ಅಪಘಾತಕ್ಕೊಳಗಾದ ಕಾರಿನಲ್ಲಿ 25 ಲಕ್ಷ ರೂ. ಪತ್ತೆ
ಮಂಜೇಶ್ವರ: ಕಾರುಗಳು ಪರಸ್ಪರ ಢಿಕ್ಕಿ ಹೊಡೆದು ಆ ಬಗ್ಗೆ ಪೊಲೀಸರು ಪರಿಶೀಲನೆ ಆರಂಭಿಸಿದಾಗ ಢಿಕ್ಕಿ ಹೊಡೆದ ಕಾರೊಂದರಲ್ಲಿ 25,88,000 ಪತ್ತೆಯಾದ ಘಟನೆ ಶನಿವಾರ ರಾತ್ರಿ ಮಂಜೇಶ್ವರ ಪೇಟೆಯಲ್ಲಿ ನಡೆದಿದೆ. ಮಂಗಳೂರಿನಿAದ ಹೊಸಂಗಡಿಗೆ ಹಣ್ಣುಹಂಪಲು ಹೇರಿಕೊಂಡು ಬರುತ್ತಿದ್ದ ಕಾರು ಮತ್ತು ಇನ್ನೊಂದು ಕಾರು ಮಂಜೇಶ್ವರ ಪೇಟೆಯಲ್ಲಿ ಮೊನ್ನೆ ರಾತ್ರಿ ಪರಸ್ಪರ ಢಿಕ್ಕಿ ಹೊಡೆದಿದೆ. ಆ ಎರಡೂ ಕಾರಿನ ಲ್ಲಿದ್ದವರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಈ ವಿಷಯ ತಿಳಿದ ಹೈವೇ ಪಟ್ರೋಲಿಂಗ್ ಪೊಲೀಸ್ ವಿಭಾಗದ ಎಸ್ಐ ಕೆ.ವಿ. ಸುಮೇಶ್ರಾಜ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಕಾರುಗಳನ್ನು ಪರಿಶೀಲಿಸಿದಾಗ ಹಣ್ಣು ಹಂಪಲು ಹೇರಿಕೊಂಡು ಬರುತ್ತಿದ್ದ ಕಾರಿನಲ್ಲಿ ಹಣ ಪತ್ತೆಯಾಗಿದೆ. ಅದಕ್ಕೆ ಕಾರಿನಲ್ಲಿದ್ದವರಿಗೆ ಅಧಿಕೃತ ದಾಖಲು ಪತ್ರಗಳನ್ನು ಹಾಜರುಪಡಿ ಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಂತರ ಆ ಹಣವನ್ನು ಪೊಲೀಸರು ಮಂಜೇಶ್ವರ ಪೊಲೀಸ್ ಠಾಣೆಗೆ ಸಾಗಿಸಿದ್ದಾರೆ. ಈ ಹಣವನ್ನು ನ್ಯಾಯಾಲಯದಲ್ಲಿ ಹಾಜರುಪಡಿ ಸಲಾಗುವುದೆಂದು ಪೊಲೀಸರು ತಿಳಿಸಿ ದ್ದಾರೆ. ಸರಿಯಾದ ದಾಖಲುಪತ್ರ ಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದಲ್ಲಿ ಆ ಹಣ ಅದರ ಮಾಲಕರಿಗೆ ಲಭಿಸಲಿದೆ. ಇಲ್ಲವಾದಲ್ಲಿ ಸರಕಾರಿ ಖಜಾನೆಗೆ ಸೇರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.