ಕುಂಬಳೆ: ಶಿಕ್ಷಣ ಸಚಿವ ಭಾಗವಹಿಸಿದ ಕಾರ್ಯಕ್ರಮಕ್ಕೆ ಬಿಜೆಪಿಯ ಪ್ರತಿಭಟನಾ ಮೆರವಣಿಗೆ: ಇದರ ವಿರುದ್ಧ ವಿರುದ್ಧ ಲೀಗ್‌ನಿಂದಲೂ ಪ್ರತಿಭಟನೆ ; ಸ್ಥಳದಲ್ಲಿ ಸಂಘರ್ಷಾವಸ್ಥೆ

ಕುಂಬಳೆ: ಕುಂಬಳೆ ಜಿಎಸ್‌ಬಿಎಸ್ ಶಾಲೆಯ   ಬಹು ಅಂತಸ್ತಿನ ಕಟ್ಟಡವನ್ನು   ರಾಜ್ಯ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಇಂದು  ಬೆಳಿಗ್ಗೆ ಉದ್ಘಾಟಿಸಿದರು.  ಇದೇ ವೇಳೆ  ವಿ.ಡಿ. ಸಾವರ್ಕರ್‌ರನ್ನು ಸಚಿವರು ಅವಮಾನಿಸಿದ್ದಾರೆಂದೂ ಆದ್ದರಿಂದ  ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸಚಿವರು ಭಾಗವಹಿಸಿದ ಕಾರ್ಯಕ್ರಮಕ್ಕೆ  ಪ್ರತಿಭಟನಾ ಮೆರವಣಿಗೆ ನಡೆಸಿತು. ಇದೇ ವೇಳೆ ಬಿಜೆಪಿ ವಿರುದ್ಧ ಯೂತ್ ಲೀಗ್ ಕಾರ್ಯಕರ್ತರು ರಂಗಕ್ಕಿಳಿದಿದ್ದು ಇದರಿಂದ ಸ್ಥಳದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಗಿದೆ. ಸಚಿವರು ಶಾಲಾ ಕಟ್ಟಡವನ್ನು ಉದ್ಘಾಟಿಸಿ  ಮಾತನಾ ಡುತ್ತಿದ್ದಂತೆಯೇ  ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ …

ಕೊರಕೋಡಿನಲ್ಲಿ 15ರ ಹರೆಯದ ಬಾಲಕ ಸೇರಿದಂತೆ ಆರು ಮಂದಿಗೆ ಇರಿದ ಪ್ರಕರಣ: ಕೊಲೆಯತ್ನ ಪ್ರಕರಣ ದಾಖಲು; ನಾಲ್ವರ ಬಂಧನ

ಕಾಸರಗೋಡು: ಒಂದೇ ಕುಟುಂಬಕ್ಕೆ ಸೇರಿದ ೧೫ರ ಹರೆಯದ ಬಾಲಕ ಸೇರಿದಂತೆ ಆರು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ನಾಲ್ವರನ್ನು  ಬಂಧಿಸಿದ್ದಾರೆ. ಕಾಸರಗೋಡು ಕೊರಕೋಡು ನಿವಾಸಿಗಳಾದ ಇಮ್ರಾನ್, ತಳಂಗರೆ ಬಾಂಗೋಡಿನ ಸನಾಫ್, ಕೊರಕೋಡಿನ ಅಹಮ್ಮದ್ ಮತ್ತು ಬಾಂಗೋಡನ ಬಾಸಿತ್ ಬಂಧಿತ ಆರೋಪಿಗಳು. ಇವರ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕೊರಕೋಡು ಬಿಲಾಲ್ ಮಸೀದಿ ಬಳಿಯ ಜಾಫರ್ ಸಾಧಿಕ್ (23), 15 ವರ್ಷದ ಸಹೋದರ …

ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಾಸರಗೋಡು ಕಲೆಕ್ಟರೇಟ್‌ನ ನೌಕರೆ ಚಿಕಿತ್ಸೆ ಮಧ್ಯೆ ಮೃತ್ಯು

ಕಾಸರಗೋಡು: ವಿಷ ಸೇವಿಸಿ  ಆತ್ಮಹತ್ಯೆಗೆ ಪ್ರಯತ್ನಿಸಿದ ಕಾಸರಗೋಡು ಕಲೆಕ್ಟರೇಟ್‌ನ ನೌಕರೆ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ನಿನ್ನೆ ಮಧ್ಯಾಹ್ನ ಸಾವಿಗೀಡಾಗಿದ್ದಾರೆ. ಕಲೆಕ್ಟರೇಟ್ ನಲ್ಲಿರುವ ಎಂಡೋಸಲ್ಫಾನ್ ಸೆಲ್‌ನ ಸೀನಿಯರ್ ಕ್ಲಾರ್ಕ್, ಚೆಂಗಳ ಅದ್ರುಕುಳಿ ನಿವಾಸಿಯಾದ ಎ. ಆಶಾಲತ (41) ಎಂಬವರು ಸಾವಿಗೀಡಾದ ದುರ್ದೈವಿ. ಕಳೆದ ಶುಕ್ರವಾರ ಇವರು  ವಿಷ ಸೇವಿಸಿ  ತೀವ್ರ ಅಸ್ವಸ್ಥಗೊಂಡಿದ್ದರು.  ಎಂದಿನಂತೆ ಆಶಾಲತ ಸ್ವಂತ ವಾಹನದಲ್ಲಿ ಕಳೆದ ಶುಕ್ರವಾರ ಕಚೇರಿಗೆ ತಲುಪಿದ್ದರು. ಪ್ರಯಾಣ ಮಧ್ಯೆ ಹಾಗೂ ಕಚೇರಿಗೆ  ತಲುಪಿದ ಬಳಿಕವೂ ಇವರು ಇಲಿವಿಷ ಬೆರೆಸಿದ …

