವೀಡ್ ಕಾಲನಿಯ ಇಬ್ರಾಹಿಂ ಬಾದಿಶಾ ಕೆ. (36) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ. ತಂಬಾಕು ಉತ್ಪನ್ನ ಸಾಗಿಸುತ್ತಿರುವ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ವಿ. ವಿನೀಶ್ ಕುಮಾರ್‌ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ವಿದ್ಯಾನಗರ ಪೊಲೀಸ್ ಠಾಣೆಯ  …

ನಾಯಿಮರಿಗಳಿಗೆ ವಿಷಕೊಟ್ಟು ಹತ್ಯೆ

ನೀರ್ಚಾಲು: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಟ್ಟಡದ ಲ್ಲಿದ್ದ ನಾಲ್ಕು ನಾಯಿ ಮರಿಗಳನ್ನು ವಿಷಕೊಟ್ಟು ಕೊಂದಿರುವುದಾಗಿ ದೂರಲಾಗಿದೆ. ಬೇಳ ಚೌಕಾರ್‌ನಲ್ಲಿ ಖಾಸಗಿ ನರ್ಸಿಂಗ್ ಕಾಲೇಜಿಗಾಗಿ ನಿರ್ಮಿಸುವ ಕಟ್ಟಡದಲ್ಲಿದ್ದ ನಾಯಿ ಮರಿಗಳನ್ನು ವಿಷಕೊಟ್ಟು ಕೊಲ್ಲಲಾಗಿದೆ.  ಕಳೆದ ಆದಿತ್ಯವಾರ ಮುಂಜಾನೆ 2 ಗಂಟೆಯಿಂದ ನಿನ್ನೆ ಬೆಳಿಗ್ಗೆ 8.30ರ ಮಧ್ಯೆಗಿನ ಸಮಯದಲ್ಲಿ ನಾಯಿ ಮರಿಗಳನ್ನು ಯಾರೋ ಕೊಂದಿ ದ್ದಾರೆನ್ನಲಾಗಿದೆ.  ಮಹಿಳೆಯ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಅಶ್ಲೀಲ ದೃಶ್ಯ, ಸಂದೇಶ ಕಳುಹಿಸಿರುವುದಾಗಿ ಆರೋಪಿಸಿ ಎಸ್‌ಎಫ್‌ಐ ಜಿಲ್ಲಾ ಸೆಕ್ರೆಟರಿ ವಿರುದ್ಧ ಯುವತಿ ದೂರು: ಪಕ್ಷ ತನಿಖೆ ಆರಂಭ

ಕಾಸರಗೋಡು: ಎಸ್‌ಎಫ್‌ಐ ಕಾಸರಗೋಡು ಜಿಲ್ಲಾ ಸೆಕ್ರೆಟರಿ ತನ್ನ ಫೋನ್‌ಗೆ ನಿರಂತರ ಅಶ್ಲೀಲ ದೃಶ್ಯ, ಸಂದೇಶಗಳನ್ನು  ಕಳುಹಿಸುತ್ತಿರುವುದಾಗಿ ಆರೋಪಿಸಿ ಯುವತಿ ಸಿಪಿಎಂ ಜಿಲ್ಲಾ ಸೆಕ್ರೆಟರಿಗೆ ದೂರು ನೀಡಿದ್ದಾಳೆ. ಎಸ್‌ಎಫ್‌ಐ  ಏರಿಯಾ ಕಮಿಟಿ ಸದಸ್ಯೆಯಾದ ಯುವತಿ ದೂರು ನೀಡಿದ್ದು ಇದರಂತೆ ಪಕ್ಷ ತನಿಖೆ ಆರಂಭಿಸಿದೆ. ಎಸ್‌ಎಫ್‌ಐ ಜಿಲ್ಲಾ ಸೆಕ್ರೆಟರಿ ಕೆ. ಅನುರಾಗ್ ಯುವತಿಯ ಫೋನ್‌ಗೆ ಹಲವು ಬಾರಿ ಅಶ್ಲೀಲ ದೃಶ್ಯಗಳು ಹಾಗೂ ಸಂದೇಶಗಳನ್ನು ಕಳುಹಿಸಿರುವುದಾಗಿ ದೂರಲಾಗಿದೆ. ಇಂತಹ ದೃಶ್ಯ, ಸಂದೇಶಗಳನ್ನು ತನಗೆ ಕಳುಹಿಸಕೂಡದು ಎಂದು ಆರಂಭ ದಲ್ಲೇ ಆತನಿಗೆ ಯುವತಿ …

