4 ತಿಂಗಳ ಹಿಂದೆ ಅಭಿವೃದ್ಧಿಪಡಿಸಿದ ಲಾಲ್‌ಭಾಗ್- ಅಮ್ಮೇರಿ ರಸ್ತೆಗೆ ತೇಪೆ: ಸ್ಥಳೀಯರಿಂದ ತರಾಟೆ

ಪೈವಳಿಕೆ: ಲಾಲ್‌ಭಾಗ್-ಕುರುಡಪದವು ರಸ್ತೆಯ ಅಮ್ಮೇರಿ ತನಕ ಕಳೆದ ನಾಲ್ಕು ತಿಂಗಳ ಹಿಂದೆ ಅಭಿವೃದ್ದಿಗೊಳಿಸಿದ ರಸ್ತೆ ಒಂದೇ ಮಳೆಗೆ ಅಲ್ಲಲ್ಲಿ ಡಾಮರು ಎದ್ದÄ ಶೋಚನೀಯÁವಸ್ಥೆಗೆ ತಲುಪಿರುವುದು ಊರವರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಕಾಮಗಾರಿ ಆರಂಭದ ವೇಳೆಯೇ ಕಳಪೆ ಮಟ್ಟದಲ್ಲಿ ಡಾಮರೀ ಕರಣ ನಡೆಸಿರುವುದಾಗಿ ಆರೋಪಿಸಿ ಊರವರು ಪ್ರತಿಭಟನೆ ನಡೆಸಿದ್ದರು. ರಸ್ತೆಗೆ ಮರು ಡಾಮರೀಕರಣಗೊಳಿ ಸಲು ಬೇಡಿಕೆ ಇಟ್ಟಿದ್ದರು. ಈಗ ಶೋಚನೀಯÁವಸ್ಥೆಗೆ ತಲುಪಿದ ರಸ್ತೆಗೆ ಅಲ್ಲಲ್ಲಿ ತೇಪೆ ಹಾಕುವ ಕೆಲಸ ಆರಂಭಿಸಿದ್ದಾರೆ. ಆದರೆ ತೇಪೆ ಹಾಕದೆ ಮರು ಡಾಮರೀಕರಣಗೊಳಿಸಬೇಕೆಂದು ಆಗ್ರಹಿಸಿ …

ಕಾಸರಗೋಡು ನಗರದ ಮೀನು ಮಾರುಕಟ್ಟೆ ಆಧುನಿಕ ರೀತಿಯಲ್ಲಿ ನಿರ್ಮಿಸಲು ಫಿಶರೀಸ್ ಇಲಾಖೆ ಸಚಿವರಿಗೆ ನಗರಸಭೆಯಿಂದ ಮನವಿ

ಕಾಸರಗೋಡು: ನಗರದ ಪ್ರಧಾನ ಮೀನು ಮಾರಾಟ ಕೇಂದ್ರವಾದ ನಗರಸಭೆಯ ಮಾಲಕತ್ವದಲ್ಲಿರುವ ಮೀನು ಮಾರುಕಟ್ಟೆ ಆಧುನಿಕ ಸೌಕರ್ಯಗಳೊಂದಿಗೆ ವಿಶಾಲವಾದ ಮೀನು ಮಾರುಕಟ್ಟೆ ಸಮುಚ್ಚಯವಾಗಿ ಪುನರ್ ನಿರ್ಮಿಸಬೇಕೆಂದು ಆಗ್ರಹಿಸಿ ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಶಾಸಕ ಕಲ್ಲಟ್ರ ಮಾಹಿನ್‌ರ ಉಪಸ್ಥಿತಿಯಲ್ಲಿ ಫಿಶರೀಸ್ ಇಲಾಖೆ ಸಚಿವ ವಿ.ಇ. ಅಬ್ದುಲ್ ಗಫೂರ್‌ಗೆ ಮನವಿ ನೀಡಲಾಯಿತು. ಪ್ರಸ್ತುತ ಇರುವ ಮೀನು ಮಾರುಕಟ್ಟೆಯಲ್ಲಿ ಹಲವಾರು ಮೂಲಭೂತ ಸೌಕರ್ಯ ಗಳ ಕೊರತೆಯಿಂದ ಸಂದಿಗ್ಧತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ನೇತೃತ್ವದಲ್ಲಿ ಈ ಮನವಿ ನೀಡಲಾಗಿದೆ. ರಾಜ್ಯ ಫಿಶರೀಸ್ ಬೋರ್ಡ್ …

