ಕುಂಬಳೆಯಲ್ಲಿ ಮನೆಯವರನ್ನು ಕಟ್ಟಿಹಾಕಿ 42 ಪವನ್ ಚಿನ್ನಾಭರಣ, ಹಣ ದರೋಡೆಗೈದ ಆರೋಪಿ ಬಂಧನ

ಕುಂಬಳೆ: ಕುಂಬಳೆಯಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ 42 ಪವನ್ ಚಿನ್ನಾಭರಣ ಹಾಗೂ 25,000 ರೂಪಾಯಿಗಳನ್ನು ದರೋಡೆಗೈದ ಪ್ರಕರಣದ ಆರೋಪಿಗಳಲ್ಲೋರ್ವನನ್ನು ಬಂಧಿಸಲಾಗಿದೆ. ಕರ್ನಾಟಕದ ಸಾಂಬಿಯ ಅಸೀಸ್ ಯಾನೆ ಅಬ್ದುಲ್ ಅಸೀಸ್ (58) ಎಂಬಾತನನ್ನು ಇಂದು ಬೆಳಿಗ್ಗೆ ಪುತ್ತೂರಿನಿಂದ ಬಂಧಿಸಲಾಗಿದೆ. 2012 ಡಿಸೆಂಬರ್‌ನಲ್ಲಿ ನಡೆದ ಈ ದರೋಡೆ ಪ್ರಕರಣದ ಆರೋಪಿಯಾದ ಅಬ್ದುಲ್ ಅಸೀಸ್‌ನನ್ನು ಕಾಸರಗೋಡು ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಮಧುಸೂದನನ್ ನಾಯರ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲು ಸಾಧ್ಯವಾಗಿದೆ. ಮಂಗಳೂರಿನಲ್ಲಿ ಟ್ರಾನ್ಸ್‌ಪೋರ್ಟ್ ಆಪರೇಟರ್ ಆಗಿದ್ದ ಕುಂಬಳೆಯ ಅನಿಲ್ …

ಶಬರಿಮಲೆ ಚಿನ್ನ ಕಳವು: ಮುಜರಾಯಿ ಮಂಡಳಿ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಎಸ್‌ಐಟಿ ವಶಕ್ಕೆ

ತಿರುವನಂತಪುರ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ತಿರುವಿದಾಂಕೂರ್ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್‌ರನ್ನು ವಿಶೇಷ ತನಿಖಾ ತಂಡ ಇಂದು ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ. ಮಾತ್ರವಲ್ಲ ಅವರನ್ನು  ತಿರುವನಂತಪುರದಲ್ಲಿರುವ ಕ್ರೈಂ ಬ್ರಾಂಚ್ ಕಚೇರಿಗೆ ಸಾಗಿಸಿ  ಅಧಿಕಾರಿಗಳು   ವಿಚಾರಣೆಗೊಳಪಡಿಸತೊಡಗಿದ್ದಾರೆ. ಶಬರಿಮಲೆ ದೇಗುಲದ ಗರ್ಭಗುಡಿಯ ದ್ವಾರಪಾಲಕ ಮೂರ್ತಿಗಳ  ಚಿನ್ನ ಲೇಪಿತ ಕವಚಗಳನ್ನು 2025ರಲ್ಲಿ ಕಾನೂನು ಉಲ್ಲಂಘಿಸಿ ಮರು  ಲೇಪನಗೊಳಿಸುವ ಹೆಸರಲ್ಲಿ ಅವುಗಳನ್ನು ಚೆನ್ನೈಗೆ ಸಾಗಿಸಿದ  ಪ್ರಕರಣದಲ್ಲಿ ಪಿ.ಎಸ್. ಪ್ರಶಾಂತ್ ಸೇರಿದಂತೆ ಏಳು ಮಂದಿಯ ಕೈವಾಡವಿದೆ …

ಯುವತಿ ಮದುವೆಗೆ ಅಡ್ಡಿ ಯುವಕನ ವಿರುದ್ಧ ಕೇಸು

ಮುಳ್ಳೇರಿಯ: ಮದುವೆಗೆ ಅಡ್ಡಿಪಡಿಸುತ್ತಿರುವುದಾಗಿ ಆರೋ ಪಿಸಿ ಯುವತಿ ನೀಡಿದ ದೂರಿನಂತೆ ಆದೂರು ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದಾರೆ. ಮಿದ್‌ಲಾಜ್ ಎಂಬಾತನ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಿದ್‌ಲಾಜ್ ತನ್ನನ್ನು ಹಿಂಬಾಲಿಸಿ ಉಪಟಳ ನೀಡುತ್ತಿರು ವುದಾಗಿಯೂ ಯುವತಿ ಆರೋಪಿ ಸಿದ್ದಾಳೆ. ಉಪಟಳ ತೀವ್ರಗೊಂಡ ಹಿನ್ನೆಲೆಯಲ್ಲಿ  ಯುವತಿ ಪೊಲೀ ಸರಿಗೆ ದೂರು ನೀಡಿದ್ದಾಳೆ ಮಿದ್‌ಲಾಜ್‌ನನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾ ಚರಣೆ ತೀವ್ರಗೊಳಿಸಿದ್ದಾರೆ.

