ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗ: ಜಿಲ್ಲೆಯಲ್ಲಿ 23,546 ಮಂದಿ ಚಿಕಿತ್ಸೆಯಲ್ಲಿ
ಕಾಸರಗೋಡು: ಮಳೆಗಾಲ ಆರಂಭಗೊAಡಿರುವAತೆಯೇ ಜಿಲ್ಲೆಯಲ್ಲಿ ಜ್ವರ ಬಾಧಿತರ ಸಂಖ್ಯೆ ಹೆಚ್ಚಾಗತೊಡಗಿದೆ.
ಜನವರಿ 1ರಿಂದ ಎಪ್ರಿಲ್ 30ರ ತನಕದ ನಾಲ್ಕುತಿಂಗಳಲ್ಲಿ ಜಿಲ್ಲೆಯಲ್ಲಿ ದೈನಂದಿನ ಸರಾಸರಿ ತಲಾ 200ರಷ್ಟು ಮಂದಿ ಜ್ವರ ತಗಲಿ ಆಸ್ಪತ್ರೆಗೆ ಸಾಗುತ್ತಿದ್ದರೆ, ಮೇ ತಿಂಗಳಲ್ಲಿ ಆ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ. ಅಂದರೆ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 23,546 ಮಂದಿ ವಿವಿಧ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಡೆಂಗ್ಯೂ ಜ್ವರ ತಗಲಿರುವವರ ಸಂಖ್ಯೆ ಈ ಒಂದು ತಿಂಗಳಲ್ಲಿ 6ರಿಂದ ಈಗ 91ಕ್ಕೇರಿದೆ. 159 ಮಂದಿ ಹಳದಿ ಕಾಮಾಲೆಗೆ ಚಿಕಿತ್ಸೆ ಪಡೆದಿ ದ್ದಾರೆ. ಎಂಟು ಮಂದಿಗೆ ಇಲಿಜ್ವರ ತಗಲಿದೆ.
ಕೆಮ್ಮು, ಗಂಟಲುನೋವು, ತಲೆನೋವು, ಜ್ವರ ತಗಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಇನ್ನೊಂದೆಡೆ ದಿನೇ ದಿನೇ ಹೆಚ್ಚಾಗತೊ ಡಗಿದೆ. ಇದರಿಂದಾಗಿ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆಯೂ ಅದಕ್ಕೆ ಹೊಂದಿಕೊAಡು ಸಾಗುತ್ತಿದೆ. ಇದು ಸರಕಾರಿ ಆಸ್ಪತ್ರೆಗಳಲ್ಲಿ ಕೆಲವು ದಿನಗಳಿಂದ ರೋಗಿಗಳ ನಿಬಿಡತೆ ಹೆಚ್ಚಾಗುವಂತೆ ಮಾಡಿದೆ.
ಮಾರಕ ಸೊಳ್ಳೆಗಳಿಂದ ಇಂತಹ ಸಾಂಕ್ರಾಮಿಕ ರೋಗ ಹರಡುತ್ತವೆ. ಮಳೆಗಾಲದಲ್ಲಿ ನೀರು ಕಟ್ಟಿ ನಿಲ್ಲುವಿಕೆ ಹೆಚ್ಚಾಗುತ್ತಿರುವುದು ಡೆಂಗ್ಯೂ ಇತ್ಯಾದಿ ಮಾರಕ ಕಾಯಿಲೆಗಳು ಹರಡಿಸುವ ಸೊಳ್ಳೆಗಳ ಸಂತಾನ ಹೆಚ್ಚಾಗುವಂತೆ ಮಾಡತೊಡಗಿದೆ.ಆದ್ದರಿಂದ ಮನೆ ಮತ್ತು ಪರಿಸರವನ್ನು ಸದಾ ಶುಚೀಕರಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.