ಮಣ್ಣಂಗುಳಿ ಮಖಾಂ ಉರೂಸ್ ೨೦ರಿಂದ ಆರಂಭ

ಕುಂಬಳೆ: ಮಣ್ಣಂಗುಳಿ ಮಖಾಂ ಉರೂಸ್ ಈ ತಿಂಗಳ ೨೦ರಿಂದ ೨೮ರವರೆಗೆ ನಡೆಯಲಿದೆ. ೨೦ರಂದು ಬೆಳಿಗ್ಗೆ ೧೦ ಗಂಟೆಗೆ ಮಖಾಂ ಸಿಯಾರತ್‌ಗೆ ಕೆ.ಎಸ್. ಆಟ್ಟಕೋಯ ತಂಙಳ್ ನೇತೃತ್ವ ನೀಡುವರು. ಕೋಯಕುಟ್ಟಿ ತಂಙಳ್ ಅಲ್ ಬುಖಾರಿ ಉಪ್ಪಳ ಧ್ವಜಾರೋಹಣ ನಡೆಸುವರು. ಶಿಹಾಬುದ್ದೀನ್ ತಂಙಳ್ ಉದ್ಘಾಟಿಸುವರು. ಶಾಫಿ ಸಖಾಫಿ ಪ್ರಧಾನ ಭಾಷಣ ನಡೆಸುವರು. ೨೧ರಂದು ಇ.ಪಿ. ಅಬೂಬಕ್ಕರ್ ಅಲ್‌ಖಾಸಿಮಿ ಪತ್ತನಾಪುರಂ, ೨೨ರಂದು ಮಸೌದ್ ಸಖಾಫಿ ಗುಡಲ್ಲೂರ್, ಮುಂದಿನ ದಿನಗಳಲ್ಲಿ ಜುನೈದ್ ಖಾಸಿಮಿ ಈರಾಟ್ ಪೇಟೆ, ಸಮೀರ್ ದಾರಿಮಿ ಕೊಲ್ಲಂ, ಪೇರೋಡ್ ಮೊಹಮ್ಮದ್ ಅಸ್ಹರಿ, ನೌಫಲ್ ಸಖಾಫಿ ಕಳಸ ಧಾರ್ಮಿಕ ಪ್ರವಚನ ನೀಡುವರು. ೨೭ರಂದು ಸಮಾರೋಪ ಸಮಾರಂಭವನ್ನು ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಉದ್ಘಾಟಿಸು ವರು. ಪ್ರೊ. ಕೆ. ಆಲಿಕುಟ್ಟಿ ಮುಸ್ಲಿ ಯಾರ್ ಅಧ್ಯಕ್ಷತೆ ವಹಿಸುವರು. ಕುಮ್ಮನ ನಿಜಾಮುದ್ದೀನ್ ಅಸ್ಹರಿ ಪ್ರಧಾನ ಭಾಷಣ ನಡೆಸುವರು. ೨೮ರಂದು ಬೆಳಿಗ್ಗೆ ೯ಗಂಟೆಗೆ ಮಖಾಂ ಸಿಯಾರತ್‌ಗೆ ಜಲಾಲುದ್ದೀನ್ ತಂಙಳ್ ಅಲ್‌ಬುಖಾರಿ ನೇತೃತ್ವ ನೀಡುವರು. ಬಳಿಕ ಮೌಲೀದ್ ಪಾರಾಯಣ, ಅನ್ನ ಸಂತರ್ಪಣೆ ನಡೆಯಲಿದೆ. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

You cannot copy content of this page