ಅಟ್ಟಿಯಿರಿಸಿದ ವಿದ್ಯುತ್ ಕಂಬ ಮೈಮೇಲೆ ಬಿದ್ದು ಯುವಕನಿಗೆ ದಾರುಣ ಅಂತ್ಯ

ಪಯ್ಯನ್ನೂರು: ಅಟ್ಟಿಯಿರಿಸಿದ ವಿದ್ಯುತ್ ಕಂಬ ಮೈಮೇಲೆ ಬಿದ್ದು ಯುವಕನಿಗೆ ಧಾರುಣ ಅಂತ್ಯ ಸಂಭವಿಸಿದೆ. ತಳಿಪರಂಬ್ ಕಾಞಿರಂಙಾಟ್ ಚಂದ್ರನ್- ಮಾಧವಿ ದಂಪತಿ ಪುತ್ರ ಅಜೀಶ್ (36) ಮೃತಪಟ್ಟ ಯುವಕ ನಿನ್ನೆ ರಾತ್ರಿ 7 ಗಂಟೆ ವೇಳೆ ದುರಂತ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ಅಟ್ಟಿಯಿರಿಸಿದ್ದ ವಿದ್ಯುತ್ ಕಂಬ ಮಗುಜಿ ಅಜೀಶ್‌ರ ಮೈಮೇಲೆ ಬಿದ್ದಿತ್ತು. ಪರಿಸರ ನಿವಾಸಿಗಳ ನೇತೃತ್ವದಲ್ಲಿ ಕೂಡಲೇ ಅಜೀಶ್‌ನನ್ನು ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ದುರಂತದ ಬಗ್ಗೆ ತಳಿಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ.

You cannot copy contents of this page