ಫುಟ್ಬಾಲ್ ಆಟದ ಮಧ್ಯೆ ರೆಫರಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಫುಟ್ಬಾಲ್ ಆಟದ ಮಧ್ಯೆ ರೆಫರಿ ಕುಸಿದುಬಿದ್ದು  ಮೃತಪಟ್ಟ ಘಟನೆ ನಡೆದಿದೆ. ಉಳುವಾರು ಬದ್ರಿಯ ಮಂಜಿಲ್‌ನ ಅಬ್ದುಲ್ಲ-ಖದೀಜ ದಂಪತಿಯ ಪುತ್ರ ಹಸನ್ ಉಳುವಾರು (46) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 6 ಗಂಟೆ ವೇಳೆ ಫುಟ್ಬಾಲ್ ಆಟದ ಮಧ್ಯೆ  ಕುಸಿದು ಬಿದ್ದ ಇವರನ್ನು  ಕೂಡಲೇ ಕುಂಬಳೆಯ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಮುಸ್ಲಿಂ ಲೀಗ್ ಹಾಗೂ ಸಮಸ್ತದ ಸಕ್ರಿಯ ಕಾರ್ಯಕರ್ತನಾಗಿದ್ದರು. ಮೃತರು  ಪತ್ನಿ ಸಮೀರ, ಪುತ್ರಿ ಖದೀಜ ಅನ್ಫಾ, ಸಹೋದರ-ಸಹೋ ದರಿಯರಾದ ಹುಸೈನ್, ಮುಹಮ್ಮದ್, …

ಪಾಕಿಸ್ತಾನ ಪೌರತ್ವ ಮರೆಮಾಚಿ ಭಾರತೀಯ ಪಾಸ್‌ಪೋರ್ಟ್ ಸಂಪಾದಿಸಿದ ಯುವತಿ ಸೆರೆ

ಕಾಸರಗೋಡು: ಪಾಕಿಸ್ತಾನದ ಪೌರತ್ವವನ್ನು ಮರೆಮಾಚಿ ಭಾರತೀಯ ಪಾಸ್‌ಪೋರ್ಟ್ ಪಡೆದ ಯುವತಿ ವಿರುದ್ಧ ಕಣ್ಣೂರು ಮೈಯಿಲ್ ಪೊಲೀಸರು ಪಾಸ್‌ಪೋರ್ಟ್ ಆಕ್ಟ್  ೨೨, ಇಂಟರ್ ನ್ಯಾಶನಲ್ ಫಾರಿನರ್ಸ್ ಆಕ್ಟ್ 2025 ಸೇರಿದಂತೆ ೭ರಷ್ಟು ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರು ಕನ್ನಾಡಿಪರಂಬು ಕೊಟ್ಟಿಚ್ಚಾಲಿಲ್ ನಿವಾಸಿ ಎಂ.ಕೆ. ಅಲೀನಾ (24) ಎಂಬಾಕೆಯ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.  ಕನ್ನಾಡಿಪರಂಬು ನಿವಾಸಿ ಅಬ್ದುಲ್ ಹಕೀಂ ಎಂಬವರು 1946ರಂದು ಭಾರತ ತೊರೆದು ಪಾಕಿಸ್ತಾನಕ್ಕೆ ಹೋಗಿ  ಖಾಯಂ ಆಗಿ ಜೀವಿಸತೊಡಗಿದ್ದರು. ನಂತರ ಅಲ್ಲಿ ಹಸೀನಾ ಬೀಗಂ …

ಆರ್‌ಟಿಒ, ಪೊಲೀಸ್ ನೇತೃತ್ವದಲ್ಲಿ ನಡೆದ ಸಭೆಯಿಂದ ಹೊರ ನಡೆದ ಪಂ. ಜನಪ್ರತಿನಿಧಿಗಳು: ಕುಂಬಳೆಯಲ್ಲಿ ಪರಿಹಾರವಾಗದ ಬಸ್ ನಿಲುಗಡೆ ಸಮಸ್ಯೆ