ಮಂಗಲ್ಪಾಡಿ ಪಂ. ವ್ಯಾಪ್ತಿಯ ವಿವಿಧ ಕಡೆ ಕಡಲ್ಕೊರೆತ ಭೀತಿ: ಕಳೆದ ವರ್ಷ ಸಮುದ್ರಪಾಲಾದ ರಸ್ತೆ ಇನ್ನೂ ನಾದುರಸ್ತಿ

ಉಪ್ಪಳ: ಮಳೆಗಾಲ ಆರಂಭಗೊಳ್ಳುತ್ತಿದ್ದoತೆ ಕಡಲ್ಕೊರೆತದ ಭೀತಿ ತೀರ ಪ್ರದೇಶದ ಜನರನ್ನು ಕಾಡುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಕಡಲ್ಕೊರೆತ ಉಂಟಾಗಿ ಸಮುದ್ರ ತೀರ ಪ್ರದೇಶದ ರಸ್ತೆಗಳು ಸಮುದ್ರ ಪಾಲಾಗಿತ್ತು. ಆದರೆ ಇದುವರೆಗೂ ರಸ್ತೆ ನಿರ್ಮಿಸದೆ ಇರುವುದರಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಪಂಚಾಯತ್‌ನ ಹನುಮಾನ್‌ನಗರ, ಶಿವಾಜಿನಗರ, ಕುದುಪುಳು, ಬಂಗ್ಲ, ಪೆರಿಂಗಡಿ, ಬೇರಿಕೆ ಸಹಿತ ವಿವಿಧ ಭಾಗಗಳಲ್ಲಿ ರಸ್ತೆಗಳು ಹಾನಿಗೊಂಡು ಸ್ಥಳೀಯ ಮೀನು ಕಾರ್ಮಿಕ ಕುಟುಂಬ ಗಳ ಸಂಚಾರಕ್ಕೆ …

ಪ್ರೀತಿ ನಿರಾಕರಣೆ: 16ರ ಬಾಲಕಿಗೆ ಇರಿದು ಕೊಲೆಗೆತ್ನ

ತಿರುವನಂತಪುರ: ಪ್ರೀತಿ ನಿರಾಕರಿಸಿದ ದ್ವೇಷದಿಂದ 16ರ ಬಾಲಕಿಯನ್ನು ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ತಿರುವನಂತಪುರ ಕನ್ಯಾಕುಳಂಗರ ನಿವಾಸಿಯಾದ 16ರ ಬಾಲಕಿ ಆಕ್ರಮಣಕ್ಕೆ ತುತ್ತಾಗಿದ್ದಾಳೆ. ಪನವೂರ್ ನಿವಾಸಿಯಾದ ಫಹದ್ ಇರಿದಿದ್ದಾನೆ. ಕಾರಿನಲ್ಲಿ ತಲುಪಿದ ಆರೋಪಿ ಬಾಲಕಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ್ದನು. ಕುತ್ತಿಗೆಗೆ ಗಾಯಗೊಂಡ ಬಾಲಕಿಯನ್ನು ಕೂಡಲೇ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ನೆಡುವೇಲಿ ಹೈಯರ್ ಸೆಕೆಂಡರಿ ಶಾಲೆಯ ದ್ವಿತೀಯ ವರ್ಷದ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದಾಳೆ ಬಾಲಕಿ. ಆರೋಪಿ ಪರಾರಿಯಾಗಿದ್ದಾನೆ. ವಟ್ಟಪ್ಪಾರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಭಕ್ತರ ಅಸಹನೀಯ ವರ್ತನೆ: ಕೊಟ್ಟಿಯೂರಿನಲ್ಲಿ ಆನೆಗಳ ಕಾದಾಟ

