ಕುಂಬಳೆ ಪ್ರೆಸ್ ಫಾರಂಗೆ ಪದಾಧಿಕಾರಿಗಳ ಆಯ್ಕೆ

ಕುಂಬಳೆ: ಕುಂಬಳೆ ಪ್ರೆಸ್ ಫಾರಂಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಬಗ್ಗೆ ನಡೆದ ಮಹಾಸಭೆಯಲ್ಲಿ ಉಪಾಧ್ಯಕ್ಷ ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಅಬ್ದುಲ್ ಲತೀಫ್ ಉಳುವಾರು ಸ್ವಾಗತಿಸಿದರು. ಕೆ.ಎಂ.ಎ. ಸತ್ತಾರ್, ಅಬ್ದುಲ್ಲ ಕುಂಬಳೆ ಮಾತನಾಡಿದರು.  ನೂತನ ಪದಾಧಿಕಾರಿಗಳಾಗಿ ಅಬ್ದುಲ್ಲ ಕುಂಬಳೆ (ಕಾರವಲ್- ಅಧ್ಯಕ್ಷ), ಐ. ಮುಹಮ್ಮದ್ ರಫೀಕ್ (ಕಾರ್ಯದರ್ಶಿ),  ಅಬ್ದುಲ್ ಲತೀಫ್ (ಕೋಶಾಧಿಕಾರಿ), ಉಪಾಧ್ಯಕ್ಷರಾಗಿ ಪುರುಷೋತ್ತಮ ಭಟ್, ಅಬ್ದುಲ್ ಲತೀಫ್, ಜೊತೆಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ಉಳುವಾರು, ಅಬ್ದುಲ್ ರಶೀದ್ ಆಯ್ಕೆಯಾದರು.

You cannot copy contents of this page