ಬಸ್ ನಿಲ್ದಾಣದಲ್ಲಿ ಗೆಳೆಯನ ಕಾಯುತ್ತಿದ್ದ ಯುವಕನಿಗೆ ಆಕ್ರಮಣ: ಇಬ್ಬರ ಸೆರೆ

ಕಣ್ಣೂರು: ಹಳೆ ಬಸ್ ನಿಲ್ದಾಣದಲ್ಲಿ ಗೆಳೆಯನನ್ನು ಕಾಯುತ್ತಿದ್ದ ಯುವಕನಿಗೆ ಆಕ್ರಮಣ ನಡೆಸಿ ಚಿನ್ನದ ಸರ ಹಾಗೂ ಮೊಬೈಲ್ ಫೋನ್  ಅಪಹರಿಸಲು ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದರು. ತಮಿಳುನಾಡು ಕಳ್ಳಕುರಿಚ್ಚಿ ಅಂಬಕಳತ್ತೂರು ನಿವಾಸಿ ವಿನೋದ್ (28), ತೂತುಕುಡಿಯ ಆಂಡವನ್ ಕುದಿರವೇಲ್‌ರಾಜ್ (21) ಎಂಬಿವರನ್ನು ಕಣ್ಣೂರು ಟೌನ್ ಎಸ್‌ಐ ಪಿ.ಪಿ ಶಮೀಲ್‌ರ ನೇತೃತ್ವದಲ್ಲಿ ಬಂಧಿಸಲಾಗಿದೆ. ನಿನ್ನೆ ರಾತ್ರಿ ಅಲ್ಲಿನ ಹಳೆ ಬಸ್ ನಿಲ್ದಾಣದಲ್ಲಿ ಕಳವು ನಡೆಸಿದ ಆರು ಮಂದಿಯ ತಂಡದ ಪ್ರಧಾನ ಸೂತ್ರಧಾರರು ಈಗ ಸೆರೆಯಾದವರೆಂದು ಪೊಲೀಸರು ತಿಳಿಸಿದ್ದಾರೆ. ತೆಕ್ಕಬಜಾರ್ ನಿವಾಸಿಯಾದ ೪೧ರ ಹರೆಯದ ವ್ಯಕ್ತಿ ಸೋಮವಾರ ರಾತ್ರಿ ವಿನೋದ್ ಹಾಗೂ ಕುದಿರವೇಲ್‌ರಾಜ್‌ರ ಆಕ್ರಮಣಕ್ಕೆ ತುತ್ತಾಗಿದ್ದರು. ಯುವಕ ಪ್ರತಿರೋಧವೊಡ್ಡಲು ಯತ್ನಿಸಿದಾಗ ಹೆಲ್ಮೆಟ್‌ನಿಂದ ಬಡಿದು ಅಕ್ರಮಿ ಸಂಘ ಪರಾರಿಯಾಗಿದೆ. ಮಾಹಿತಿ ತಿಳಿದು ಪೊಲೀಸ್ ನಗರದಲ್ಲಿ ಹುಡುಕಾಟ ನಡೆಸಿ ಈ ಇಬ್ಬರನ್ನು ಪತ್ತೆಹಚ್ಚಿದೆ. ಇವರನ್ನು ಸಮಗ್ರವಾಗಿ ಪ್ರಶ್ನಿಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page