ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ: ಯುವಕನ ಮೃತ್ಯುವಿನಿಂದ ನಾಡಿನಲ್ಲಿ ಶೋಕಸಾಗರ

ಮಂಜೇಶ್ವರ: ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ  ಮಧ್ಯಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಐಲ ಮೈದಾನ ಬಳಿಯ ನಿವಾಸಿ ಉಮೇಶ-ಸರಯೂ ಟೀಚರ್ ದಂಪತಿಯ ಪುತ್ರ ಕಲ್ಪೇಶ್ ಉಚ್ಚಿಲ್ (35) ಎಂಬವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಲ್ಪೇಶ್ ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ  ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.

ಕರ್ನಾಟಕದ ಕೆ.ಸಿ. ರೋಡ್‌ನಲ್ಲಿ ರುವ ಪೇಪರ್ ಮಿಲ್‌ನಲ್ಲಿ ಇವರು ಉದ್ಯೋಗಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಇವರು ಸ್ಕೂಟರ್‌ನಲ್ಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮಧ್ಯೆ ಅಪಘಾತವುಂಟಾಗಿದೆ. ಇದರಿಂದ ಗಂಭೀರ ಗಾಯಗೊಂಡ ಕಲ್ಪೇಶ್‌ರನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕೊಂಡೊ ಯ್ದಿದ್ದು ಆದರೆ ದಾರಿ ಮಧ್ಯೆ ಸಾವು ಸಂಭವಿಸಿದೆ.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು ಬಳಿಕ ನಿನ್ನೆ ರಾತ್ರಿ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಒಂದು ವರ್ಷ ಹಿಂದೆಯಷ್ಟೇ ಕಲ್ಪೇಶ್‌ರ ಮದುವೆ ನಡೆದಿತ್ತು. ಪತ್ನಿ ಈಗ ಗರ್ಭಿಣಿಯಾಗಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ ಸ್ವಾತಿ, ಸಹೋ ದರಿ ಪೂರ್ಣಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.ಅಪಘಾತ ಸಂಬಂಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕಲ್ಪೇಶ್‌ರ ನಿಧನಕ್ಕೆ ಶ್ರೀ ದುರ್ಗಾಕೃಪಾ ವೀರಕೇಸರಿ ವ್ಯಾಯಾಮ ಶಾಲೆ ಐಲ, ಶ್ರೀ ದುರ್ಗಾಪರಮೇಶ್ವರಿ ಕಲಾ ಸಂಘ ಐಲ ಸಂತಾಪ ಸೂಚಿಸಿದೆ.

You cannot copy contents of this page