ಪ್ಲಸ್‌ಟು ವಿದ್ಯಾರ್ಥಿನಿ, ತಂದೆಯ ಆತ್ಮಹತ್ಯೆ: ಮುಂದುವರಿದ ನಿಗೂಢತೆ

ಕಾಸರಗೋಡು: ತಂದೆ ಹಾಗೂ ಪ್ಲಸ್‌ಟು ವಿದ್ಯಾರ್ಥಿನಿಯಾದ ಪುತ್ರಿ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಮುಂದುವರಿದಿದೆ. ತಂದೆ ಹಾಗೂ ಮಗಳು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿಲ್ಲ. ಈ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.    ಕರ್ನಾಟಕ ನಿವಾಸಿಯೂ  ಕಾಸರಗೋಡು ಮೀಪುಗುರಿಯಲ್ಲಿ ವಾಸಿಸುತ್ತಿದ್ದ ಗಣೇಶ (55) ಹಾಗೂ ಪರವನಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ  ಪ್ಲಸ್‌ಟು ವಿದ್ಯಾರ್ಥಿನಿಯಾದ ಪುತ್ರಿ ವೈಷ್ಣವಿ (17) ಎಂಬಿವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೊನ್ನೆ ರಾತ್ರಿ ಪತ್ತೆಯಾಗಿದ್ದಾರೆ. ಚೆಮ್ನಾಡ್ ಕೋಳಿಯಡ್ಕ ಶಿವಪುರಂ  ಕ್ಷೇತ್ರ ಸಮೀಪದ  ಎರಡಂತಸ್ತಿನ …

ಅಂಗಡಿ ವರಾಂಡದಲ್ಲಿ ಮಧ್ಯವಯಸ್ಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪುತ್ತಿಗೆ: ಬಾಡೂರಿನಲ್ಲಿ  ಮಧ್ಯವಯಸ್ಕನೋರ್ವ ಅಂಗಡಿ ವರಾಂಡದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ಅಂಗಡಿಮೊಗರು ದೇಲಂಪಾಡಿಯ ವಿಠಲ ಆಳ್ವ (50) ಮೃತ ವ್ಯಕ್ತಿ ಯಾಗಿದ್ದಾರೆ. ನಿನ್ನೆ ಅಪರಾಹ್ನ  ಬಾಡೂರಿನ  ಉಪೇಕ್ಷಿತ ಕಟ್ಟಡ ಪರಿಸರದಲ್ಲಿ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ನಾಗರಿಕರು ನೋಡಿ ದಾಗ ಮೃತದೇಹ ಕಂಡು ಬಂದಿದೆ. ಮೂರು ದಿನಗಳ ಹಿಂದೆ ಮೃತಪಟ್ಟಿ ರಬಹುದೆಂದು ಸಂಶಯಿಸಲಾ ಗುತ್ತಿದೆ. ಈ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ ಬದಿಯಡ್ಕ ಪೊಲೀಸರು ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ದಿವಂಗತರಾದ …

ವಿದ್ಯಾರ್ಥಿ ನಾಪತ್ತೆ

ಕುಂಬಳೆ: ವಿದ್ಯಾರ್ಥಿ ನಾಪತ್ತೆ ಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪುತ್ತಿಗೆ ಮುಹಿಮ್ಮತ್ ನಗರದಲ್ಲಿರುವ ಮುಹಿ ಮ್ಮತ್ ಮುಸ್ಲಿಮಿನ್ ಎಜ್ಯುಕೇಶನ್ ಸೆಂಟರ್‌ನಲ್ಲಿ ಕಲಿಯುತ್ತಿರುವ ಕೂಡ್ಲು ಎರಿಯಾಲ್ ಬ್ಲಾರ್ಕೋಡ್ ಹೌಸ್‌ನ ಮೊಯ್ದೀನ್ ಎಂಬವರ ಪುತ್ರ ಮೊಹಮ್ಮದ್ ಮುಸಾಮಿಲ್ (17)  ಎಂಬಾತ ನಾಪತ್ತೆಯಾದ ವಿದ್ಯಾರ್ಥಿ.  ನಿನ್ನೆ ಮಧ್ಯಾಹ್ನದಿಂದ ಈತ ಶಿಕ್ಷಣ ಸಂಸ್ಥೆಯಿಂದ ನಾಪತ್ತೆಯಾಗಿರು ವುದಾಗಿ  ಶಿಕ್ಷಣ ಸಂಸ್ಥೆ ಅಧ್ಯಾಪಕ ಅಬ್ದುಲ್ ಲತೀಫ್ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ಮೂವರು ಆರೋಪಿಗಳ ಬಂಧನ

