ಜ್ವರ, ನ್ಯುಮೋನಿಯಾ ಬಾಧಿಸಿ ಯುವತಿ ಮೃತ್ಯು

ಬದಿಯಡ್ಕ: ಜ್ವರ ಹಾಗೂ ನ್ಯುಮೋನಿಯ ಬಾಧಿಸಿ  ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಕುಂಬ್ಡಾಜೆ ಮಲ್ಲಮೂಲೆ ನಿವಾಸಿಯೂ,  ಬದಿಯಡ್ಕ ಚೆನ್ನಾರಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ  ರೋಹಿಣಿ (35) ಮೃತಪಟ್ಟ ದುರ್ದೈವಿ. ತೀವ್ರ ಜ್ವರ ಹಾಗೂ ಕೆಮ್ಮು ಅನುಭವಗೊಂಡ ಇವರು ಒಂದು ವಾರ ಹಿಂದೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆ ಜ್ವರ ಮತ್ತೆ ಉಲ್ಭಣಗೊಂಡು  ಉಸಿರಾಟ ಸಮಸ್ಯೆ ಉಂಟಾಗಿತ್ತು. ಕೂಡಲೇ ಬದಿಯ ಡ್ಕದ ಆಸ್ಪತ್ರೆಗೂ, ನಂತರ ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ …

ಕೋಳಿ ಅಂಕ: 5 ಮಂದಿ ಸೆರೆ

ಉಪ್ಪಳ:  ಮೂಡಂಬೈಲು ಬೆಜ್ಜ ದೈವಸ್ಥಾನ ಬಳಿ ನಿನ್ನೆ ಸಂಜೆ ಕೋಳಿ ಅಂಕದಲ್ಲಿ ನಿರತರಾಗಿದ್ದ  5 ಮಂದಿ ಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕೋಳಿ ಹಾಗೂ 3000 ರೂ. ವಶಪಡಿಸಲಾಗಿದೆ.  ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ರಸ್ತೆ ಬಳಿಯ ಪ್ರವೀಣ್ ಕುಮಾರ್ (40), ಉದ್ಯಾವರ ಮಾಡ ಕ್ಷೇತ್ರ ಬಳಿಯ ರವಿ (51),ಉಳ್ಳಾಲ ಚೆಂಬುಗುಡ್ಡೆ ಫಾತಿಮ ಮಂಜಿಲ್‌ನ ಅಬ್ದುಲ್ ರೌಫ್ (50), ತಲಪಾಡಿ ದೇವಿಪುರ ಕ್ಷೇತ್ರ ರಸ್ತೆಯ ಸತೀಶ್ ಶೆಟ್ಟಿ (48), ಕೋಟೆಕಾರ್ ಮಾಡೂರು ನಿವಾಸಿ ಅಶೋಕ …

ಕುಸಿದ ಮಳೆ: ಬರಿದಾದ ಅಣೆಕಟ್ಟುಗಳು: ರಾಜ್ಯದಲ್ಲಿ ಮುಕ್ಕಾಲುಗಂಟೆ ವಿದ್ಯುತ್ ನಿಯಂತ್ರಣ

ಕಾಸರಗೋಡು: ಮುಂಗಾರು ಮಳೆ ಕೈಕೊಟ್ಟಿರುವುದರಿಂದಾಗಿ ರಾಜ್ಯದ  ಜಲವಿದ್ಯುತ್ ಯೋಜನೆಗಳ ಅಣೆಕಟ್ಟು ಗಳಲ್ಲಿ ನೀರಿನ ಮಟ್ಟ ಗಣನೀ ಕುಸಿದಿರುವುದರಿಂದ ವಿದ್ಯುತ್ ಅದು ಉತ್ಪಾದನೆಯನ್ನೂ ಕುಸಿಯುವಂತೆ ಮಾಡಿದೆ. ಇದರಿಂದಾಗಿ ರಾಜ್ಯದಲ್ಲಿ ದೈನಂದಿನ 45 ನಿಮಿಷಗಳ ತನಕ ವಿದ್ಯುತ್ ನಿಯಂತ್ರಣ ಹೇರಲು ರಾಜ್ಯ ವಿದ್ಯುನ್ಮಂಡಳಿ ತೀರ್ಮಾನಿಸಿದೆ. ಈಗ ಸಾಧಾರಣವಾಗಿ 15ರಿಂದ 30 ನಿಮಿಷಗಳ ತನಕ ವಿದ್ಯುತ್ ನಿಯಂತ್ರಣ ಏರ್ಪಡಿಸಲಾಗುತ್ತಿದೆ. ಇದನ್ನು 45 ನಿಮಿಷಗಳಿಗೆ ಏರಿಸಲು ಮಂಡಳಿ ತೀರ್ಮಾನಿಸಿದೆ. ಅಂದರೆ ಒಂದೇ ಬಾರಿ  ನಿಯಂತ್ರಣ ಹೇರಲಾಗು ವುದಿಲ್ಲ. ಅದರ ಬದಲು ಹಗಲು ಮತ್ತು …

