ವಿಮಾನ ದುರಂತ: ಮೃತರ ಸಂಖ್ಯೆ 294ಕ್ಕೇರಿಕೆ; ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ, ಉನ್ನತ ಮಟ್ಟದ ತನಿಖೆ ಆರಂಭ
ಅಹಮ್ಮದಾಬಾದ್: ಗುಜರಾತ್ನ ಅಹಮ್ಮದಾಬಾದ್ನಲ್ಲಿ ನಿನ್ನೆ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 294ಕ್ಕೇರಿದೆ. ಇದರಲ್ಲಿ 241 ಮಂದಿ ಪ್ರಯಾಣಿಕರು ಹಾಗೂ ಉಳಿದವರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ.
ಅಹಮ್ಮದಾಬಾದ್ನ ಏರ್ ಪೋರ್ಟ್ನಿಂದ ನಿನ್ನೆ ಮಧ್ಯಾಹ್ನ ಲಂಡನ್ಗೆ ಹೊರಟ ಏರ್ ಇಂಡಿಯಾದ ಬೋಯಿಂಗ್ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ಪಥನಗೊಂಡು ಸಂಪೂರ್ಣವಾಗಿ ಹೊತ್ತಿ ಉರಿದಿತ್ತು. ಈ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಟಾಟಾ ಗ್ರೂಪ್ ತಲಾ 1 ಕೋಟಿ ರೂ.ನಂತೆ ಪರಿಹಾರ ಘೋಷಿಸಿದೆ. ಮಾತ್ರವಲ್ಲ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಾಗಿಯೂ ತಿಳಿಸಿದೆ.
ದುರಂತ ನಡೆದ ಪ್ರದೇಶಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾತ್ರವಲ್ಲ ದುರಂತದಲ್ಲಿ ಗಾಯಗೊಂಡವರನ್ನು ಪ್ರಧಾನಿ ಆಸ್ಪತ್ರೆಗಳಿಗೆ ಸಾಗಿ ಅವರ ಆರೋಗ್ಯ ವಿಚಾರಿಸಿದರು. ಈ ದುರಂತದ ಬಗ್ಗೆ ಸಮಗ್ರ ತನಿಖೆಗಾಗಿ ಪ್ರಧಾನಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಅದರಂತೆ ಉನ್ನತ ಮಟ್ಟದ ತನಿಖಾ ಸಮಿತಿ ಈ ದುರಂತದ ಬಗ್ಗೆ ತನಿಖೆ ಆರಂಭಿಸಿದೆ. ದುರಂತಕ್ಕೆ ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲ. ಆ ಬಗ್ಗೆ ತನಿಖಾ ತಂಡ ಸಮಗ್ರ ತನಿಖೆ ನಡೆಸುತ್ತಿದೆ.
ಈ ದುರಂತದಲ್ಲಿ ಸಾವನ್ನಪ್ಪಿದವರ ಗುರುತು ಪತ್ತೆಗೆ ಗುಜರಾತ್ ಆರೋಗ್ಯ ಇಲಾಖೆ ಮೃತದೇಹಗಳ ಡಿಎನ್ಎ ಪರೀಕ್ಷೆಗೊಳಪಡಿಸುತ್ತಿದೆ. ದುರಂತಕ್ಕೀಡಾದ ವಿಮಾನದಲ್ಲಿದ್ದ ಒಟ್ಟು 242 ಮಂದಿಯಲ್ಲಿ ಬ್ರಿಟನ್ ಪ್ರಜೆ ವಿಶ್ವಾಸ್ ಎಂಬವರು ಮಾತ್ರವೇ ಅದೃಷ್ಟವಶಾತ್ ಪಾರಾಗಿದ್ದಾರೆ. ಈ ವಿಮಾನದಲ್ಲಿ 230 ಪ್ರಯಾಣಿಕರು, 12 ಸಿಬ್ಬಂದಿಗಳೂ ಸೇರಿದಂತೆ ಒಟ್ಟು 242 ಮಂದಿ ಇದ್ದರು. ಅದರಲ್ಲಿ ವಿಶ್ವಾಸ್ರ ಹೊರತಾಗಿ ಇತರ ಎಲ್ಲರೂ ಸಾವನ್ನಪ್ಪಿದ್ದಾರೆ.
