ವ್ಯಾಪಾರಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಲ್ಲೆಗೈದು ಕಾರು ಸಹಿತ ತಂಡ ಪರಾರಿ

ಕುಂಬಳೆ: ಬಂದ್ಯೋಡಿನಲ್ಲಿ ವ್ಯಾಪಾರಿಯನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಬಳಿಕ ಅವರ ಕಾರನ್ನು ತಂಡ ಅಪಹರಿಸಿರುವುದಾಗಿ ದೂರಲಾಗಿದೆ.  ವ್ಯಾಪಾರಿಯ ಐಫೋನ್‌ನ್ನು ತಂಡ ಕಸಿದುಕೊಂಡಿದೆ.  ಬಂದ್ಯೋಡು ಹಾಗೂ ಮಂಗಳೂರಿನಲ್ಲಿ ವ್ಯಾಪಾರ ಸಂಸ್ಥೆ ನಡೆಸುವ ಮಳ್ಳಂಗೈಯ ಅಲಿ ಮುಕ್ತಾದ್ (34)ರ ಮೇಲೆ ತಂಡ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ  ಅಡ್ಕ ಗುರ್ಮೆ ಸಾರ್ವಜನಿಕ ಸ್ಮಶಾನದ ಸಮೀಪ ಘಟನೆ ನಡೆದಿದೆ. ಅಲಿ ಮುಕ್ತಾದ್ ಬಂದ್ಯೋಡಿನಿಂದ ಮನೆಗೆ ಕಾರಿನಲ್ಲಿ ತೆರಳುತ್ತಿದ್ದರು.ಗುರ್ಮೆಗೆ ತಲುಪಿದಾಗ …

ಕುಂಬಳೆ ಪೊಲೀಸ್ ಠಾಣೆಯಲ್ಲಿ ಕೈಗೊಂಡ ಟ್ರಾಫಿಕ್ ಪರಿಷ್ಕಾರ ಉಲ್ಲಂಘನೆ-ಆರೋಪ ;  ಖಾಸಗಿ ಬಸ್ ನೌಕರರಿಂದ ಮುಷ್ಕರ ಮುನ್ನೆಚ್ಚರಿಕೆ

ಕುಂಬಳೆ: ಇತ್ತೀಚೆಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಎಎಸ್‌ಪಿ, ಆರ್‌ಟಿಒ, ಪಂಚಾಯತ್ ಜನಪ್ರತಿ ನಿಧಿಗಳು, ಬಸ್ ಕಾರ್ಮಿಕರು,  ಸಂಘಟನೆಗಳ ನೇತಾರರು ಸೇರಿ ಕೈಗೊಂಡ ಟ್ರಾಫಿಕ್ ಪರಿಷ್ಕಾರವನ್ನು  ಇದೀಗ ಟ್ರಾಫಿಕ್ ರೆಗ್ಯುಲೇಟರಿ ಕಮಿಟಿ   ಉಲ್ಲಂಘಿಸಿದೆಯೆಂದು ಬಸ್ ನೌಕರರು  ಆರೋಪಿಸುತ್ತಿದ್ದಾರೆ.   ಬದಿಯಡ್ಕ, ಪೆರ್ಲ ಸಹಿತ ಸೀತಾಂಗೋಳಿ ಭಾಗದಿಂದ ಕುಂಬಳೆಗೆ ತಲುಪುವ ಖಾಸಗಿ ಬಸ್‌ಗಳನ್ನು  ಪ್ರಸ್ತುತ ಸ್ಥಳದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದರ ಬದಲು ಬಸ್‌ಗಳನ್ನು ಕುಂಬಳೆಯ ಹಳೆ ಬಸ್ ನಿಲ್ದಾಣಕ್ಕೆ ಕೊಂಡೊಯ್ದು ಪ್ರಯಾಣಿಕರನ್ನು ಇಳಿಸುವಂತೆ ಟ್ರಾಫಿಕ್ ರೆಗ್ಯುಲೇಟರಿ ಕಮಿಟಿ ಸಿಐಗೆ  ಸೂಚಿಸಿರುವುದಾಗಿ ಹೇಳಲಾಗುತ್ತಿದೆ. …