ಮೊಬೈಲ್ ಫೋನ್ ಕವರ್‌ನೊಳಗೆ ಎಂಡಿಎಂಎ ಬಚ್ಚಿಟ್ಟು ಸಾಗಾಟ: ಯುವಕ ಸೆರೆ

ಕುಂಬಳೆ: ಮುಂಜಾನೆ ಹೊತ್ತಿನಲ್ಲಿ ರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಯುವಕನನ್ನು ಪೊಲೀಸರು ತಪಾಸಣೆ ನಡೆಸಿದಾಗ ಮೊಬೈಲ್ ಕವರ್‌ನೊಳಗೆ ಬಚ್ಚಿಟ್ಟಿದ್ದ ಮಾದಕವಸ್ತು ಪತ್ತೆಯಾಗಿದೆ. ಈ ಸಂಬಂಧ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಬಳಿಯ ಕೆ. ಬಿನೀಶ್ (29) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈತನ ಕೈಯಿಂದ 0.92 ಗ್ರಾಂ ಎಂ.ಡಿ.ಎಂ.ಎ ವಶಪಡಿಸಲಾಗಿದೆ. ನಿನ್ನೆ ಮುಂಜಾನೆ ೧ ಗಂಟೆಗೆ ನಾರಾಯಣಮಂಗಲ ರಸ್ತೆ ಬದಿ ಬೈಕ್ ನಿಲ್ಲಿಸಿ ಈತ ಕುಳಿತಿದ್ದನು. ಗಸ್ತು ನಡೆಸುತ್ತ ಅಲ್ಲಿಗೆ ಬಂದ ಪೊಲೀಸರನ್ನು ಕಂಡು ಬಿನೀಶ್ …

ಹೆಂಚಿನ ಮನೆ ಕುಸಿತ: ಕುಟುಂಬ ಅಪಾಯದಿಂದ ಪಾರು

ಬದಿಯಡ್ಕ: ಹೆಂಚಿನ ಮನೆಯೊಂದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಕುಟುಂಬ ಅಪಾಯದಿಂದ ಪಾರಾಗಿದೆ. ಪಳ್ಳತ್ತಡ್ಕ ನಿವಾಸಿ ಆಟೋರಿಕ್ಷಾ ಚಾಲಕನಾಗಿರುವ ಐತ್ತಪ್ಪ ನಾಯ್ಕ ಎಂಬವರ ಮನೆ ನಿನ್ನೆ ರಾತ್ರಿ 8 ಗಂಟೆಗೆ ಕುಸಿದು ಬಿದ್ದಿದೆ. ಮಳೆ ಸುರಿಯುತ್ತಿದ್ದಂತೆ ಮನೆ ಕುಸಿದಿದ್ದು, ಶಬ್ದ ಕೇಳಿ ಐತ್ತಪ್ಪ ನಾಯ್ಕ ಹಾಗೂ ಪತ್ನಿ ಹೊರಗೆ ಓಡಿದ್ದಾರೆ. ಇದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಮನೆ ಇದಾಗಿದೆ. ಇದರಿಂದ ಇವರಿಗೆ ಹೊಸ ಮನೆ ಪಂಚಾಯತ್‌ನಿಂದ ಮಂಜೂರಾಗಿದ್ದು, ಅದರ ಹಣ ಪೂರ್ತಿ ಲಭಿಸದುದರಿಂದ …

ಇಂಜಿನ್ ಕೆಟ್ಟು ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡ ದೋಣಿ: ಕೋಸ್ಟಲ್ ಪೊಲೀಸರಿಂದ ಕಾರ್ಮಿಕರ ರಕ್ಷಣೆ