ಏಳರ ಹರೆಯದ ಬಾಲಕನ ಅಪಹರಣ ಯತ್ನ: ತಂಡ ತಲುಪಿರುವುದಾಗಿ ಅಂದಾಜಿಸುವ ಕಾರಿನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಪತ್ತೆ

ಕುಂಬಳೆ: ಸಹೋದರನಿಗೆ ಲಭಿಸುವ ಆಹಾರ ತರಲು ಅಂಗನವಾಡಿಗೆ ಹೋಗುತ್ತಿದ್ದ ಏಳರ ಹರೆಯದ ಬಾಲಕನನ್ನು ಕಾರಿನಲ್ಲಿ ತಲುಪಿದ ತಂಡ ಅಪಹರಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿಯವರ ನಿರ್ದೇಶ ಪ್ರಕಾರ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಭಾಸ್ಕರನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ  ಕರ್ನಾಟಕದ ಹುಬ್ಬಳ್ಳಿ ನಿವಾಸಿಯಾದ  ಬಾಲಕನ ತಾಯಿ ನೀಡಿದ ದೂರಿನ ಪ್ರಕಾರ ಕೇಸು ದಾಖಲಿಸಲಾಗಿದೆ. ಕಳೆದ ಶುಕ್ರವಾರ ಮಧ್ಯಾಹ್ನ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ತಂದೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಕ್ವಾರ್ಟರ್ಸ್‌ನಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳಿದ್ದರು. ತಮ್ಮನಿಗೆ ಉಚಿತವಾಗಿ …

ಯುವತಿ ನಾಪತ್ತೆ

ಕುಂಬಳೆ: ಯುವತಿ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆ ತಿಲಕನಗರದ ಸುಭೋದಯ ಎಂಬವರ ಪುತ್ರಿ ಕಾಜಲ್ (25) ಎಂಬಾಕೆ ಆಗಸ್ಟ್ 5ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೊರ ಹೋದ ನಂತರ ಮನೆಗೆ ಹಿಂತಿರುಗಲಿಲ್ಲವೆಂದು ಆಕೆಯ ಸಹೋದರಿ ದೀಪ್ತಿ ದೂರು ನೀಡಿದ್ದು, ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾದ ಕಾಜಲ್ ವಿವಾಹಿತೆಯಾಗಿದ್ದು, ಆಕೆ ಒಂದು ಮಗುವಿನ ತಾಯಿಯೂ ಆಗಿದ್ದಾಳೆ. ನಾಪತ್ತೆಯಾದ ಬಳಿಕ ಆಕೆ ಮನೆಯವರನ್ನು ಕರೆದು ಮಗುವನ್ನು ಕರೆದೊಯ್ಯಲು ಬರುವುದಾಗಿ …

ಕಾಲಿಕಡವ್ ಮಾದಕ ಪದಾರ್ಥ ವಶ: ಸೂತ್ರಧಾರ ಎರ್ನಾಕುಳಂನಲ್ಲಿ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 130 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದ ಸೂತ್ರಧಾರ ಸೆರೆಯಾಗಿದ್ದಾನೆ. ಎರ್ನಾಕುಳಂ ನಿವಾಸಿಯಾದ ಆಬಿದ್ ಎಂಬಾತ ಸೆರೆಯಾದ ವ್ಯಕ್ತಿ. ಈತನನ್ನು ಚಂದೇರಕ್ಕೆ ತಲುಪಿಸಿ ಬಂಧನ ದಾಖಲಿಸಲಾಗುವುದು. ಎರ್ನಾಕುಳಂ, ಪೆರುಂಬಾವೂರ್ ಅರಕಪ್ಪೊಡಿ ನಿವಾಸಿಗಳಾದ ಪಿ.ಎ. ಅಬ್ದುಲ್ ಸಲಾಂ (27), ಕೆ.ಎಚ್. ಮುಹಮ್ಮದ್ ಹುಸೈನ್ (28), ಪಿ.ಎ. ಅಬ್ಬಾಸ್ (50) ಎಂಬಿವರನ್ನು ನಿನ್ನೆ ಬೆಳಿಗ್ಗೆ ಬಂಧಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಡ್ಯಾನ್ಸಾಪ್ ತಂಡ ಹಾಗೂ ಚಂದೇರ ಎಸ್‌ಐ ಮನು ಪಿ. ಚೆರಿಯಾನ್ …

