ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಬದಿಯಡ್ಕ: ನಾಲ್ಕೂವರೆ ಲೀಟರ್ ಕರ್ನಾಟಕ ಮದ್ಯ ಸಹಿತ ಮುಳಿಯಾರು ಪಯರ್ಪಳ್ಳದ ಗೋಪಾಲಕೃಷ್ಣ ಎಂಬಾತನನ್ನು ಅಬಕಾರಿ ತಂಡ ಬಂಧಿಸಿದೆ. ಬದಿಯಡ್ಕ ಅಬಕಾರಿ ಪ್ರಿವೆಂಟೀವ್ ಆಫೀಸರ್ ಬಿ.ಎಸ್. ಮುಹಮ್ಮದ್ ಕಬೀರ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಮದ್ಯ ಪತ್ತೆಹಚ್ಚಲಾಗಿದೆ. ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಜಿ.ಎಸ್. ಲಿಜು, ವಿನೋದ್ ಕೆ, ಅಲೋಕ್ ಗುಪ್ತ, ಸದಾನಂದನ್ ಪಿ, ಧನ್ಯ ಟಿ ಂಬಿವರು ಅಬಕಾರಿ ತಂಡದಲ್ಲಿದ್ದರು.