ಆಸ್ಪತ್ರೆಯಲ್ಲಿ ದಾದಿಯನ್ನು ಇರಿದು ಬರ್ಭರ ಕೊಲೆ
ಭೋಪಾಲ್: ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿ ದಾದಿಯ ಕುತ್ತಿಗೆ ಕೊಯ್ದು ಕೊಲೆಗೈದ ಭೀಕರ ಘಟನೆ ಮಧ್ಯಪ್ರದೇಶದ ನರಸಿಂಗ್ಪುರ್ನಲ್ಲಿ ನಡೆದಿದೆ. ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾದಿಯಾಗಿರುವ ಸಂಧ್ಯಾ ಚೌದರಿ (18) ಕೊಲೆಗೈಯ್ಯಲ್ಪಟ್ಟ ದುರ್ದೈವಿ. ನಿನ್ನೆ ಸಂಜೆ 3 ಗಂಟೆಗೆ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಹಿತ ಹಲವರು ಇದ್ದಾಗಲೇ ಅಲ್ಲಿಗೆ ತಲುಪಿದ ಯುವಕ ಚಾಕುವಿನಿಂದ ಸಂಧ್ಯಾರ ಕುತ್ತಿಗೆಗೆ ಇರಿದಿದ್ದಾನೆ. ಅಲ್ಲಿದ್ದವರು ಬೊಬ್ಬಿಡುತ್ತಿದ್ದಂತೆ ದುಷ್ಕರ್ಮಿ ಓಡಿ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.