ಕಾಸರಗೋಡು: ಎಲ್ಐಸಿ ಏಜೆಂ ಟರುಗಳಿಗೆ ಇಎಸ್ಐ ಸೌಲಭ್ಯಗಳನ್ನು ಲಭ್ಯಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯ ಲೈಫ್ ಇನ್ಶೂರೆನ್ಸ್ ಏಜೆಂಟ್ಸ್ ಫೆಡರೇಶನ್ ಕಾಸರಗೋಡು ಬ್ರಾಂಚ್ ಸಮ್ಮೇಳನ ಆಗ್ರಹಿಸಿದೆ. ಆರ್ಗನೈಸಿಂಗ್ ಸೆಕ್ರೆಟರಿ ಎಂ. ಶಶೀಂದ್ರನ್ ಉದ್ಘಾಟಿಸಿ ದರು. ಶಿವನಾರಾಯಣ ಶರ್ಮ ಅಧ್ಯಕ್ಷತೆ ವಹಿಸಿದರು. ಸಿ. ವತ್ಸರಾಜ್, ಟಿ. ಕುಂಞಿಕೃಷ್ಣನ್, ಸಿ.ಡಿ. ನಾಯರ್, ಕೆ. ಕುಂಞಿಕೃಷ್ಣನ್ ನಾಯರ್, ಕೆ. ವಸಂತಿ, ಪಿ.ಎ. ರಾಜೀವ್, ಎ. ಗಣೇಶ್, ರಾಘವೇಂದ್ರ ಅಮ್ಮಣ್ಣಾಯ ಮಾತನಾಡಿದರು. ಕೆ.ಪಿ. ಗಂಗಾಧರನ್ ಸ್ವಾಗತಿಸಿ, ಪಿ. ಭರತನ್ ವಂದಿಸಿದರು.
ನೂತನ ಪದಾಧಿಕಾರಿಗಳಾಗಿ ಶಶಿಕಲ ಡಿ.ಕೆ.(ಅಧ್ಯಕ್ಷೆ), ಐ. ನಾರಾಯಣ, ಪುಷ್ಪಲತ ಕೆ. (ಉಪಾಧ್ಯಕ್ಷರು), ಪಿ. ಭರತನ್ (ಕಾರ್ಯದರ್ಶಿ), ಶೋಭ ಟಿ.ವಿ, ಕೃಷ್ಣ ಡಿ. ಬೆಳಿಂಜ (ಜೊತೆ ಕಾರ್ಯ ದರ್ಶಿಗಳು), ಕೆ.ಪಿ. ಗಂಗಾಧರನ್ (ಕೋಶಾಧಿಕಾರಿ) ಆಯ್ಕೆಯಾದರು.







