ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ: ಕಾಸರಗೋಡಿನ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್

ತಿರುವನಂತಪುರ: ಹತ್ತು ವರ್ಷಗಳ ಬಳಿಕ ಪ್ರಚಂಡ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಿದ ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್‌ನ್ನು ಹಣಕಾಸು ಖಾತೆಯ ಹೊಣೆಗಾರಿಕೆಯನ್ನು ಹೊಂದಿರುವ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಂದು ವಿಧಾನಸಭೆಯಲ್ಲಿ ಮಂಡಿಸಿದರು.  ರಾಜ್ಯದಲ್ಲಿ  ಅತೀವ ಹಿಂದುಳಿದಿರುವ ಕಾಸರಗೋಡು, ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಜ್ಯಾರಿಗೊಳಿಸಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಅರ್ಹರಾದ ಎಲ್ಲಾ ಸವಲತ್ತುಗಳನ್ನ್ನು ಜ್ಯಾರಿಗೊಳಿಸಲಾಗುವುದು ಮಾತ್ರವಲ್ಲದೆ ಎಂಡೋಸಲ್ಫಾನ್ ಸಂತ್ರಸ್ತರನ್ನು ಸರಕಾರವೇ   ವಹಿಸಿಕೊಳ್ಳಲಿದೆ. ಕಾಸರಗೋಡಿನ ವೈದ್ಯಕೀಯ ಕಾಲೇಜು ನಿರ್ಮಾಣ ಕೆಲಸಗಳನ್ನು ಶೀಘ್ರ …

ಎಲ್ಲೆಲ್ಲೂ ಅಭಿವೃದ್ಧಿಯೇ ಮೂಲಮಂತ್ರ: ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ರಸ್ತೆ ಇಲ್ಲದ ಬಡ ಕುಟುಂಬ ಅಧಿಕಾರಿಗಳ ಕಣ್ಣಿಂದ ಮರೆ

ಮುಳ್ಳೇರಿಯ: ಅಭಿವೃದ್ಧಿಯೇ ಮೂಲಮಂತ್ರವಾಗಿ ವಿವಿಧ ರಾಜಕೀಯ ಪಕ್ಷಗಳು ಘೋಷಿಸಿಕೊಳ್ಳುತ್ತಿರುವಾಗ ಅಭಿವೃದ್ಧಿ ಬಿಟ್ಟು ಮೂಲಭೂತ ಸೌಕರ್ಯವೇ ಇಲ್ಲದೆ ಕೆಲವರು ಸಂಕಷ್ಟಪಡುವಾಗ ಅಧಿಕಾರಿವರ್ಗ ಮೌನವಾಗಿರುವುದು ಜನಸಾಮಾನ್ಯರಲ್ಲಿ ರೋಷಕ್ಕೆ ಕಾರಣವಾಗುತ್ತಿದೆ. ಕಾರಡ್ಕ ಪಂಚಾಯತ್‌ನ 7ನೇ ವಾರ್ಡ್ ವ್ಯಾಪ್ತಿಯ ಮಾಯಿಲಂಕೋಟೆ ಬಳಿಯ ಕೆಲವು ಕುಟುಂಬಗಳು ಈಗಲೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಕುಂಟಾರು ಶಾಲೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದ ಮಾಯಿಲಂಕೋಟೆಗೆ ಈಗಲೂ ರಸ್ತೆ ಸೌಕರ್ಯವಿಲ್ಲದ ಕಾರಣ ಇಲ್ಲಿಂದ ಅಸೌಖ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಜನರು ಹೊತ್ತೊಯ್ಯಬೇಕಾಗುತ್ತಿದೆ. ಇಲ್ಲಿನ ಸುಮಾರು 60 …

ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಯುವಕನಿಗೆ ಗಂಭೀರ

ಕುಂಬಳೆ: ಇಲ್ಲಿನ ದೇವಿನಗರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕನೋರ್ವ ಗಂಭೀರ ಗಾಯಗೊಂಡಿದ್ದಾರೆ. ಮೊಗ್ರಾಲ್ ನಾಂಗಿ ಕಡಪ್ಪುರದ ರಾಸಿಕ್ (19) ಗಾಯಗೊಂಡಿದ್ದು, ಇವರನ್ನು ಚೆಂಗಳ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ 5.30ರ ವೇಳೆ ಅಪಘಾತ ವುಂಟಾಗಿದೆ. ರಾಸಿಕ್ ಕುಂಬಳೆಯಿಂದ ಕೊಪ್ಪರ ಬಜಾರ್ ಭಾಗಕ್ಕೆ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರು. ಇವರು ದೇವಿನಗರಕ್ಕೆ ತಲುಪಿದಾಗ ಕಾಸರಗೋಡು ಭಾಗದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಸರ್ವೀಸ್ ರಸ್ತೆಗೆ ತಲುಪಿದ ಕಾರು ಢಿಕ್ಕಿ ಹೊಡೆದು ಅಪಘಾತ ವುಂಟಾಗಿದೆ ಎಂದು …

ನಿಲ್ಲಿಸಿದ್ದ ಲಾರಿಗಳಿಂದ ಕಳವಿಗೀಡಾದ ಬ್ಯಾಟರಿಗಳ ಪೈಕಿ ಒಂದು ಗುಜರಿ ಅಂಗಡಿಯಲ್ಲಿ ಪತ್ತೆ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಕಳವಿಗೀಡಾದ ಬ್ಯಾಟರಿಗಳ ಪೈಕಿ ಒಂದನ್ನು ಆರೋಪಿಯ ಸಹಾಯದಿಂದ ಕುಂಬಳೆ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ನಗರದ ಪ್ರೆಸ್ ಕ್ಲಬ್‌ಬಳಿಯ ಗುಜರಿ ಅಂಗಡಿಯಿಂದ ಒಂದು ಬ್ಯಾಟರಿ ಪತ್ತೆಯಾಗಿದೆ. ಲಾರಿಗಳಿಂದ ಬ್ಯಾಟರಿ ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ಆಲಂಪಾಡಿ ತೈವಳಪ್ಪು ನಿವಾಸಿ ಶಮೀರ್ ಯಾನೆ ತೈವಳಪ್ಪು ಶಮೀರ್ (50) ಎಂಬಾ ತನನ್ನು ಪೊಲೀಸರು  ಮಾಹಿತಿ ಸಂಗ್ರಹಕ್ಕಾಗಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಬಳಿಕ  ಈತನನ್ನು  ತನಿಖೆಗೊಳಪಡಿಸಿದಾಗ ಒಂದು ಬ್ಯಾಟರಿಯನ್ನು ಕಾಸರಗೋಡಿನ …

ಕೊಚ್ಚಿ ಬಂದರಿಗೆ ಬಂದ ಹಡಗಿನಲ್ಲಿ ‘ಐ ಲವ್ ಯೂ ಪಾಕಿಸ್ತಾನ್’ ಬರಹ ಪತ್ತೆ: ಸಮಗ್ರ ತನಿಖೆ ಆರಂಭ

ಕೊಚ್ಚಿ: ಕೊಚ್ಚಿ ಶಿಪ್ ಯಾರ್ಡ್‌ಗೆ ದುರಸ್ತಿ ಕೆಲಸಕ್ಕಾಗಿ ಬಂದ ಸರಕು ಹಡಗಿನಲ್ಲಿ ಐ ಲವ್ ಯೂ ಪಾಕಿಸ್ತಾನ್ ಎಂಬ ಬರಹ ಪತ್ತೆಯಾಗಿದ್ದು, ಆ ಬಗ್ಗೆ ಕೊಚ್ಚಿ ಸಿಟಿ ಪೊಲೀಸರು ಮತ್ತು ಕೇಂದ್ರ ಗುಪ್ತಚರ ವಿಭಾಗ ಸಮಗ್ರ ತನಿಖೆ ಆರಂಭಿಸಿದೆ. ಈ ಹಡಗಿನ ಕುರಿತಾದ ಪೂರ್ಣ ಮಾಹಿತಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂಗ್ರಹಿಸಿ ಇನ್ನೊಂದೆಡೆ ಸಮಾನಾಂತರ ತನಿಖೆ ನಡೆಸುತ್ತಿದ್ದಾರ. ಈ ಹಡಗಿನ ಖಾಯಂ ಹಾಗೂ ತಾತ್ಕಾಲಿಕ ಸಿಬ್ಬಂದಿಗಳು, ಅದರ ಗುತ್ತಿಗೆದಾರರು ಹಾಗೂ ಹಡಗು ಸಂಸ್ಥೆಯ ಮಾಲಕರ ಹೇಳಿಕೆಗಳನ್ನು …