ಕೊಟ್ಟಿಯೂರ್: ಭಕ್ತಜನರ ಅಸಹನೀಯ ವರ್ತನೆ ಹಿನ್ನೆಲೆಯಲ್ಲಿ ಕೊಟ್ಟಿಯೂರಿನಲ್ಲಿ ಆನೆಗಳು ಪರಸ್ಪರ ಕಚ್ಚಾಟ ನಡೆಸಿರುವುದು ಆತಂಕಕ್ಕೆ ಕಾರಣವಾಯಿತು. ಕೊಟ್ಟಿಯೂರಿನ ಪಾರ್ವತಿ ದೇವಿಯ ವಿಗ್ರಹವನ್ನು ಹೊತ್ತೊಯ್ಯುವ ತಕ್ಕಾವಿಳ ವಿಷ್ಣುನಾರಾಯಣನ್ ಎಂಬ ಹೆಸರಿನ ಆನೆ ಹಾಗೂ ಪೆರುಮಾಳ್‌ರ ವಿಗ್ರಹವನ್ನು ಕೊಂಡೊಯ್ಯುವ ಕೊಡುಮನ್ ಶಿವ ಎಂಬ ಹೆಸರಿನ ಆನೆಗಳು ಪರಸ್ಪರ ಕಾದಾಡಿ ಗಾಯವುಂಟುಮಾಡಿಕೊಂಡಿವೆ. ಎರಡು ಆನೆಗಳನ್ನು ಕೊಟ್ಟಿಯೂರು ದೇವಸ್ಥಾನದ ಸಮೀಪ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ 9 ಗಂಟೆ ವೇಳೆ ಇಲ್ಲಿ ಆನೆಗಳು ಪರಸ್ಪರ ಕಾದಾಡಿಕೊಂಡಿವೆ. ಬಳಿಕ ಮಾವುತರು ತಲುಪಿ ಆನೆಗಳನ್ನು ಶಾಂತಗೊಳಿಸಿದ್ದಾರೆ. ಇಲ್ಲಿಗೆ …

ಕ್ಷಿಪ್ರ ರೈಲು ಯೋಜನೆಯಲ್ಲಿ ಕಾಸರಗೋಡಿಗೆ ಕೂಡಾ ಪರಿಗಣನೆ- ಸಚಿವ ಕೆ.ಎಂ. ಶಾಜಿ

ಕಾಸರಗೋಡು: ಅಧಿಕಾರ ಸ್ವೀಕರಿ ಸಿದ ಬಳಿಕ ಪ್ರಥಮ ಬಾರಿಗೆ ಕಾಸರ ಗೋಡಿಗೆ ತಲುಪಿದ ಸ್ಥಳೀಯಾಡಳಿತ ಇಲಾಖೆ ಸಚಿವ ಕೆ.ಎಂ. ಶಾಜಿಯ ವರನ್ನು ಕಾಸರಗೋಡು ಅತಿಥಿ ಮಂದಿರದಲ್ಲಿ ಕಾಸರಗೋಡು ಚೇಂಬರ್ ಆಫ್ ಕಾಮರ್ಸ್‌ನ ಆಶ್ರಯದಲ್ಲಿ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಅವರು ಕ್ಷಿಪ್ರ ರೈಲು ಸಾಕಾರಗೊಳ್ಳುವಾಗ ಅದರಲ್ಲಿ ಕಾಸರ ಗೋಡು ಕೂಡಾ ಸೇರಿಕೊಂಡಿರುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಬೇಡವೆಂದು  ನುಡಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲಾ ಸ್ತರಗಳಲ್ಲಿರುವ ವ್ಯಕ್ತಿಗಳ ಅಭಿ ಪ್ರಾಯವನ್ನು ಸಂಯೋಜಿಸಿಕೊಂಡು ಯೋಜನೆ ಸಿದ್ಧಪಡಿಸಲಾಗುವು ದೆಂದು ಅವರು ನುಡಿದರು. …