ಕೆಲಸ ಭರವಸೆ ನೀಡಿ ಕರ್ನಾಟಕ ನಿವಾಸಿ ಯುವತಿಯನ್ನು ಅಂಬಲತ್ತರಕ್ಕೆ ಕರೆತಂದು ಮಾನಭಂಗ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಉದ್ಯೋಗ ಭರವಸೆ ನೀಡಿ ಕರ್ನಾಟಕ ನಿವಾಸಿ ಯುವತಿಯನ್ನು ಅಂಬಲತ್ತರಕ್ಕೆ ಕರೆತಂದು ಮಾನಭಂಗ ಗೈದಿರುವು ದಾಗಿ ದೂರಲಾಗಿದೆ. ೩೦ರ ಹರೆಯದ ಯುವತಿ ನೀಡಿದ ದೂರಿನಂತೆ ಇರಿಯದ ಬಶೀರ್, ಪಳ್ಳಿಕೆರೆಯ ಆಶಿಕ್ ಎಂಬಿವರ ವಿರುದ್ಧ ಅಂಬಲತ್ತರ ಪೊಲೀಸರು ಕೇಸು ದಾಖಲಿಸಿದ್ದಾರೆ. ಜನವರಿ, ಮಾರ್ಚ್ ತಿಂಗಳುಗಳಲ್ಲಿ ಪ್ರಕರಣಕ್ಕೆ ಆಸ್ಪದವಾದ ಘಟನೆ ಜರಗಿದೆ. ಕೆಲಸ ನೀಡುವುದಾಗಿ ತಾಯಿಗೆ ಭರವಸೆ ಕೊಟ್ಟು ಆರೋಪಿಗಳಲ್ಲಿ ಓರ್ವ ಯುವತಿಯನ್ನು ಜೊತೆಗೆ ಕರೆದುಕೊಂಡು ಬಂದಿರುವುದಾಗಿ ಹೇಳಲಾಗುತ್ತಿದೆ. ಅದರ ಬಳಿಕ ಅಂಬಲತ್ತರಕ್ಕೆ ಕೊಂಡೊಯ್ದು ಒಂದು ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ …

ಸ್ಕೂಟರ್ ಅಪಘಾತಕ್ಕೀಡಾಗಿ ಯುವಕ ದಾರುಣ ಮೃತ್ಯು

ಮಂಜೇಶ್ವರ:  ವಾಮಂಜೂರು ಚೆಕ್ ಪೋಸ್ಟ್ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ  ಮಗುಚಿಬಿದ್ದು ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದಾನೆ. ಕರ್ನಾಟಕದ ಬೆಳ್ತಂಗಡಿ ನಿವಾಸಿಯೂ ಮಂಗಳೂರಿನಲ್ಲಿ ಕೆಫೆ ನೌಕರನಾಗಿರುವ  ಬಾತಿಷ (25) ಮೃತಪಟ್ಟ ದುರ್ದೈವಿ. ಇಂದು ಮುಂಜಾನೆ 3 ಗಂಟೆಗೆ ವಾಮಂಜೂರು ಚೆಕ್ ಪೋಸ್ಟ್  ಟರ್ಫ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವುಂಟಾಗಿದೆ. ಸ್ನೇಹಿತನೊಂದಿಗೆ ಕಾಸರಗೋಡು ಭಾಗದಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆ  ಸ್ಕೂಟರ್ ಸ್ಕಿಡ್ ಆಗಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಬಾತಿಷರನ್ನು ಸ್ಥಳೀಯರು ಕೂಡಲೇ …

ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಕಾಸರಗೋಡು:  ತೈಕಡಪ್ಪುರದ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನಾಪತ್ತೆಯಾದ ಅಜ್ಮಲ್ ಎಂಬ ಯುವಕನ ಮೃತದೇಹ ಪತ್ತೆಯಾಗಿದೆ. ತೈಕಡಪ್ಪುರದಿಂದ  ಇಂದು ಬೆಳಿಗ್ಗೆ ಮೀನುಗಾರಿಕೆಗಾಗಿ ಹೋದ   ಮೀನು ಕಾರ್ಮಿಕರು ಅಳಿವೆ ಬಾಗಿಲು ಸಮೀಪ ಸಮುದ್ರದಲ್ಲಿ ತೇಲುತ್ತ್ತಿದ್ದ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಈ ವಿಷಯವನ್ನು ಕರಾವಳಿ ಪೊಲೀಸರಿಗೆ ತಿಳಿಸಲಾಯಿತು.  ಪೊಲೀಸರ ನಿರ್ದೇಶ ಪ್ರಕಾರ  ಮೀನು ಕಾರ್ಮಿಕರು ತಮ್ಮ  ಬೋಟ್‌ನಲ್ಲಿ ಮೃತದೇಹವನ್ನು ದಡಕ್ಕೆ ತಲುಪಿಸಿದ್ದಾರೆ. ಮೃತದೇಹವನ್ನು ಕಾಞಂಗಾಡ್‌ನ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಕಳೆದ ಶನಿವಾರ ಸಂಜೆ ತೈಕಡಪ್ಪುರ ಸ್ಟೋರ್ ಕವಲ ಎವಿ ಹೌಸ್‌ನ …

ಕಾರು- ಬೈಕ್ ಢಿಕ್ಕಿ: ಸವಾರ ಗಂಭೀರ ಗಾಯ

ಮಂಜೇಶ್ವರ: ವೈದ್ಯರು ಚಲಾಯಿಸುತ್ತಿದ್ದ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತೂಮಿನಾಡು ಸರ್ವೀಸ್ ರಸ್ತೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ತಲ ಪಾಡಿ ಭಾಗದಿಂದ ಡಾ. ಜಯಪಾಲ್ ಶೆಟ್ಟಿ ಚಲಾಯಿಸುತ್ತಿದ್ದ ಕಾರು ಹಾಗೂ ಕುಂಜತ್ತೂರು ಭಾಗದಿಂದ ತಲಪಾಡಿ ಕಡೆಗೆ ಸಂಚರಿಸುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಇದರಿಂದ ಬೈಕ್ ಸವಾರ ಕುಂಜತ್ತೂರು ನಿವಾಸಿ ನಿಯಾಸ್ ಗಂಭೀರ ಗಾಯ ಗೊಂಡಿದ್ದು, ಅವರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಅಪಘಾತದಲ್ಲಿ ಕಾರು …

ಎಂಡಿಎಂಎ ಸಾಗಾಟ: ಅಂತಾರಾಷ್ಟ್ರೀಯ ಮಾದಕದ್ರವ್ಯ ದಂಧೆಯ ವಿದೇಶಿ ಪ್ರಜೆ ಸೇರಿದಂತೆ ಇಬ್ಬರ ಸೆರೆ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಿಂದ ಇತ್ತೀಚೆಗೆ ಪೊಲೀಸರು ೧೩೯.೨೯ ಗ್ರಾಂ ಮಾದಕದ್ರವ್ಯವಾದ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಘಾನಾ ನಿವಾಸಿ ವಿಕ್ಟರ್ ದಸಾಬೆ (37) ಹಾಗೂ ಗುಜರಾತ್ ಅಹಮ್ಮದಾಬಾದ್ ಲ್ಯಾಂಬ ನಿವಾಸಿ ಹಾಗೂ ಈಗ ಪಶ್ಚಿಮ ಬಂಗಾಳ ಹೌರ ಜಿಲ್ಲೆಯ ನರೇಂದ್ರ ಪುಟ್‌ನಲ್ಲಿ ವಾಸಿಸುತ್ತಿರುವ ರಿಯಾಖಾನ್ ಅಲಿಯಾಸ್ ಸಾಥಿ ಶೇಖ್ (31) ಬಂಧಿತ ಆರೋಪಿಗಳು. ಇವರನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ …

ಕುಂಬಳೆಯಲ್ಲಿ ಚರಂಡಿಯ ಸ್ಲ್ಯಾಬ್ ಕುಸಿದು ಸಿಲುಕಿಕೊಂಡ ಲಾರಿ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಬದಿಯಡ್ಕ ಭಾಗಕ್ಕೆ ತೆರಳುವ  ಕೆಎಸ್‌ಟಿಪಿ ರಸ್ತೆ ಬದಿಯ ಚರಂಡಿಗೆ  ನಿರ್ಮಿಸಿದ ಸ್ಲ್ಯಾಬ್ ಕುಸಿದು ಲಾರಿಯೊಂದು ಸಿಲುಕಿಕೊಂಡಿದೆ. ನಿನ್ನೆ ಮಧ್ಯಾಹ್ನ ಸರಕು ಹೇರಿ ಬಂದ ಲಾರಿ ಸ್ಲ್ಯಾಬ್‌ನ ಮೇಲೆ ಹತ್ತುತ್ತಿದ್ದಂತೆ ಸ್ಲ್ಯಾಬ್ ಕುಸಿದು ಲಾರಿಯ ಟಯರ್ ಹೂತುಹೋಗಿದೆ. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾ ಯಿತು. ಚರಂಡಿ ನಿರ್ಮಿಸಿದ ಬಳಿಕ ಇದು ಮೂರನೇ ಬಾರಿ ಲಾರಿ  ಸ್ಲ್ಯಾಬ್ ಕುಸಿದು ಹಾನಿಗೀಡಾದ ಘಟನೆ ನಡೆದಿದೆ.  ಸ್ಲ್ಯಾಬ್ ನಿರ್ಮಿಸಿ ರುವುದರಲ್ಲಿ ಲೋಪವುಂಟಾ ಗಿದೆಯೆಂದು ಈಮೊದಲೇ ನಾಗರಿಕರು ಆರೋಪಿಸಿದ್ದರು.

ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಗಳ ಮಹಾಸಭೆ, ಲಾಂಛನ ಬಿಡುಗಡೆ

ಬದಿಯಡ್ಕ: ಜನವರಿ 19ರಿಂದ 26ರವರೆಗೆ ನಡೆಯಲಿರುವ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ನವೀಕರಣ, ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಯಾಗಿ ಉಪಸಮಿತಿ ಹಾಗೂ ಸರ್ವ ಸಮಿತಿಗಳ ಮಹಾಸಭೆ ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಿದ್ಧತೆಗಳು, ವಿವಿಧ ಸಮಿತಿಗಳ ಕಾರ್ಯಯೋಜನೆಗಳು ಹಾಗೂ ವಹಿಸಲಾಗಿರುವ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಲಾಂಛನ ಅನಾ ವರಣಗೊಳಿಸಲಾಯಿತು. ಬ್ರಹ್ಮಕಲ ಶೋತ್ಸವ ಸಮಿತಿ ಅಧ್ಯಕ್ಷ, ಧಾರ್ಮಿಕ ಮುಂದಾಳು ಮಧುಸೂಧನ ಆಯರ್ ಅಧ್ಯಕ್ಷತೆ …

ಎಂಡೋಸಲ್ಫಾನ್ ಸಂತ್ರಸ್ತರಾದ 35೦ ಮಂದಿಗೆ 17 ಕೋಟಿ 5೦ ಲಕ್ಷ ರೂ. ವಿತರಣೆ- ಜಿಲ್ಲಾಧಿಕಾರಿ

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗಿರುವ ಧನಸಹಾಯವಾಗಿ 17 ಕೋಟಿ 5೦ ಲಕ್ಷ ರೂ. ವಿತರಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 2017ರಲ್ಲಿ ನಡೆಸಿದ ಎಂಡೋಸಲ್ಫಾನ್ ಸಂತ್ರಸ್ತರಿಗಿರುವ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ ಯಾದಿಯಲ್ಲಿ ಒಳಗೊಂಡ 35೦ ಮಂದಿಗೆ ನಷ್ಟ ಪರಿಹಾರ ಮೊತ್ತವಾದ 5 ಲಕ್ಷ ರೂ.ನಂತೆ ಧನಸಹಾಯ ನೀಡಲಾಗಿದೆ. ಇದುವರೆಗೆ 17 ಕೋಟಿ 5೦ ಲಕ್ಷ ರೂ. ವಿತರಿಸಿದ್ದು, ಒಟ್ಟು 977 ಮಂದಿ ಯಾದಿಯಲ್ಲಿ ಒಳಗೊಂಡಿದ್ದಾರೆ. ಇದರ ಹೊರತಾಗಿ 201 ಅರ್ಜಿಗಳಲ್ಲಿ ಧನ ಸಹಾಯ ಮಂಜೂರು ಮಾಡುವುದಕ್ಕಿರುವ ಕ್ರಮಗಳು ಪ್ರಗತಿಯಲ್ಲಿದೆ. 2017ರ ಶಿಬಿರದಲ್ಲಿ …