ಉಪ್ಪಳ ಗ್ರಾಮ ಕಚೇರಿಗೆ ವಿಜಿಲೆನ್ಸ್ ದಾಳಿ: ಭೂಮಿ ತೆರಿಗೆ ಪಾವತಿಗೆ ತಲುಪಿದ ವ್ಯಕ್ತಿಯಿಂದ 5000 ರೂ. ಲಂಚ ಪಡೆಯುತ್ತಿದ್ದ ನೌಕರನ ಬಂಧನ

ಉಪ್ಪಳ: 5000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಕಚೇರಿ ನೌಕರನನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕೋಡಿಬೈಲು ನಿವಾಸಿಯೂ ಉಪ್ಪಳ ಗ್ರೂಪ್ ವಿಲ್ಲೇಜ್ ಆಫೀಸ್‌ನ ಕಾಶ್ವಲ್ ಸ್ವೀಪರ್ ಆಗಿರುವ ಕೆ. ಶಿವಪ್ರಸಾದ್ (42) ಸೆರೆಗೀಡಾದ ವ್ಯಕ್ತಿ.  ಈತನನ್ನು ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋ ಡಿವೈಎಸ್ಪಿ ಉಣ್ಣಿಕೃಷ್ಣನ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಬೆಳಿಗ್ಗೆ ಉಪ್ಪಳ ಗ್ರಾಮ ಕಚೇರಿಯಲ್ಲಿ ವಿಜಿಲೆನ್ಸ್ ತಪಾಸಣೆ ನಡೆಸಿದೆ. ಕ್ಷೇತ್ರವೊಂದಕ್ಕೆ ಭಕ್ತರೊಬ್ಬರು ಉಚಿತವಾಗಿ ನೀಡಿದ ಭೂಮಿಯ ತೆರಿಗೆ ಕಮಿಟಿ ಹೆಸರಲ್ಲಿ ಪಾವತಿಸಲು …

ಎಡಿಎಂ ಆಗಿ ಉದಯಕುಮಾರ್ ಪೆರ್ಲ ಅಧಿಕಾರ ಸ್ವೀಕಾರ

ಕಾಸರಗೋಡು: ಜಿಲ್ಲಾ ಹೆಚ್ಚುವರಿ ದಂಡನಾ ಧಿಕಾರಿ (ಎಡಿಎಂ)ಯಾಗಿ ಉದಯಕುಮಾರ್ ಪೆರ್ಲ ಶ್ರುತಿ ಕೆ.ವಿ ಅವರಿಂದ ಅಧಿಕಾರ ಸ್ವೀಕರಿಸಿದರು. 1997ರಲ್ಲಿ ಕಾಸರಗೋಡು ಭೂಸ್ವಾಧೀನ ಕಚೇರಿಯಲ್ಲಿ ಎಲ್.ಡಿ. ಕ್ಲರ್ಕ್ ಆಗಿ ಸರಕಾರಿ ಸೇವೆಗೆ ಸೇರ್ಪಡೆಯಾ ದರು. ಬಳಿಕ ಕಾಸರಗೋಡು ತಾಲೂಕು ಕಚೇರಿಯಲ್ಲಿ ಸೀನಿಯರ್ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿದರು. 2006ರಲ್ಲಿ ಭಡ್ತಿ ಹೊಂದಿ ಗ್ರಾಮಾಧಿಕಾರಿಯಾಗಿ ಶೇಣಿ, ಆದೂರು, ಬದಿಯಡ್ಕ, ಕುಂಬ್ಡಾಜೆ ಹಾಗೂ ಬೇಳ ಗ್ರಾಮಗಳಲ್ಲಿ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.2014ರಲ್ಲಿ ಮತ್ತೊಮ್ಮೆ ಭಡ್ತಿ ಹೊಂದಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೂನಿಯರ್ ಸೂಪರಿಂಟೆAಡೆAಟ್ ಆಗಿ …

