ಸ್ಕೂಟರ್ ಕಳವು: ಕೇಸು ದಾಖಲು

ಮಂಜೇಶ್ವರ: ಸಂಬಂಧಿಕರ ಮನೆ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ತೂಮಿನಾಡು ನಿವಾಸಿ ಅಬ್ದುಲ್ ಮುನೀರ್‌ರ ಸಹೋದರ ಡಾ. ಅಬ್ದುಲ್ ಮನ್ಸೂರ್ ಎಂಬವರ ಕರ್ನಾಟಕ ನೋಂದಾವಣೆಯ ಸ್ಕೂಟರ್ ಕಣ್ವತೀರ್ಥ ಸಂ ಬಂಧಿಕರ ಮನೆಯಲ್ಲಿ ಇರಿ ಲಾಗಿತ್ತು. ಅಲ್ಲಿಂದ ಈ ತಿಂಗಳ ೫ರಂದು ರಾತ್ರಿಯಿಂದ ೬ರಂದು ಬೆಳಿಗ್ಗೆ ಮಧ್ಯೆ  ಸ್ಕೂಟರ್‌ನ್ನು ಕಳವುಗೈದಿರುವುದಾಗಿ ಅಬ್ದುಲ್ ಮುನೀರ್ ದೂರು ನೀಡಿದ್ದಾರೆ. ಸುಮಾರು ೪೦ ಸಾವಿರ ರೂ. ಬೆಲೆ ಅಂದಾಜಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You cannot copy contents of this page