ನಾಪತ್ತೆಯಾದ ಐಟಿಐ ವಿದ್ಯಾರ್ಥಿ ಕಾಡಿನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪಾಲಕ್ಕಾಡ್: ಇಲ್ಲಿನ ಪರಂಬಿಕುಳ ಎಂಬಲ್ಲಿಂದ 2 ದಿನಗಳ ಹಿಂದೆ ನಾಪತ್ತೆ ಯಾದ ಐಟಿಐ ವಿದ್ಯಾರ್ಥಿ ಕಾಡಿ ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಎರ್ತ್ ಡ್ಯಾಂ ಉನ್ನತಿ ಎಂಬಲ್ಲಿನ ಮುರು ಗಪ್ಪನ್- ಸುಗಂಧಿ ದಂಪತಿಯ ಪುತ್ರ ಎಂ. ಅಶ್ವಿನ್ (21) ಮೃತ ವಿದ್ಯಾರ್ಥಿ. ಕಳೆದ ಮಂಗಳವಾರ ಮಧ್ಯಾಹ್ನ ಬಳಿಕ ಅಶ್ವಿನ್ ನಾಪತ್ತೆಯಾಗಿದ್ದನು. ಮನೆ ಯಿಂದ 3 ಕಿಲೋ ಮೀಟರ್ ಅಂತರ ದಲ್ಲಿರುವ ಟೈಗರ್ ಹಾಲ್‌ನಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿ ಮರಳಿದ ಅಶ್ವಿನ್  ಬಳಿಕ ನಾಪತ್ತೆಯಾಗಿದ್ದನೆನ್ನ ಲಾಗಿದೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಶೋಧ ನಡೆಸುತ್ತಿದ್ದ ವೇಳೆ ಪ್ಲಾಂಟೇಶನ್ ಭಾಗದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಈತ ಪತ್ತೆಯಾಗಿದ್ದಾನೆ. ಈತ ಅಟ್ಟಪ್ಪಾಡಿ ಐಟಿಐಯ ಮೆಕ್ಯಾನಿಕಲ್ ವಿದ್ಯಾರ್ಥಿಯಾಗಿದ್ದನು.

RELATED NEWS

You cannot copy contents of this page