ಕುಂಬಳೆ: ಕುಂಬಳೆಯಲ್ಲಿ ಖಾಸಗಿ ಬಸ್‌ಗಳ ನಿಲುಗಡೆಗೆ ಸಂಬಂಧಿಸಿ ಹುಟ್ಟಿಕೊಂಡ ವಿವಾದ ಪರಿಹಾರ ವಾಗದೆ ಇನ್ನಷ್ಟು ಉಲ್ಭಣಾವಸ್ಥೆಗೆ ತಲುಪುತ್ತಿದೆ. ಸಮಸ್ಯೆ ಪರಿಹರಿಸಲು  ಆರ್‌ಟಿಒ, ಪೊಲೀಸರ ನೇತೃತ್ವದಲ್ಲಿ ನಿನ್ನೆ ನಡೆದ ಚರ್ಚೆ ಯಾವುದೇ ನಿರ್ಧಾರ  ಕೈಗೊಳ್ಳಲಾಗದೆ ಕೊನೆಗೊಂಡಿತು.  ಕುಂಬಳೆ ಪಂಚಾಯತ್ ಕಚೇರಿಯಲ್ಲಿ  ಎಎಸ್‌ಪಿ ಅಚ್ಯುತ್ ಅಶೋಕ್, ಕುಂಬಳೆ ಸಿಐ ಬೈಜು ಕೆ ಜೋಸ್, ಆರ್‌ಟಿಒ ನೇತೃತ್ವದಲ್ಲಿ ನಿನ್ನೆ ಸಂಜೆ ನಡೆದ ಸಭೆಯಲ್ಲಿ ಪಂಚಾಯತ್ ಆಡಳಿತ ಪಕ್ಷದ ಜನಪ್ರತಿನಿಧಿಗಳು,  ಬ್ಲಾಕ್, ಜಿಲ್ಲಾ ಪಂಚಾಯತ್ ಸದಸ್ಯರು, ಬಸ್ ನೌಕರರು, ಬಸ್ ನೌಕರರ ಸಂಘಟನೆಗಳ …

ಉಪಯೋಗಶೂನ್ಯ ಕುಕ್ಕಾರು ಶಾಲಾ ಹಳೆ ಕಟ್ಟಡವನ್ನು ತೆರವುಗೊಳಿಸಲು ಒತ್ತಾಯ

ಉಪ್ಪಳ: ಮಂಗಲ್ಪಾಡಿ ಕುಕ್ಕಾರುನಲ್ಲಿರುವ ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಲ್ಲಿರುವ ಹಳೇ ಕಟ್ಟಡವನ್ನು ತೆರವುಗೊಳಿಸಲು ಊರವರು ಒತ್ತಾಯಿಸಿದ್ದಾರೆ. ನೂರು ವರ್ಷಗಳ ಇತಿಹಾಸವಿರುವ ಈ ಕಟ್ಟಡ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀ ಯರಿಗೆ ಅಪಾಯಕಾರಿಯಾಗಿದೆ. ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಹೈಯರ್ ಸೆಕಂಡರಿ ತರಗತಿಯನ್ನು ಮಂಗಲ್ಪಾಡಿ ಪ್ಲಸ್-ಟು ಬ್ಲೋಕ್ ಕಟ್ಟಡದ ಬಳಿಯಲ್ಲಿರುವ ಹೊಸಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈಗ ಇಲ್ಲಿ ಒಂದರಿAದ ನಾಲ್ಕನೇ ತರಗತಿ ತನಕ ಮಾತ್ರವಿದೆ. ಇದರ ಪರಿಸರದಲ್ಲಿರುವ ಹಳೆಯ ಕಟ್ಟಡಗಳು ಶೋಚನೀಯÁ ವಸ್ಥೆಯಿಂದ ಮುರಿದು ಬೀಳುತ್ತಿದೆ. ಕಾಡು ಪೊದೆಗಳು ತುಂಬಿ …

ರಾಹುಲ್‌ಗಾಂಧಿ ಬಂಧನ: ಪೈವಳಿಕೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪೈವಳಿಕೆ: ನವದೆಹಲಿಯಲ್ಲಿ ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಮುಷ್ಕರ ನಿರತರಾದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರಕಾರ ಪೊಲೀಸ್‌ರನ್ನು ಉಪಯೋಗಿಸಿ ನಡೆಸಿದ ಹಲ್ಲೆಯನ್ನು ಪ್ರತಿಭಟಿಸಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ , ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಗಾಂಧಿ, ಕೆ.ಸಿ. ವೇಣುಗೋಪಾಲ್ ಮೊದಲಾದವರ ಬಂಧನವನ್ನು ಪ್ರತಿಭಟಿಸಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಪೈವಳಿಕೆಯಲ್ಲಿ ಪ್ರತಿಭಟನಾ ಜಾಥ ಹಾಗೂ ಧರಣಿ ನಡೆಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ಭಟ್, ಸ್ಥಾಯೀ ಸಮಿತಿ ಅಧ್ಯಕ್ಷ …

