ಮವ್ವಾರು ಪಾಂಚಜನ್ಯ ಮಿತ್ರ ವೃಂದ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಮವ್ವಾರು: ಇಲ್ಲಿನ ಪಾಂಚಜನ್ಯ ಮಿತ್ರ ವೃಂದ ಕ್ಲಬ್‌ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ಕ್ಲಬ್ ಅಧ್ಯಕ್ಷ ಉದಯ ಕುಮಾರ್ ಸಿ.ಎಚ್ ಮವ್ವಾರು ಅಧ್ಯಕ್ಷತೆ ವಹಿಸಿದರು. ವರದಿ ವಾಚನ ಲೆಕ್ಕ ಪತ್ರಗಳನ್ನು ಮಂಡಿಸಲಾಯಿತು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾ ಯಿತು. ಗೌರವ ಸಲಹೆಗಾರರಾಗಿ ಡಾ| ಕೇಶವ ಕೆ. ಮವ್ವಾರು, ಗೌರವಾ ಧ್ಯಕ್ಷರಾಗಿ ಶಂಕರ ರೈ ಮವ್ವಾರು ಅವರನ್ನು ನೇಮಿಸಲಾಯಿತು. ಅಧ್ಯಕ್ಷರಾಗಿ ಉದಯ ಕುಮಾರ್ ಸಿ.ಎಚ್ ಮವ್ವಾರು, ಉಪಾಧ್ಯಕ್ಷರಾಗಿ ವಿಜಯ ಕುಮಾರ್ ಮವ್ವಾರು, ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಎಂ ಮಠದಮೂಲೆ, ಜತೆ ಕಾರ್ಯದರ್ಶಿ ಯಾಗಿ ನಿಶಾಂತ್ ರೈ ಮವ್ವಾರು, ಕೋಶಾಧಿಕಾರಿಯಾಗಿ ಶಶಿಕಾಂತ ಎಂ. ಮವ್ವಾರು ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾಗರಾಜ ಎಂ. ಮಠದಮೂಲೆ, ಚಂದ್ರಮೋಹನ ಎಂ. ಮವ್ವಾರು, ವಿನೋದ್ ಕುಮಾರ್ ಎಂ ಮಠದಮೂಲೆ, ಜಯಪ್ರಕಾಶ್ ಎಂ.ಎಸ್ ಮವ್ವಾರು, ಗಿರೀಶ ಎಂ ಮಠದಮೂಲೆ, ಹರೀಶ ಮಣಿಯಾಣಿ ಮಠದಮೂಲೆ ಅವರನ್ನು ಆಯ್ಕೆ ಮಾಡಲಾಯಿತು. ಮುಂದಿನ ಯೋಜನೆ ಮತ್ತು ಕಾರ್ಯಗಳ ಕುರಿತು ಚರ್ಚಿಸಲಾಯಿತು. ರವಿರಾಜ್ ಎಂ ಸ್ವಾಗತಿಸಿ, ನಾಗರಾಜ ಎಂ. ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page