ಕೆವಿವಿಇಎಸ್ ನೀರ್ಚಾಲು ಘಟಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ನೀರ್ಚಾಲು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನೀರ್ಚಾಲು ಘಟಕದ ದ್ವೈವಾರ್ಷಿಕ ಮಹಾಸಭೆ ಇತ್ತೀಚೆಗೆ ವ್ಯಾಪಾರಿ ಭವನದಲ್ಲಿ ನಡೆಯಿತು.

ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಅಹಮ್ಮದ್ ಶರೀಫ್, ಪ್ರಧಾನ ಕಾರ್ಯದರ್ಶಿ ಕೆ.ಜೆ. ಸಜಿ,ಕಾರ್ಯದರ್ಶಿ ದಾಮೋ ದರನ್ ಕುತ್ತಿಕ್ಕೋಲ್,  ಬದಿಯಡ್ಕ ವಲಯ ಸಂಚಾಲಕ ಕುಂಜಾರು ಮೊಹಮ್ಮದ್ ಹಾಜಿ ಮೊದಲಾದವರು ಭಾಗವಹಿಸಿ ದರು. ೨೦೨೬-೨೮ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಎಂ, ಪ್ರಧಾನ ಕಾರ್ಯದರ್ಶಿಯಾಗಿ ರವಿ ನೀರ್ಚಾಲು, ಕೋಶಾಧಿಕಾರಿಯಾಗಿ ಥೋಮಸ್ ಡಿ’ಸೋಜಾ ಎಂಬಿವರನ್ನು ಆರಿಸಲಾಯಿತು. ರ ವಿ ನೀರ್ಚಾಲು ಸ್ವಾಗತಿಸಿ, ಮಹೇಶ್ ವಳಕ್ಕುಂಜ ವಂದಿಸಿದರು.

You cannot copy contents of this page