ಮೀಯಪದವಿನಲ್ಲಿ ನಾಳೆ ಎಸ್.ವಿ ಭಟ್ ಸಂಸ್ಮರಣೆ, ಕವಿಗೋಷ್ಠಿ 

ಮೀಯಪದವು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ, ನಿವೃತ್ತ ಶಿಕ್ಷಣ ಅಧಿಕಾರಿ ಎಸ್.ವಿ. ಭಟ್‌ರ ಸಂಸ್ಮರಣ ಕಾರ್ಯಕ್ರಮ ಮತ್ತು ಕವಿಗೋಷ್ಠಿ ನಾಳೆ ಸಂಜೆ 3.46ಕ್ಕೆ ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯ ಸಭಾಂಗಣ ‘ಕೇಶವಾಮೃತಂ’ನಲ್ಲಿ ನಡೆಯಲಿದೆ. ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಟಿ. ಸಂಸ್ಮರಣಾ ಭಾಷಣ ಮಾಡುವರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕನ್ನಡ ಲೇಖಕ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ.ಎನ್. …

ಓಂಬ್ರದರ್ಸ್ ಕುಂಬಳೆಯಿಂದ ಕುಂಟಂಗೇರಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರಕ್ಕೆ ಶೌಚಾಲಯ ಕೊಡುಗೆ

ಕುಂಬಳೆ : ಕುಂಬಳೆಯಲ್ಲಿ ಕಳೆದ ೨೬ ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಓಂ ಬ್ರದರ್ಸ್ ಕುಂಬಳೆ ಸಂಸ್ಥೆಯ ವತಿಯಿಂದ ಶ್ರೀ ಭಜನಾ ಮಂದಿರಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ೨ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಶೌಚಾಲಯವನ್ನು ಉದ್ಘಾಟಿಸಲಾಯಿತು.ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂತ್ರಿವರ್ಯ ಶ್ರೀ ಯೋಗೀಶ್ ಕಡಮಣ್ಣಾಯ, ಓಂ ಬ್ರದರ್ಸ್ನ ಅಧ್ಯಕ್ಷ ರಾಜೇಶ್ ಪೂಜಾರಿ, ಕಾರ್ಯದರ್ಶಿ ಪುರುಷೋತ್ತಮ್, ಧಾರ್ಮಿಕ ಮುಂದಾಳು ಶಂಕರ ಆಳ್ವ ಕೋಟೆಕಾರ್, ಕುಂಬಳೆ ಗ್ರಾಮ …

ಪರಮೇಶ್ವರಿ ನಿಧನ

ಬದಿಯಡ್ಕ: ಪಳ್ಳತ್ತಡ್ಕ ಕೋಳಾರುಮೂಲೆಯ ದಿ| ಕೊಗ್ಗು ನಾಯ್ಕ್‌ರ ಪತ್ನಿ ಪರಮೇಶ್ವರಿ (83) ನಿಧನ ಹೊಂದಿದರು. ಇವರ ಏಕ ಪುತ್ರಿ ಲಲಿತ ಈ ಹಿಂದೆ ನಿಧನ ಹೊಂದಿದ್ದರು. ಮೃತರು ಸಹೋದರ ನಾರಾಯಣ ನಾಯ್ಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಸಹೋದರಿಯರಾದ ಎಂಕಮ್ಮ, ಕಾವೇರಿ, ಗಂಗಮ್ಮ ಈ ಹಿಂದೆ ನಿಧನ ಹೊಂದಿದ್ದಾರೆ.

