ಸೋಂಕಾಲ್ ಮನೆ ಕಳವು : ಮಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೂವರು ಆರೋಪಿಗಳು ಕುಂಬಳೆ ಪೊಲೀಸರ ಕಸ್ಟಡಿಗೆ

ಕುಂಬಳೆ: ಕಳವು ಪ್ರಕರಣದಲ್ಲಿ ಸೆರೆಗೀಡಾಗಿ ಮಂಗಳೂರಿನ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೂವರು ಆರೋಪಿಗಳನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಮಂಜೇಶ್ವರ ನಿವಾಸಿ ಮೊಹಮ್ಮದ್ ಶಿಹಾಬ್ (30), ಮಂಗಳೂರು ಗಂಜೀಮಠ ನಿವಾಸಿಗಳಾದ ಮೊಹಮ್ಮದ್ ಸಫ್ವಾನ್ (20), ಮೊಹಮ್ಮದ್ ಅರ್ಫಾಸ್ (19) ಎಂಬಿವರನ್ನು ಕುಂಬಳೆ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ. ಕೆ. ಶ್ರೀಜಿತ್ ಕಸ್ಟಡಿಗೆ ತೆರೆದುಕೊಂ ಡಿದ್ದಾರೆ. ಸೋಂಕಾಲ್‌ನ ಮನೆ ಯೊಂದರಿಂದ ನಡೆದ ಕಳವು ಪ್ರಕರಣದಲ್ಲಿ ಈ ಮೂವರು ಶಾಮೀಲಾಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ  ತನಿಖೆಯ ಅಂಗವಾಗಿ ಇವರನ್ನು ಕಸ್ಟಡಿಗೆ ತೆಗೆಯಲಾಗಿದೆ. ಸೋಂಕಾಲ್ ಸುಭಾಶ್ ನಗರದ ಆಯಿಶಾ ಯೂಸಫ್ ಎಂಬವರ ಮನೆಯಿಂದ 2024 ಜೂನ್ ೪ರಂದು 1.20 ಲಕ್ಷ ರೂಪಾಯಿ ಮೌಲ್ಯದ ಐಫೋನ್ ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳು ಕಳವಿಗೀಡಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಈ ಸೊತ್ತುಗಳನ್ನು ದೋಚಿದ್ದರು. ಈ ಪ್ರಕರಣದಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬಂದ್ಯೋಡು ಅಡ್ಕದ ಅಶ್ರಫ್ ಅಲಿ (25) ಎಂಬಾತನನ್ನು ಇತ್ತೀಚೆಗೆ  ಬಂಧಿಸಿದ್ದರು. ಈತನನ್ನು ಪೊಲೀಸರು ತನಿಖೆಗೊಳಪಡಿಸಿದಾಗ ಮಂಜೇಶ್ವರದ ಮೊಹಮ್ಮದ್ ಶಿಹಾಬ್, ಮಂಗಳೂರು ಗಂಜೀಮಠದ ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ಅರ್ಫಾಸ್ ಎಂಬಿವರನ್ನು ಈ ಕಳವಿನಲ್ಲಿ ಭಾಗಿಯಾಗಿದ್ದರೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ  ಮೂವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾಗ ಬೇರೊಂದು ಕಳವು ಪ್ರಕರಣದಲ್ಲಿ ಸೆರೆಗೀಡಾಗಿ ಆರೋಪಿಗಳು ಮಂಗಳೂರಿನಲ್ಲಿ ಸೆರೆ ಗೀಡಾಗಿ ನ್ಯಾಯಾಂಗ ಬಂ ಧನದಲ್ಲಿರುವುದು ತಿಳಿದು ಬಂದಿದ್ದು, ಇದರಂತೆ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಸ್ಟಡಿಯಲ್ಲಿರುವ ಆರೋಪಿಗಳು ಮಂಜೇಶ್ವರ, ಕಾಸರಗೋಡು ಹಾಗೂ ಕರ್ನಾಟಕದ ವಿವಿಧೆಡೆ ನಡೆದ ಹಲವು ಕಳವು ಪ್ರಕರಣಗಳಲ್ಲಿ ಆರೋಪಿ ಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page