ಕಾಸರಗೋಡು: ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಗಳಾದ  ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ನಿವಾಸಿಗಳಾದ ರಿಸ್ವಾನ್ (೨೩), ಮುಹಮ್ಮದ್ ಸ್ವಾದ್(19) ಎಂಬಿವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.  14 ಹಾಗೂ 19ರ ಹರೆಯದ ಇಬ್ಬರು ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದಂತೆ ಇವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯರನ್ನು ಆರೋಪಿಗಳು  ಸಾಮಾಜಿಕ ಜಾಲ ತಾಣಗಳಲ್ಲಿ   ಪರಿಚಯಗೊಂಡಿದ್ದರೆನ್ನ ಲಾಗಿದೆ. ಬಳಿಕ  ಬಾಲಕಿಯರನ್ನು ಉಳ್ಳಾಲದ ಲಾಡ್ಜ್‌ವೊಂದಕ್ಕೆ ಕರೆದೊ ಯ್ದು  ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ.  ಈ ಬಗ್ಗೆ ಬಾಲಕಿ ಯರು ನೀಡಿದ ದೂರಿನಂತೆ ಹೊಸದುರ್ಗ …

ಸಹೋದರರ ಜೊತೆ ಸ್ನಾನಕ್ಕಿಳಿದ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವು

ಕಾಸರಗೋಡು: ಸಹೋದರರ ಜತೆಗೆ ಕೆರೆಯಲ್ಲಿ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉದಯಗಿರಿ ಕೈಲಾಸನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೂಲತಃ ವಿದ್ಯಾನಗರ ಚಾಲ ಬಿಯೆಡ್ ಸೆಂಟರ್‌ನ ಬಳಿ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮೊಹಮ್ಮದ್ ಝೈದ್ (16) ಸಾವನ್ನಪ್ಪಿದ ವಿದ್ಯಾರ್ಥಿ. ಈತನ ಕುಟುಂಬ ಈಗ ಉದಯಗಿರಿ ಕೈಲಾಕನಗರದಲ್ಲಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದೆ. ಮೊಹಮ್ಮದ್ ಝೈದ್ ಮತ್ತು ಆತನ ಇಬ್ಬರು ಸಹೋದರರು ಇಂದು ಬೆಳಿಗ್ಗೆ ಉದಯಗಿರಿ ಬಳಿ ಕೆರೆಯೊಂದಕ್ಕೆ ಸ್ನಾನಕ್ಕಿಳಿದಾಗ ಮೊಹಮ್ಮದ್ ಝೈದ್ ನೀರಿನಲ್ಲಿ ಮುಳುಗಿ …

ವರ್ಕಾಡಿಯಲ್ಲಿ ವಿಶ್ವಹಿಂದೂ ಪರಿಷತ್‌ನಿಂದ ಪಂಜಿನ ಮೆರವಣಿಗೆ

ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವರ್ಕಾಡಿ ಖಂಡ ಸಮಿತಿ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪಂಜಿನ ಮೆರವಣಿಗೆ ಸುಂಕದಕಟ್ಟೆ ಅಯ್ಯಪ್ಪ ಭಜನಾ ಮಂದಿರದಿAದ ಹೊರಟು ಮಜೀರ್ಪಳ್ಳ ಪೇಟೆ ತನಕ ನಡೆಯಿತು.ಕಾರ್ಯಕ್ರಮದಲ್ಲಿ ಕಣ್ಣೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ಮೀರಾ ಆಳ್ವ, ಕಾಸರಗೋಡು ಜಿಲ್ಲಾ ದುರ್ಗಾವಾಹಿನಿ ಸಂಯೋಜಕಿ ಸೌಮ್ಯ ಪ್ರಕಾಶ್, ವಿಶ್ವ ಹಿಂದೂ ಪರಿಷತ್ ವರ್ಕಾಡಿ ಖಂಡ ಸಮಿತಿಯ ಅಧ್ಯಕ್ಷ ಅಶೋಕ್ ತಾಮಾರ್, ಕಾರ್ಯದರ್ಶಿ ಅಧೀಶ್, ಬಜರಂಗದಳ ಸಂಯೋಜಕ …