ಏದಾರ್ ಎಸ್‌ಸಿ ಉನ್ನತಿಯಲ್ಲಿ ಅಯ್ಯಂಗಾಳಿ ಸ್ಮೃತಿ ದಿನಾಚರಣೆ

ಪೈವಳಿಕೆ: ಅಯ್ಯಂಗಾಳಿ ಸಂಸ್ಮರಣೆ ಅಂಗವಾಗಿ ಪೈವಳಿಕೆ ಪಂಚಾಯತ್ ಎಸ್ ಸಿ ಮೋರ್ಚಾ ಸಮಿತಿಯಿಂದ ಏದಾರ್ ಎಸ್‌ಸಿ ಉನ್ನತಿಯಲ್ಲಿ ಸ್ಮೃತಿ ದಿನಾಚರಿಸಲಾಯಿತು. ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ ಕಯ್ಯಾರ್, ಬಿಜೆಪಿ ಪೈವಳಿಕೆ ಪಂಚಾಯತ್ ಅಧ್ಯಕ್ಷ ಸತ್ಯ ಶಂಕರ ಭಟ್ ಮಲಿವ್ ಅಧ್ಯಕ್ಷತೆ ವಹಿಸಿದರು. ಎಸ್ ಸಿ ಮೋರ್ಚಾ ಮಂಡಲ ಅಧ್ಯಕ್ಷ ರಾಮ ಏದಾರ್, ಮಂಡಲ ಕಾರ್ಯದರ್ಶಿ ರಮೇಶ್ ಎ.ಎಸ್, ಜಿಲ್ಲಾ ಕಾರ್ಯದರ್ಶಿ ಸಂದೇಶ್ ಪೆರ್ವೋಡಿ, ಕೃಷ್ಣರಾಜ್ ಅಟ್ಟೆಗೋಳಿ ಮಾತನಾಡಿದರು. ಅಯ್ಯಂಗಾಳಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. …

ರವಿ ನಾಯ್ಕಾಪುರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ: ಮುಂಬೈಯಲ್ಲಿ 28ರಂದು ಪ್ರದಾನ

ಕಾಸರಗೋಡು: ನಿರೂಪಣಾ ಕ್ಷೇತ್ರದ ಸಾಧನೆ, ಸಾಮರ್ಥ್ಯವನ್ನು ಪರಿಗಣಿಸಿ ಮುಂಬೈ ಅಂಧೇರಿ ಕರ್ನಾಟಕ ಸಂಘ ನಿರೂಪಕ, ಸಂಘಟಕ ರವಿ ನಾಯ್ಕಾಪು ಅವರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ ಘೋಷಿಸಿದೆ. ಈ ತಿಂಗಳ 28ರಂದು ಮುಂಬೈ ಕುರ್ಲಾ ಬಂಟರ ಭವನದಲ್ಲಿ ಜರಗಲಿರುವ  ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘದ ಸಂಸ್ಥಾಪಕ ಕೃಷ್ಣ ಬಿ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಕಾರ್ಯಕ್ರಮಗಳ ನಿರೂಪಕರಾಗಿ, ಪತ್ರಕರ್ತ, ಸಂಘಟಕರಾಗಿರುವ ಇವರು ಐದು ಪುಸ್ತಕಗಳನ್ನು ರಚಿಸಿದ್ದಾರೆ. ಪತ್ರಿಕಾ ದೃಶ್ಯ ಮಾಧ್ಯಮಗಳಲ್ಲೂ, …

ನಾಡೋಜ ಕಯ್ಯಾರ ಕಿಂಞಣ್ಣರೈ ಜನ್ಮದಿನಾಚರಣೆ, ಪ್ರಶಸ್ತಿ ಪ್ರದಾನ 21ರಂದು

ಪೈವಳಿಕೆ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದಲ್ಲಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಈ ತಿಂಗಳ 21ರಂದು ಬೆಳಿಗ್ಗೆ ೯ರಿಂದ ಕಯ್ಯಾರು ಕೊಕ್ಕಚಾಲು ಕಾಮಿಲ್ ಶಾಲಾ ವಠಾರ ದಲ್ಲಿ ನಡೆಯಲಿದೆ. ಇದೇ ವೇಳೆ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಟಿಎಸ್ …