ಯುವತಿ ನಾಪತ್ತೆ

ಹೊಸದುರ್ಗ: ಮನೆಯಿಂದ ಹೊರಹೋದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ವಲಿಯಪರಂಬ ಮಾವಿಲಕಡಪ್ಪುರಂ ನಿವಾಸಿಯಾದ 19ರ ಹರೆಯದ ಯುವತಿ ನಾಪತ್ತೆಯಾದವಳು. ಶನಿವಾರ ಮುಂಜಾನೆ 3 ಗಂಟೆಗೆ ಮನೆಯಿಂದ ಹೊರಹೋಗಿದ್ದು, ಆ ಬಳಿಕ ಹಿಂತಿರುಗಿಲ್ಲವೆಂದು ತಂದೆ ಚಂದೇರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವತಿ ರಿಸ್ವಾನ್ ಎಂಬಾತನ ಜೊತೆಗೆ ತೆರಳಿರುವುದಾಗಿ ಶಂಕಿಸುತ್ತಿರುವುದಾಗಿ ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಸುಬ್ರಹ್ಮಣ್ಯ ಭಟ್ ನಿಧನ

ಪೆರ್ಲ: ಕಜಂಪಾಡಿ ನರ್ಸಿಂಗ್ ಹೋಮ್‌ನ ಮಾಲಕ, ಡಾ| ಶ್ರೀಪತಿ ಭಟ್‌ರ ತಂದೆ ಕಜಂಪಾಡಿ ತರವಾಡು ಮನೆಯ ಸುಬ್ರಹ್ಮಣ್ಯ ಭಟ್ (99)ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರ ಪತ್ನಿ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಇನ್ನೋರ್ವ ಪುತ್ರ ಮುಂಬೈ ಟಾಟಾ ಗ್ರೂಪ್ ನಿವೃತ್ತ ಉದ್ಯೋಗಿ ಬಾಲರಾಜ್ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಂಗಲ್ಪಾಡಿ: ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ; ಡಿಫಿಯಿಂದ ಪ್ರತಿಭಟನೆ

ಮಂಜೇಶ್ವರ: ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಒ.ಪಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಇದನ್ನು ಪ್ರತಿಭಟಿಸಿ ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಮಾರ್ಚ್ ನಡೆಸಲಾಯಿತು. ಡಿಫಿ ಜಿಲ್ಲಾಧ್ಯಕ್ಷ ಎಂ.ವಿ. ರತೀಶ್ ಉದ್ಘಾಟಿಸಿದರು. ಬ್ಲೋಕ್ ಉಪಾಧ್ಯಕ್ಷ ಮುಹಮ್ಮದ್ ನೌಶಾದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಬ್ಲೋಕ್ ಕೋಶಾಧಿಕಾರಿ ಮುಹಮ್ಮದ್ ಶಬೀರ್, ಉದಯ ಸಿ.ಎಚ್, ದೀಕ್ಷಿತ್ ಉಪ್ಪಳ, ವಿನಯ ಕುಮಾರ್ ಮಾತನಾಡಿದರು.ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ  ಸೋಲಾರ್ ಇ.ವಿ. ಚಾರ್ಜಿಂಗ್ ಸ್ಟೇಶನ್ ಉದ್ಘಾಟನೆಕುಂಬಳೆ: …

ಕಾಸರಗೋಡು ಬಿಲ್ಲವ ಸೇವಾಸಂಘದಿಂದ ಅಭಿನಂದನೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘ ಆಶ್ರಯದಲ್ಲಿ ಅಭಿನಂದನೆ ಹಮ್ಮಿಕೊಳ್ಳಲಾಯಿತು. ಉಪ್ಪಳ ಅಂಬಾರು ಮಲರಾಯ ದೈವಸ್ಥಾನದ ಟ್ರಸ್ಟಿ ವೀರಪ್ಪ ಅಂಬಾರು ಉದ್ಘಾಟಿಸಿದರು. ಬಿಲ್ಲವ ಸೇವಾ ಸಂಘ ಜಿಲ್ಲಾ ಅಧ್ಯಕ್ಷ ಕೆ. ಕಮಲಾಕ್ಷ ಸುವರ್ಣ ಅಧ್ಯಕ್ಷತೆ ವಹಿಸಿದರು. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಸಮಾಜದ ಗಣ್ಯ ವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕಾಸರಗೋಡು ನಗರಸಭಾ ಕೌನ್ಸಿಲರ್ ಕೆ.ಆರ್, ಹರೀಶ್, ಅಶೋಕ್ ಬಾಡೂರು, ಕೆ. ಸರೋಜಿನಿ, ಚಂದ್ರಶೇಖರ ಚಿಪ್ಲಿಕೋಟ, ಕೆ. ಸುರೇಶ್ ಸುವರ್ಣ, ಲವ ಮೀಪುಗುರಿ, …