ವಿಮಾನ ಪಥನಗೊಂಡ ವೈದ್ಯಕೀಯ ಕಾಲೇಜು ಹಾಸ್ಟೆಲ್ನ 24 ವಿದ್ಯಾರ್ಥಿಗಳೂ ಸಾವನ್ನಪ್ಪಿದವರಲ್ಲಿ ಒಳಗೊಂಡಿದ್ದಾರೆ. ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು ಅವರನ್ನು ವಿವಿಧ ಆಸ್ಪತ್ರೆಗಳಲ್ಲಾಗಿ ದಾಖಲಿಸಲಾಗಿದೆ. ಈ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮಾತ್ರವಲ್ಲ ಲಂಡನ್ನಲ್ಲಿ ನರ್ಸ್ಆಗಿದ್ದ ಪತ್ತನಂತಿಟ್ಟ ಪುಲ್ಲಾಟ್ ನಿವಾಸಿ ರಂಜಿತಾ ಜಿ ನಾಯರ್(40) ಎಂಬವರೂ ಸೇರಿ ಮಡಿದವರಲ್ಲಿ 164 ಭಾರತೀಯರು, 53 ಬ್ರಿಟನ್ ಪ್ರಜೆಗಳು, 9ಪೋರ್ಚುಗಲ್ ಹಾಗೂ ಓರ್ವ ಕೆನಡಾ ಪ್ರಜೆ ಒಳಗೊಂಡಿದ್ದಾರೆ.
ಭಾರತದಿಂದ ವಿದೇಶಗಳಿಗೆ ಪ್ರಯಾಣ ಆರಂಭಿಸಿದ 21 ವಿಮಾನಗಳು ವಾಪಸ್ಸು
ಸೇವೆ ಪೂರ್ತೀಕರಿಸದೆ ಅರ್ಧದಲ್ಲೇ ಹಿಂತಿರುಗಿದ ಐದು ವಿಮಾನಗಳು
ನವದೆಹಲಿ: ಅಹಮದಾ ಬಾದ್ನಲ್ಲಿ ನಿನ್ನೆ ನಡೆದ ಅತೀ ಭೀಕರ ವಿಮಾನ ದುರ್ಘಟನೆಯ ಬೆನ್ನಲ್ಲೇ ಭಾರತದಿಂದ ವಿದೇಶಗಳಿಗೆ ಸೇವೆ ಆರಂಭಿಸಿರುವ 21 ವಿಮಾನಗಳ ಸೇವೆಗಳನ್ನು ಅರ್ಧದಲ್ಲೇ ಮೊಟಕು ಗೊಳಿಸಿ ಭಾರತಕ್ಕೆ ವಾಪಸುಗೊಳಿಸು ವಂತೆ ಕೇಂದ್ರ ಸರಕಾರ ತುರ್ತು ಆದೇಶ ನೀಡಿದೆ. ಇದರಂತೆ ಮುಂಬೈಯಿಂದ ಇಂಗ್ಲೆಂಡ್ಗೆ ಹಾಗೂ ನ್ಯೂಯಾರ್ಕ್ಗೆ ಇಂದು ಬೆಳಿಗ್ಗೆ ಪ್ರಯಾಣ ಆರಂಭಿಸಿದ ಏರ್ ಇಂಡಿಯಾದ ಎರಡು ವಿಮಾನಗಳು ತಮ್ಮ ಸೇವೆಯನ್ನು ಅರ್ಧದಲ್ಲೇ ಯುಟರ್ನ್ ತೆಗೆದು ಭಾರತಕ್ಕೆ ಹಿಂತಿರುಗಿಸಲಾಗಿದೆ. ಇದರ ಹೊರತಾಗಿ ಇತರ ಮೂರು ವಿಮಾನಗಳು ತಮ್ಮ ಸೇವೆಯನ್ನು ಮೊಟಕುಗೊಳಿಸಿ ಭಾರತಕ್ಕೆ ಹಿಂತಿರುಗಿದೆ. ಇದರ ಹೊರತಾಗಿ ಭಾರತದಿಂದ ವಿವಿಧ ರಾಷ್ಟ್ರಗಳಿಗೆ ಪ್ರಯಾಣ ಆರಂಭಿಸಿರುವ ಒಟ್ಟು 21 ವಿಮಾನ ಸೇವೆಗಳನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹಿಂತಿರುಗಿಸುವ ಕ್ರಮ ಆರಂಭಿಸಲಾಗಿದೆ. ಆದರೆ ಈ ವಿಮಾನಗಳು ಹಿಂತಿರುಗಲು ಅಧಿಕೃತ ಕಾರಣಗಳನ್ನು ಕೇಂದ್ರ ಸರಕಾರ ಇನ್ನೂ ತಿಳಿಸಿಲ್ಲ. ಇರಾನ್ ವಿರುದ್ಧ ಇಸ್ರೇಲ್ ಆರಂಭಿಸಿರುವ ದಾಳಿಯ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭಾರೀ ಮಟ್ಟದ ಕಾರ್ಮೋಡ ಕವಿದು ಅದೂ ಭಾರತದ ವಿಮಾನಗಳು ಅರ್ಧದಿಂದಲೇ ಹಿಂತಿರುಗಲು ಕಾರಣಗಳಲ್ಲೊದಾಗಿದೆ.