ಸಿಪಿಐ ಮಂಜೇಶ್ವರ ಲೋಕಲ್ ಸಮ್ಮೇಳನ

ಮಂಜೇಶ್ವರ: ಸಿಪಿಐ ಮಂಜೇಶ್ವರ ಲೋಕಲ್ ಸಮ್ಮೇಳನದ ಪೂರ್ವಭಾವಿಯಾಗಿ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆ ಮಂಜೇಶ್ವರ ಟಿ.ವಿ ಥೋಮಸ್ ಸ್ಮಾರಕ ಮಂದಿರ ಬಳಿ ನಡೆಯಿತು. ಜಿಲ್ಲಾ ಸಮಿತಿ ಸದಸ್ಯ ಎಸ್. ರಾಮಚಂದ್ರ ಬಡಾಜೆ, ನಾರಾಯಣಿ ರಾಜನ್, ಪವಿತ್ರಾ ಶ್ರೀಧರ್, ರೇಖಾ ಪ್ರೇಮ್ ದಾಸ್, ಚಿತ್ರಾವತಿ ಅಂಜರೆ, ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ, ಸ್ವಾಗತ ಸಮಿತಿ ಕನ್ವೀನರ್ ದಯಾಕರ ಮಾಡ, ಗಣೇಶ್ ಕುಂಜತ್ತೂರ್ ನೇತೃತ್ವ ನೀಡಿದರು. ಬಳಿಕ ನಡೆದ ಸಾರ್ವಜನಿಕ ಸಭೆಯನ್ನು ಸಿಪಿಐ ರಾಜ್ಯ ಸಮಿತಿ ಸದಸ್ಯ ಗೋವಿಂದನ್ ಪಳ್ಳಿಕಾಪ್ಪಿಲ್ ಉದ್ಘಾಟಿಸಿದರು. ಗಣೇಶ್ ಕುಂಜತ್ತೂರ್ ಅಧ್ಯಕ್ಷತೆ ವಹಿಸಿದರು. ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್, ಜಿಲ್ಲಾ ಸಮಿತಿ ಸದಸ್ಯರಾದ ಎಸ್. ರಾಮಚಂದ್ರ ಬಡಾಜೆ, ರಾಮಕೃಷ್ಣ ಕಡಂಬಾರ್, ಎಐವೈಎಫ್ ಜಿಲ್ಲಾ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್, ಮೋಟಾರ್ ಯೂನಿಯನ್ (ಎಐಟಿಯುಸಿ) ಜಿಲ್ಲಾ ಅಧ್ಯಕ್ಷ ಮುಸ್ತಫಾ ಕಡಂಬಾರ್ ಮಾತನಾಡಿದರು. ದಯಾಕರ ಮಾಡ ಸ್ವಾಗತಿಸಿ, ಶ್ರೀಧರ್ ಮಾಡ ವಂದಿಸಿದರು.

RELATED NEWS

You cannot copy contents of this page