ಬಿಎಂಎಸ್ ಕಾರಡ್ಕ ಪಂ. ಕುಟುಂಬ ಸಂಗಮ

ಮುಳ್ಳೇರಿಯ: ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಕಾರಡ್ಕ ಪಂಚಾಯತ್ ಕುಟುಂಬ ಸಂಗಮ ಮುಳ್ಳೇರಿಯದಲ್ಲಿ ನಡೆಯಿತು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಪಂಚಾಯತ್ ಸಮಿತಿ ಅಧ್ಯಕ್ಷ ಸಿ.ಕೆ. ಚಂದ್ರನ್ ಅಧ್ಯಕ್ಷತೆ ವಹಿಸಿದರು.  ಭಾರತೀಯ ವಿಚಾರ ಕೇಂದ್ರ ಸ್ಥಾನೀಯ ಸಮಿತಿ ಕಾರ್ಯದರ್ಶಿ ಸೂರಜ್, ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ  ಜನನಿ, ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಲೀಲಾಕೃಷ್ಣನ್, ಪಂಚಾಯತ್ ಸದಸರಾದ ಸವಿತ, ಪ್ರಶಾಂತ್, ವಲಯ ಅಧ್ಯಕ್ಷ ಸದಾಶಿವ ಮೊದಲಾದವರು ಮಾತನಾಡಿದರು. ಬಿಎಂಎಸ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯಎಂ.ಕೆ. …

ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ವತಿಯಿಂದ ಸನ್ಮಾನ

ಉಪ್ಪಳ: ಹೊಳೆಗೆ ಬಿದ್ದ ಯುವತಿ ಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳ ಹಾಗೂ ಜೋಡು ಕಲ್ಲು ಹಾಲಿನ ಸೊಸೈಟಿಯ ನಿವೃತ್ತ ಕಾರ್ಯದರ್ಶಿ ರಾಜರಾಮ್ ಬಲ್ಲಾಳ್ ರನ್ನು ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಇದರ ವತಿಯಿಂದ ಸನ್ಮಾನಿಸಲಾ ಯಿತು. ಸಭೆಯಲ್ಲಿ ಕ್ಲಬ್‌ನ ಗೌರವಾಧ್ಯಕ್ಷ ದಯಾನಂದ ಮಾಡ, ಅಧ್ಯಕ್ಷ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ನಾರಾಯಣ ಕೆ ಪಿ ಪಟ್ಲ, ಅಶ್ವಿನ್ ಭಟ್ ಆಟಿಕುಕ್ಕೆ, ರವಿರಾಜ್ ನಾಯ್ಕ್ ಗುಂಡಿಬೈಲ್, ಪ್ರಭಾತ್ ರೈ ಬೊಳಂಪಾಡಿ, ತ್ಯಾಂಪಣ್ಣ ಶೆಟ್ಟಿ ದೇರಂಬಳ, ಕನ್ಯಾಕಮಾರಿ ಮಾತಾಜಿ …

ಊರಾಳುಂಗಲ್ ಚೆಯರ್‌ಮೆನ್ ರಮೇಶನ್ ಪಾಲೇರಿ ನಿಧನ

ಕಲ್ಲಿಕೋಟೆ: ಊರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ ಆಪರೇಟಿವ್ ಸೊಸೈಟಿ ಯ ಚೆಯರ್‌ಮೆನ್  ವಡಗರ ನಿವಾಸಿ ರಮೇಶನ್ ಪಾಲೇರಿ (66) ಇಂದು ಬೆಳಿಗ್ಗೆ ಕೊಯಂಬತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಅದು ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನಹೊಂದಿದರು. ಕಾಸರಗೋಡು ಜಿಲ್ಲೆಯ ತಲಪಾಡಿಯಿಂದ ಆರಂಭಗೊಂಡು ಚೆಂಗಳ ತನಕದ 16೦೦ ಕೋಟಿ ರೂ.ಗಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಗುತ್ತಿಗೆ ವಹಿಸಿಕೊಂಡು ಅದನ್ನು ಈಗಾಗಲೇ ಯಶಸ್ವಿಯಾಗಿ ಪೂರ್ತೀಕರಿಸಿದ ಸಂಸ್ಥೆಯಾಗಿದೆ ಊರಾಳುಂಗಲ್ ಲೇಬರ್ …