ಉಪ್ಪಳ: ಮೀನುಗಾರಿಕೆಗೆ ತೆರಳಿ ಹಿಂತಿರುಗುತ್ತಿರುವ ಮಧ್ಯೆ ಇಂಜಿನ್ ಹಾನಿಗೊಂಡು ದೋಣಿ ಸಮುದ್ರ ಮಧ್ಯೆ ಸಿಲುಕಿಕೊಂಡ ಘಟನೆ ನಡೆದಿದ್ದು, ನಾಲ್ಕು ಮೀನು ಕಾರ್ಮಿಕರನ್ನು ಫಿಶರೀಸ್ ಇಲಾಖೆ, ಕೋಸ್ಟಲ್ ಪೊಲೀಸರು ಸೇರಿ ಪಾರು ಮಾಡಿದ್ದಾರೆ. ನಿನ್ನೆ ಮುಂಜಾನೆ ಉಪ್ಪಳ ಮುಸೋಡಿಯಿಂದ ಮೀನುಗಾರಿಕೆಗೆಂದು ತೆರಳಿದ ಕಾರ್ಮಿಕರು ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ಉಪ್ಪಳ ಶಾರದಾನಗರ ನಿವಾಸಿ ವಿಕ್ರಮ್ ಎಂ. ಉಚ್ಚಿಲ್ ಎಂಬವರ ಮಾಲಕತ್ವದ ಗುತ್ತಿಯಮ್ಮ ಭಗವತಿ ಎಂಬ ಹೆಸರಿನ ಇಂಜಿನ್ ಅಳವಡಿಸಿದ ದೋಣಿ ಮಂಜೇಶ್ವರದಿಂದ ಸುಮಾರು ೧೦ ನೋಟಿಕಲ್ ಮೈಲು ದೂರದಲ್ಲಿ ಹಾನಿಗೀಡಾಗಿತ್ತು. …

ಕುಂಬಳೆ-ಕಂಚಿಕಟ್ಟೆ ರಸ್ತೆಯಲ್ಲಿ ಸಂಚಾರಕ್ಕೆ ಆತಂಕ: ಒಂದೆಡೆ ರಸ್ತೆಯಲ್ಲಿ ಹೊಂಡ ಸೃಷ್ಟಿ ಇನ್ನೊಂದೆಡೆ ಮಾನವ ನಿರ್ಮಿತ ಹೊಂಡ

ಕುಂಬಳೆ: ಕುಂಬಳೆಯಿಂದ ಕೊಡ್ಯಮ್ಮೆ ಭಾಗಕ್ಕೆ ತೆರಳುವ ರಸ್ತೆ ಮಧ್ಯೆ ಕಂಚಿಕಟ್ಟೆಯಲ್ಲಿ ಆಳದ ಗುಹೆ ಪ್ರತ್ಯಕ್ಷಗೊಂಡಿದೆ. ಡಾಮರು ರಸ್ತೆಯ ಮಧ್ಯೆ ಹೊಂಡ ಸೃಷ್ಟಿಯಾಗಿದ್ದು, ಅದು ಒಳಗೆ ಆಳವಾಗಿ ಕಾಣಿಸುತ್ತಿದೆ. ಇದರಿಂದ ಇಕ್ಕಟ್ಟಾದ ಈ ರಸ್ತೆಯಲ್ಲಿ ಹೊಂಡ ಸೃಷ್ಟಿಯಾಗಿರುವುದು  ಅಪಾಯ ಭೀತಿಯೊಡ್ಡುತ್ತಿದೆ. ಇದರಿಂದ ಸ್ಥಳೀ ಯರು ಅಲ್ಲಿ ಕಲ್ಲುಗಳನ್ನಿರಿಸಿ ಮುನ್ಸೂ ಚನೆ ನೀಡದ್ದಾರೆ. ಈ ಹೊಂಡವನ್ನು ಶೀಘ್ರ ಮುಚ್ಚದಿದ್ದಲ್ಲಿ ರಸ್ತೆ ಪೂರ್ಣ ಹೊಂಡವಾಗಿ ಮಾರ್ಪಾಡುಗೊಳ್ಳಲಿ ವೆಯೆಂದು ಸ್ಥಳೀಯರು ಹೇಳುತ್ತಿದ್ದಾರೆ. ಇದೇ ರಸ್ತೆಯಲ್ಲಿ ಇನ್ನೊಂದೆಡೆ ಮಾನವನ ಕೆಲಸದಿಂದ ರಸ್ತೆ ಹಾನಿಗೀ ಡಾಗಿದ್ದು, …

ನಾಡು ಅಭಿವೃದ್ಧಿಗಾಗಿ ಕಾಯುತ್ತಿರುವಾಗ ರೀಲ್ಸ್‌ನಲ್ಲಿ ಸಕ್ರಿಯರಾದ ಪಂ. ಜನಪ್ರತಿನಿಧಿಗಳು: ಕಾರ್ಯಕರ್ತರಿಂದ ತೀವ್ರ ಟೀಕೆ

