ಉಪ್ಪಳದಲ್ಲಿ ಮದ್ರಸ ಶಿಕ್ಷಕರಿಗೆ ಕಿಟ್ ವಿತರಣೆ, ಪ್ರಾರ್ಥನಾ ಸದಸ್
ಉಪ್ಪಳ: ಸಮಸ್ತ ಕೇರಳ ಮದ್ರಸ್ ಮೆನೇಜ್ಮೆಂಟ್ ಅಸೋಸಿಯೇಶನ್ ಉಪ್ಪಳ ರೇಂಜ್ ಸಮಿತಿ ವ್ಯಾಪ್ತಿಯ ಮದ್ರಸ ಮುಅಲ್ಲಿಂರಿಗೆ ರಂಜಾನ್ ಸ್ನೇಹ ಉಡುಗೊರೆ ವಿತರಣೆ ಹಾಗೂ ಪ್ರಾರ್ಥನಾ ಸದಸ್ ನಡೆಯಿತು. ಸಿರಾಜುದ್ದೀನ್ ಫೈಸಿ ಪೇರಾಲ್ ಉದ್ಘಾಟಿಸಿದರು. ರೇಂಜ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಪಳ್ಳಂ ಅಧ್ಯಕ್ಷತೆ ವಹಿಸಿದರು. ಮೂಫಾತಿಶ್ ಅಬ್ದುಲ್ ಖಾದರ್ ಫೈಸಿ ಪಳ್ಳಂಗೋಡು ಪ್ರಾರ್ಥನೆ ನಡೆಸಿದರು. ಇಸ್ಮಾಯಿಲ್ ಮೂಸ್ಲಿಯರ್ ಪ್ರಸ್ತಾಪಿಸಿದರು. ಹಲವರು ಭಾಗವಹಿಸಿದರು.