ಕುಸಿದು ಬಿದ್ದ ದೇರಂಬಳ ಸೇತುವೆ: ಪುನರ್ ನಿರ್ಮಾಣ ಬಗ್ಗೆ ಶಾಸಕರ ನೇತೃತ್ವದಲ್ಲಿ ಪೂರ್ವಭಾವಿ ಭೇಟಿ

ಉಪ್ಪಳ: ಮೀಂಜ- ಮಂಗಲ್ಪಾಡಿ ಪಂಚಾಯತ್‌ಗಳನ್ನು ಸಂಪರ್ಕಿಸುವ ದೇರಂಬಳ ಸೇತುವೆ ಕುಸಿದ ಸ್ಥಳಕ್ಕೆ ಶಾಸಕ ಎಕೆಎಂ ಅಶ್ರಫ್‌ರ ನೇತೃತ್ವದ ತಂಡ ನಿನ್ನೆ ಭೇಟಿ ನೀಡಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಅಳವಡಿಸಿ ನೂತನ ಸೇತುವೆ ಶೀಘ್ರ ನಿರ್ಮಿಸುವ ಯೋಜನೆ ಸಿದ್ಧವಾಗುತ್ತಿದ್ದು, ಇದರ ಪೂರ್ವಭಾವಿಯಾಗಿ ಲೋಕೋಪ ಯೋಗಿ ಇಲಾಖೆ, ಮೇಜರ್ ಮತ್ತು ಮೈನರ್ ಇರಿಗೇಶನ್ ಇಲಾಖೆ ಪ್ರತಿ ನಿಧಿಗಳ ಸಹಿತ ಶಾಸಕರು, ಜನಪ್ರತಿ ನಿಧಿಗಳು ಸ್ಥಳ ಸಂದರ್ಶಿಸಿದ್ದಾರೆ. ಈ ವೇಳೆ ಸ್ಥಳೀಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಸರಗೋಡಿನ ಮಣ್ಣಿನಲ್ಲಿ ಮಾದಕವಸ್ತುವಿಗೆ ಸ್ಥಾನವಿಲ್ಲ :ಮಾಫಿಯಾಗಳ ವಿರುದ್ಧ ಕಠಿಣ ಕ್ರಮ-ಗೃಹ ಸಚಿವ

ಕಾಸರಗೋಡು: ಆಪರೇಶನ್ ತೂಫಾನ್ ಕಾರ್ಯಾಚರಣೆಗೆ ಅತೀ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿರುವುದು ತಾಯಂದಿರಾಗಿದ್ದಾರೆ. ಇವರು ದಿನಂಪ್ರತಿ ಕಳುಹಿಸುತ್ತಿರುವ ಪತ್ರಗಳು, ಫೋನ್ ಕರೆಗಳು ಹಾಗೂ ಸಂದೇಶಗಳು ಇದನ್ನು ಸಾಬೀತುಪಡಿಸುತ್ತಿವೆಯೆಂದು ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ನಾಯಮ್ಮಾರಮೂಲೆ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ನಡೆಸಿದ ‘ಆಪರೇಶನ್ ತೂಫಾನ್ ದಿ ನಾರ್ಕೋ ಹಂಟ್’ ಜಾಗರಣ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಸರಗೋಡಿನ ಮಣ್ಣಿನಲ್ಲಿ ಮಾದಕವಸ್ತುಗಳಿಗೆ ಜಾಗವೊದ ಗಿಸುವುದಿಲ್ಲ. ಅದನ್ನು ತಡೆಯಲು ರಾಜ್ಯದ ಗಡಿ ಪ್ರದೇಶಗಳಲ್ಲಿ ತೂಪಾನ್ …