ಕುಂಬಳೆ: ಜನರು ಉತ್ತಮ ನಿರೀಕ್ಷೆಯಿರಿಸಿ ಜನಪ್ರತಿನಿಧಿಗಳನ್ನು ಆಯ್ಕೆಮಾಡಿ ಉತ್ತಮ ಆಡಳಿತಕ್ಕಾಗಿ ಕಾದು ನಿಂತಿದ್ದರೆ ಜನಪ್ರತಿನಿಧಿಗಳಿಗೆ ಅದೇನು ಸಂಭವಿಸಿತು ಎಂದು ತಿಳಿಯದೆ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕುಂಬಳೆ ಪಂಚಾಯತ್ ಹಾಗೂ ಮಂಜೇಶ್ವರ ವಲಯದ ಜನಪ್ರತಿನಿ ಧಿಗಳ ನಡವಳಿಕೆಯಿಂದ ಅವರ ಬೆಂಬಲಿಗರು ಕೂಡಾ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಜನ ಪ್ರತಿನಿಧಿಗಳು ಈಗ ರೀಲ್ಸ್‌ನಲ್ಲೇ ಮುಳುಗಿದ್ದಾರೆ ಎಂದು ಲೀಗ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಭಿವೃದ್ಧಿ ವಿಷಯಗಳ ಬಗ್ಗೆ ಕೇಳಿದರೆ ಜನಪ್ರತಿನಿಧಿಗಳಿಂದ ಯಾವುದೇ ಉತ್ತರವಿಲ್ಲ. ಇದು ಕುಂಬಳೆ ಪಂಚಾಯತ್‌ನ ಮುಸ್ಲಿಂ ಲೀಗ್‌ನಲ್ಲಿ ಹೊಸ ವಿವಾದ  ಹುಟ್ಟುಹಾಕಿದೆ. …

ರಾಜಕೀಯ ಕಲಿಕೆ ನಿರಂತರ ಪ್ರಕ್ರಿಯೆ- ಕೆ. ರಂಜಿತ್

ಪೈವಳಿಕೆ : ಬಿಜೆಪಿ ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷ. ಪಕ್ಷದ ಸಿದ್ದಾಂತ, ತತ್ವ ಜೊತೆಗೆ ಚರಿತ್ರೆ ಮತ್ತು ಇತಿಹಾಸ ಹಾಗೂ ಪಕ್ಷದ ಮುಂದಿನ ಯೋಜನೆಗಳನ್ನು ಯುವ ಕಾರ್ಯಕರ್ತರು ಕಲಿತು ಪಕ್ಷದ ಕಾರ್ಯ ಚಟುವಟಿಕೆ ಮಾಡಿದರೆ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಹೇಳಿದರು.ಬಿಜೆಪಿ ಮಂಜೇಶ್ವರ ಮಂಡಲ ಪ್ರಶಿಕ್ಷಣ ಶಿಬಿರ ಸಜಂಕಿಲ ಆವಳ ಮಠ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ಗೈದರು.ಜಿಲ್ಲಾ …

ಅಂತಾರಾಷ್ಟ್ರೀಯ ಮಾದಕವಿರೋಧಿ ದಿನದಂಗವಾಗಿ ಜಾಗೃತಿ ಜಾಥಾ

ಮಂಜೇಶ್ವರ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗ ವಾಗಿ, ಲಹರಿಮುಕ್ತ ಸಮಾಜ ನಿರ್ಮಾ ಣದ ಸಂಕಲ್ಪದೊAದಿಗೆ ಮಂಜೇಶ್ವರ ಪೊಲೀಸ್ ಠಾಣೆ ಮತ್ತು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ತೂಫಾನ್ ದಿ ನಾರ್ಕೋ ಹಂಟ್’ ಅಭಿಯಾನ ಯಶಸ್ವಿಯಾಗಿ ನಡೆಯಿತು. ಉಪ್ಪಳದಿಂದ ತಲಪಾಡಿವರೆಗೆ ನಡೆದ ಲಹರಿವಿರೋಧಿ ಜಾಗೃತಿ ಜಾಥಾಕ್ಕೆ ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್ ನೇತೃತ್ವ ವಹಿಸಿದ್ದರು.ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿ ಮಾತನಾಡಿದರು. 3 ಗಂಟೆಗೆ ಆರಂಭವಾದ ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳು, ಎಸ್‌ಪಿಸಿ ಕೆಡೆಟ್‌ಗಳು, ಟ್ರೋಮಾಕೇರ್ …