ಪೈವಳಿಕೆ ಸರ್ವೀಸ್ ಸಹಕಾರಿ ಬ್ಯಾಂಕ್‌ಗೆ ಅಶ್ವತ್ಥ್ ಪೂಜಾರಿ ಲಾಲ್‌ಭಾಗ್ ಅಧ್ಯಕ್ಷರಾಗಿ ಪುನರಾಯ್ಕೆ

ಪೈವಳಿಕೆ: ಪೈವಳಿಕೆ ಸರ್ವೀಸ್ ಸಹಕಾರಿ ಬ್ಯಾಂಕ್ ನಂ. ೩೯೮ನೇ ಅಧ್ಯಕ್ಷರಾಗಿ ಅಶ್ವಥ್ ಪೂಜಾರಿ ಲಾಲ್‌ಭಾಗ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುಷ್ಪ ಜಯರಾಮ ಬಾಯಿಕಟ್ಟೆ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಅಶ್ವಥ್ ಪೂಜಾರಿ ಲಾಲ್‌ಭಾಗ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪುಷ್ಪ ಜಯರಾಮ ಬಾಯಿಕಟ್ಟೆ ಅವರಿಗೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಹಕಾರ ಕ್ಷೇತ್ರದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಕುಂಬಳೆ ಠಾಣೆ ಎಸ್‌ಐ ಆಗಿ ಅನೂಬ್, ಸಿಐ ಆಗಿ ಅನೂಪ್ ಕೃಷ್ಣ ನೇಮಕ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯಲ್ಲಿ ನೂತನ ಎಸ್‌ಐ ಆಗಿ ಎಸ್.ಅನೂಬ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಆರ್.ಪಿ. ಅನೂಪ್‌ಕೃಷ್ಣ ಅಧಿಕಾರ ವಹಿಸಿಕೊಂಡಿ ದ್ದಾರೆ. ಎಸ್‌ಐ ಅನೂಬ್‌ರನ್ನು ವಿದ್ಯಾನಗರ ಪೊಲೀಸ್ ಠಾಣೆಯಿಂದ ಕುಂಬಳೆಗೆ ವರ್ಗಾಯಿಸಲಾಗಿದೆ. ತಿರುವನಂ ತಪುರ ಕಾಟಾಕಡ ನಿವಾಸಿಯಾದ ಇವರು ಈ ಮೊದಲು ಕಲ್ಲಿಕೋಟೆ, ಪಂದಿರಾಕಾವ್, ಫರೂಕ್ ಠಾಣೆಗಳಲ್ಲಿ ಎಸ್‌ಐ ಆಗಿದ್ದರು.   ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡ ಆರ್‌ಪಿ ಅನೂಪ್‌ಕೃಷ್ಣ ತಿರುವನಂತಪುರ ಕೊಡಪ್ಪನಕುನ್ನು ನಿವಾಸಿಯಾಗಿದ್ದಾರೆ. ಈ ಹಿಂದೆ ತಿರುವನಂತಪುರ, ಕೋಟ್ಟಯಂ, ಕೊಲ್ಲಂ, ಪತ್ತನಂತಿಟ್ಟ, ಕುಂಬಳೆ ಕರಾವಳಿ ಠಾಣೆಗಳಲ್ಲಿ …

ನಿಡ್ಡಂಬಾಡಿ ರಾಮ ನಿಧನ

ಕುಂಬಳೆ: ಕಳತ್ತೂರು ಇಚ್ಲಂಪಾಡಿ ಶಾಲಾ ಪರಿಸರ ನಿವಾಸಿ ನಿಡ್ಡಂಬಾಡಿ ರಾಮ (57) ನಿಧನ ಹೊಂದಿದರು. ಮತರು ಪತ್ನಿ ಜಯಂತಿ, ಮಕ್ಕಳಾದ ದೇವಿಕ, ಜಯಲಕ್ಷಮಿ, ಅಳಿಯ ಸುಧೀರ್, ಸಹೋದರಿ ಸುಶೀಲ, ಸಹೋದರ ಸೇಸಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಾರಾಯಣ ಪೂಜಾರಿ ನಿಧನ

 ದೇಲಂಪಾಡಿ:  ಮಯ್ಯಳ ನಿವಾಸಿ ನಾರಾಯಣ ಪೂಜಾರಿ (73) ನಿನ್ನೆ ನಿಧನಹೊಂದಿದರು. ಇವರು ಕೃಷಿಕನಾಗಿದ್ದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಭರತ್, ವಿಮಲ, ಅಶೋಕ, ಸಹೋದರ ಕುಶಲಪ್ಪ, ಅಳಿಯ ನಾಗೇಶ ಬಾಯಾರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.