ಎಡನೀರು: ಐದನೇ ತರಗತಿ ವಿದ್ಯಾರ್ಥಿನಿ ಅಸೌಖ್ಯ ಬಾಧಿಸಿ ಮೃತ್ಯು

ಎಡನೀರು: ಶಾಲಾ ವಿದ್ಯಾರ್ಥಿ ನಿಯೋರ್ವೆ ಅಸೌಖ್ಯ ಬಾಧಿಸಿ ಚಿಕಿತ್ಸೆ ಮಧ್ಯೆ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಎಡನೀರು ನಿವಾಸಿಯೂ, ಪ್ರಸ್ತುತ ಪಾಡಿಯಲ್ಲಿ ವಾಸಿಸುತ್ತಿರುವ ಅರವಿಂದ ಭಟ್ ಎಂಬವರ   ಪುತ್ರಿ  ಜಾಹ್ನವಿ (೧೦) ಮೃತಪಟ್ಟ ಬಾಲಕಿಯಾಗಿದ್ದಾಳೆ.  ಈಕೆ ಎಡನೀರು ಸ್ವಾಮೀಜೀಸ್   ಹೈಯರ್ ಸೆಕೆಂಡರಿ ಶಾಲೆಯ ೫ನೇ ತರಗತಿ  ವಿದ್ಯಾರ್ಥಿನಿಯಾಗಿದ್ದಾಳೆ. ಎಡನೀರು ಜಿಎಚ್‌ಎಸ್‌ನ ಹಳೆ ವಿದ್ಯಾರ್ಥಿನಿಯೂ ಆಗಿದ್ದಾಳೆ.  ಈಕೆಗೆ ತಿಂಗಳುಗಳ ಹಿಂದೆ ಅಸೌಖ್ಯ ಬಾಧಿಸಿ ತ್ತೆನ್ನಲಾಗಿದೆ. ಇದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ೩ ತಿಂಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಅನಂತರ ವೈದ್ಯರ ನಿರ್ದೇಶದಂತೆ ಬಿಡುಗಡೆಗೊಳಿಸಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಅನಂತರವೂ ಬಾಲಕಿಗೆ ಅಸೌಖ್ಯ  ಕಾಣಿಸಿಕೊಂಡಿದ್ದು, ಇದರಿಂದ ಧಾರವಾಡದ ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ  ಕರೆದೊಯ್ಯಲಾಗಿತ್ತು. ಈ ಮಧ್ಯೆ ಅಸೌಖ್ಯ ಮತ್ತೆ ಉಲ್ಭಣಗೊಂಡ ಹಿನ್ನೆಲೆಯಲ್ಲಿ  ನಿನ್ನೆ ಅಲ್ಲಿನ ಸರಕಾರಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಳು. ಮೃತದೇಹವನ್ನು ಇಂದು ಸ್ವ-ಗೃಹಕ್ಕೆ ತಲುಪಿಸಿ ಬಳಿಕ ಎಡನೀರಿನ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತ ಬಾಲಕಿ  ತಂದೆ, ತಾಯಿ ಸ್ವರೂಪ, ಸಹೋದರಿ ವೈಷ್ಣವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

ಜಾಹ್ನವಿಯ ಅಕಾಲಿಕ ನಿಧನಕ್ಕೆ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋ ಪಾಧ್ಯಾಯರು, ಪ್ರಾಂಶುಪಾಲ ಹಾಗೂ ಅಧ್ಯಾಪಕರು ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page