ಹೆಣ್ಮಕ್ಕಳ ಚಿತ್ರ ಮೋರ್ಫ್ ಮಾಡಿ ಅಶ್ಲೀಲ ಸೈಟ್‌ಗಳಲ್ಲಿ ಪ್ರಚಾರ: ಎಂಬಿಬಿಎಸ್ ವಿದ್ಯಾರ್ಥಿ ಸೆರೆ

ತಿರುವನಂತಪುರ: ಹೆಣ್ಮಕ್ಕಳ ಚಿತ್ರವನ್ನು ಮೋರ್ಫ್ ಮಾಡಿ ಪ್ರಚಾರಪಡಿಸಿದ ಎಂಬಿಬಿಎಸ್ ವಿದ್ಯಾರ್ಥಿ ಸೆರೆಯಾಗಿದ್ದಾನೆ. ತಿರುವನಂತಪುರ ಮೆಡಿಕಲ್ ಕಾಲೇಜಿನ ತೃತೀಯ ವರ್ಷ ವಿದ್ಯಾರ್ಥಿ ಹಾಗೂ ವಯನಾಡ್ ಕಾಕವಯಲ್ ನಿವಾಸಿಯಾದ ಏಬಲ್ ಸೆರೆಯಾದ ವಿದ್ಯಾರ್ಥಿ. 13ರಷ್ಟು ಸೀನಿಯರ್ ವಿದ್ಯಾರ್ಥಿಗಳ ಚಿತ್ರಗಳನ್ನು ಈತ ಮೋರ್ಫ್ ಮಾಡಿ ಸಾಮಾಜಿಕ ಜಾಲತಾಣಗಳ ಅಶ್ಲೀಲ ಸೈಟ್‌ಗಳಲ್ಲಿ ಪ್ರಚಾರಪಡಿಸಿದ್ದನೆಂದು ವಿದ್ಯಾರ್ಥಿನಿಯರು ದೂರಿದ್ದರು. ಇತ್ತೀಚೆಗೆ ಕೆಲವು ದೃಶ್ಯಗಳು ವಿದ್ಯಾರ್ಥಿನಿಯರ ಗಮನಕ್ಕೆ ಬಂದಿತ್ತು. ಬಳಿಕ ಪರಿಶೀಲಿಸಿದಾಗ ಇನ್ನಷ್ಟು ಹೆಣ್ಣುಮಕ್ಕಳ ಚಿತ್ರಗಳನ್ನು ಈ ರೀತಿ ಪ್ರಚಾರ ಪಡಿಸಿರುವುದಾಗಿ ಪತ್ತೆಹಚ್ಚಲಾಗಿತ್ತು. ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ …

ಸೇವಾಭಾರತಿ ತಿಂಗಳ ಸಭೆ ಉದಯ ಕುಮಾರ್ ಶೆಟ್ಟಿಗೆ ಗೌರವ

ಉಪ್ಪಳ: ಸೇವಾ ಭಾರತಿ ಮಂ ಗಲ್ಪಾಡಿ ಇದರ ತಿಂಗಳ ಸಭೆ ಐಲದಲ್ಲಿ ನಡೆಯಿತು. ಎರ್ನಾಕುಳಂನಲ್ಲಿ ನಡೆದ ರಾಜ್ಯ ಮಟ್ಟದ ಸುಕೃತ ಸಂಗಮA ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ದೇರಂಬಳ ಹೊಳೆಗೆ ಬಿದ್ದ ಯುವತಿಯನ್ನು ರಕ್ಷಿಸಿದ ಉದಯ ಕುಮಾರ ಶೆಟ್ಟಿ ದೇರಂಬಳ ಇವರ ಸಾಹಸ ಪ್ರವೃತ್ತಿಯನ್ನು ಮೆಚ್ಚಿ ಗೌರವಿಸಲಾಯಿತು. ಸೇವಾ ಭಾರತಿ ಮಂಗಲ್ಪಾಡಿಯ ಅಧ್ಯಕ್ಷ ರಘು ಸಿ. ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ, ಸಾಮಾಜಿಕ ಮುಂದಾಳು ವೀರಪ್ಪ ಅಂಬಾರು ಮಾತನಾಡಿದರು. ದೇರಂಬಳ ಹೊಳೆಯ ಸೇತುವೆಯನ್ನು ಶೀಘ್ರ ಪುನರ್ನಿರ್ಮಾಣ …