ಬಾಲಕೃಷ್ಣ ನಾಯ್ಕ್ ನಿಧನ

ಬೆಳ್ಳೂರು: ಕಿನ್ನಿಂಗಾರು ರೆಂಜೆಮೂಲೆ ಪರಿವಾರ ಬಂಟ ಸಮುದಾಯ, ಪುತ್ತಿಗೆ ತರವಾಡು ಮನೆಯ ಹಿರಿಯ ಸದಸ್ಯ ಬಾಲಕೃಷ್ಣ ನಾಕ್ (72) ನಿನ್ನೆ ನಿಧನ ಹೊಂದಿ ದರು. ವಾಣಿನಗರದ ಆನ್‌ಲೈನ್ ಸೇವಾ ಕೇಂದ್ರಕ್ಕೆ ಯಾವುದೋ ಕೆಲಸದ ನಿಮಿತ್ತ ಆಗಮಿಸಿದ್ದ ಇವರು ಅಲ್ಲಿಂದ ಹಿಂತಿರುಗುವಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ವನಿತ, ಮಕ್ಕಳಾದ ಚೇತನ್ ನಾಕ್, ಚೈತನ್ಯ, ಅಳಿಯ ಸುನಿಲ್, ಸೊಸೆ ಅಕ್ಷತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪಿಣರಾಯಿ ವಿಜಯನ್ ಸಾರ್ವಜನಿಕ ಚಟುವಟಿಕೆಯಿಂದ ದೂರ ನಿಂತು ತನಿಖೆ ಎದುರಿಸಬೇಕು- ವಿ.ಕೆ. ಸಜೀವನ್

ಕಾಸರಗೋಡು: ಕಪ್ಪು ಮರಳು ಗಣಿಗಾರಿಕೆಗೆ ಸಂಬಂಧಿಸಿ ಅನಧಿಕೃತ ವ್ಯವಹಾರಗಳ ಮೂಲಕ ೩.೨೮ ಕೋಟಿ ರೂ. ಪುತ್ರಿಯ ಕಂಪೆನಿಯಾದ ಸಂಸ್ಥೆಯ ಮೂಲಕ ತಿಂಗಳ ವೇತನ ಸ್ವೀಕರಿಸಿರುವುದಾಗಿ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಾರ್ವಜನಿಕ ಚಟುವಟಿಕೆಗಳಿಂದ ದೂರವಿದ್ದು ತನಿಖೆ ಎದುರಿಸಬೇಕೆಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ಆಗ್ರಹಿಸಿದರು. ರಾಜ್ಯದ ಕರಾವಳಿಯನ್ನು ಕೊಳ್ಳೆ ಹೊಡೆಯಲು ಒತ್ತಾಸೆಗೈದುದರ ಪ್ರತಿಫಲವಾಗಿ ಪಿಣರಾಯಿ ವಿಜಯನ್ ಈ ಮೊತ್ತವನ್ನು ಪಡೆದುಕೊಂಡಿರುವುದಾಗಿ ಸಜೀವನ್ ಆರೋಪಿಸಿದರು. ಪಿ.ಎಂ.ಎಲ್.ಎ ಆಕ್ಟ್ ಸೆಕ್ಷನ್ 66(2) ಪ್ರಕಾರ ಪಿಣರಾಯಿ …

ನರೇಂದ್ರ ಮೋದಿ ಆಡಳಿತದಲ್ಲಿ 25ವರ್ಷ: ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ

ಕಾಸರಗೋಡು: ನರೇಂದ್ರ ಮೋದಿ ಜನಸೇವೆಯ ಹಾದಿಯಲ್ಲಿ ೨೫ ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ಮಂಡಲ ಉಪ ಸಮಿತಿ ಸದಸ್ಯರಿಗಾಗಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಕಾರ್ಯಾ ಗಾರವನ್ನು ಆಯೋಜಿಸಲಾಯಿತು. ಬಿಜೆಪಿ ಕಣ್ಣೂರು ವಲಯ ಪ್ರಭಾರಿ ಹಾಗೂ ಬಿಜೆಪಿ ರಾಜ್ಯ ಸೆಲ್ ಸಂಯೋಜಕ ವಿ.ಕೆ. ಸಜೀವನ್ ಉದ್ಘಾಟಿಸಿದರು.ಚುನಾಯಿತ ಆಡಳಿತಗಾರರಾಗಿ ಕಾಲು ಶತಮಾನ ಪೂರೈಸಿರುವ ನರೇಂದ್ರ ಮೋದಿಯವರು ವಿಶ್ವ ನಾಯಕರ ಸಾಲಿನಲ್ಲಿ ಅತ್ಯಂತ ಪ್ರಬಲ …