ಮಧೂರು-ಕೊಲ್ಲಂಗಾನ ರಸ್ತೆಯಲ್ಲಿ ವಾಹನ ನಿಯಂತ್ರಣ

ಕಾಸರಗೋಡು: ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಮಧೂರು ಪಟ್ಲ ಕೊಲ್ಲಂಗಾನ ರಸ್ತ್ತೆಯಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ತಿಂಗಳ ೯ರಿಂದ ಮಾರ್ಚ್ ೨೫ರ ವರೆಗೆ ವಾಹನ ಸಂಚಾರಕ್ಕೆ ನಿಯಂತ್ರಣ ಏರ್ಪಡಿಸಲಾಗಿದೆ. ಈ ಸಮಯದಲ್ಲಿ ಚರ್ಲಡ್ಕದಿಂದ ಕಾಸರಗೋಡಿಗೆ ತೆರಳಬೇಕಾದ ವಾಹನಗಳು ಮಾನ್ಯ ಬಿಲಾಲ್ ಮಸೀದಿ ಸಮೀಪದಲ್ಲಾಗಿ ಮೇಘನಡ್ಕ ದೇವರಕೆರೆ ಮೂಲಕ ವಿದ್ಯಾನಗರ ಮುಂಡ್ಯತ್ತಡ್ಕ ರಸ್ತೆ ಮೂಲಕ ಹಾಗೂ ಹಿಂತಿರುಗಿ ತೆರಳಬೇಕೆಂದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page