ಕಾಸರಗೋಡು: ನೆಲ್ಲಿಕುಂಜೆ ಶಾಂತಿ ನಿಲಯ ತೋಟತ್ತಿಲ್ ನಿವಾಸಿ ಎನ್.ಬಿ. ಪದ್ಮನಾಭನ್ (74) ನಿಧನ ಹೊಂದಿದರು. ಇವರು ಹಿರಿಯ ಭತ್ತ ಕೃಷಿಕನಾಗಿದ್ದರು. ಇವರಿಗೆ ಹಲವು ಪುರಸ್ಕಾರಗಳೂ ಲಭಿಸಿವೆ. ಇವರ ಪತ್ನಿ ನಿರ್ಮಲ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಸಹೋದರಿ ಯರಾದ ಲಕ್ಷ್ಮಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.