ಭಾರತಾಂಬೆ ಚಿತ್ರ: ನಿಲುವಿನಲ್ಲಿ ಅಚಲವಾಗಿ ಉಳಿದ ರಾಜ್ಯಪಾಲ

ತಿರುವನಂತಪುರ: ರಾಜ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಇರಿಸಲಾಗಿರುವ ಭಾರತಾಂಬೆಯ ಚಿತ್ರವನ್ನು ಯಾವುದೇ ಕಾರಣಕ್ಕೂ ಅಲ್ಲ್ಲಿಂದ ತೆರವುಗೊಳಿಸುವು ದಿಲ್ಲವೆಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸ್ಪಷ್ಟಪಡಿಸಿದ್ದಾರೆ.

ರಾಜ್ ಭವನದಲ್ಲಿ ಭಾರತಾಂ ಬೆಯ ಚಿತ್ರ ಇರಿಸಿದ ರಾಜ್ಯಪಾಲರ ನಿಲುವನ್ನು ಪ್ರಶ್ನಿಸಿ ಸರಕಾರ ರಂಗಕ್ಕಿಳಿ ದಿರುವ ವೇಳೆಯಲ್ಲೇ ರಾಜ್ಯಪಾಲರು ತಮ್ಮ ಅಚಲ ನಿರ್ಧಾರವನ್ನು ಪ್ರಕಟಿಸಿ ದ್ದಾರೆ. ಇದರಿಂದಾಗಿ ರಾಜ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಇನ್ನು ಸರಕಾರಿ ಕಾರ್ಯಕ್ರಮ ನಡೆಸಬೇಕೇ ಎಂಬ ಆಲೋಚನೆಯಲ್ಲಿ ಸರಕಾರ ತೊಡಗಿದೆ.

ಇದೇ ಸಂದರ್ಭದಲ್ಲಿ ಈ ವಿಷಯದಲ್ಲಿ ಸರಕಾರದ ಸ್ಪಷ್ಟ ನಿಲುವೇನೆಂಬುದನ್ನು ಮುಖ್ಯಮಂತ್ರಿ ಸ್ವತಃ ರಾಜ್ಯಪಾಲರಿಗೆ ತಿಳಿಸಲು ಇನ್ನೊಂ ದೆಡೆ ವಿರೋಧ ಪಕ್ಷಗಳ ಆಗ್ರಹಿಸಿವೆ.  ರಾಜ್ ಭವನದಲ್ಲಿ ಸ್ಥಾಪಿಸಲಾಗಿರುವ ಭಾರತಾಂಬೆಯ ಫೋಟೋವನ್ನು ಅಲ್ಲಿಂದ ತೆರವುಗೊಳಿಸಬೇಕೆಂಬುವುದು ರಾಜ್ಯ ಸರಕಾರದ ನಿಲುವಾಗಿದೆ. ಅದನ್ನು ತೆರವುಗೊಳಿಸುವಂತಿಲ್ಲವೆಂದು ರಾಜ್ಯಪಾಲರು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಇನ್ನು ರಾಜ್ ಭವನದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿಷಯದಲ್ಲಿ ಸರಕಾರ ವನ್ನು ಗೊಂದಲದಲ್ಲಿ ಸಿಲುಕುವಂತೆ ಮಾಡಿದೆ.

ರಾಜ್ ಭವನದಲ್ಲಿ ನಡೆಯುವ ಕಾರ್ಯಕ್ರಮದ ವಿಷಯದಲ್ಲಿ ಸರಿಯಾದ ರೀತಿಯ ಶಿಷ್ಟಾಚಾರ (ಪ್ರೋಟೋಕಾಲ್) ನಿರ್ಣಯಿಸಬೇ ಕೆಂದು ಇತ್ತೀಚೆಗೆ ನಡೆದ ವಿಶ್ವ ಪರಿಸರ ದಿನಾಚರಣೆಯ ವೇಳೆ ಉಂಟಾದ ವಿವಾದದ ಬೆನ್ನಲ್ಲೇ ರಾಜ್ಯ ಕೃಷಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಸರಕಾರದೊಡನೆ ಕೇಳಿಕೊಂಡಿದ್ದಾರೆ. ಆದರೆ ಆ ವಿಷಯದಲ್ಲಿ  ಸರಕಾರ  ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಅದರ ಬೆನ್ನಲ್ಲೇ ನಿನ್ನೆ ರಾಜ್ ಭವನದಲ್ಲಿ ನಡೆದ  ಸ್ಕೌಟ್ ಆಂಡ್ ಗೈಡ್ ರಾಷ್ಟ್ರೀಯ ಪುರಸ್ಕಾರ ಸಮಾರಂಭದಲ್ಲಿ  ಭಾರ ತಾಂಬೆಯ  ಫೋಟೋ ಇರಿಸಿದ ಕ್ರಮ ವನ್ನು  ಆ ಕಾರ್ಯಕ್ರಮದಲ್ಲಿ ಭಾಗವಹಿ ಸಿದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ವಿರೋಧ ವ್ಯಕ್ತ ಪಡಿಸಿದ್ದರು.  ಮಾತ್ರವಲ್ಲ ಆ ವಿಷಯ ದಲ್ಲಿ  ರಾಜ್ ಭವನದ ನಿಲುವನ್ನು ಟೀಕಿಸಿದ್ದರು.  ಈ ಕಾರ್ಯ ಕ್ರಮಕ್ಕೆ ಶಿಕ್ಷಣ ಸಚಿವರು ತಡವಾಗಿ ಬಂದಿ ದ್ದರಲ್ಲದೆ ರಾಜ್ಯಪಾಲರಲ್ಲಿ ತಿಳಿ ಸದೆ ಕಾರ್ಯಕ್ರಮ ಮುಕ್ತಾಯಗೊಳ್ಳುವ ಮೊದಲೇ ಜಾಗ ಖಾಲಿ ಮಾಡಿದ್ದರು. ಸಚಿವರ ಈ ನಿಲುವು ಶಿಷ್ಟಾಚಾರದ  ಉಲ್ಲಂಘನೆಯಾಗಿದೆಯೆಂದು ಅದರ ಬೆನ್ನಲ್ಲೇ ರಾಜ್ ಭವನ್ ತಿಳಿಸಿತ್ತು. ಸಂವಿಧಾನಾತ್ಮಕ ಕಾರ್ಯಕ್ರಮಗಳಲ್ಲಿ ಭಾರತಾಂಬೆಯ ಚಿತ್ರ ಇರಿಸುವುದಿಲ್ಲ. ಇತರ ಕಾರ್ಯಕ್ರಮಗಳಲ್ಲಿ ಆ ಫೋಟೋ ಇರಿಸಲಾಗುವುದೆಂದೂ ತಿಳಿಸಿರುವ ರಾಜ್ಯಪಾಲರು ಈ ವಿಷಯ ದಲ್ಲಿ ಇನ್ನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲವೆಂದೂ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page