ವಿದ್ಯುತ್ ತಂತಿ ಮೇಲೆ ಬಿದ್ದ ಮಡಲು ತೆಗೆಯುತ್ತಿದ್ದ ವೇಳೆ ಬಾವಿಗೆ ಬಿದ್ದು ಯುವಕ ದಾರುಣ ಸಾವು

ಕಾಸರಗೋಡು: ವಿದ್ಯುತ್ ಸರ್ವೀಸ್ ತಂತಿ ಮೇಲೆ ಬಿದ್ದಿದ್ದ ಮಡಲನ್ನು ತೆಗೆಯುತ್ತಿದ್ದ ಯುವಕ ಬಾವಿಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಉದುಮ ವಲಿಯವಳಪ್ಪಿನ ನಿವಾಸಿ ಹಾಗೂ ಉದುಮ ನಾಲಾಂವಾದುಕ್ಕಲ್ ರಸ್ತೆ ಬಳಿಯ ಹೊಟೇಲೊಂದರ ಮಾಲಕರಾದ ಅರವಿಂದನ್- ಅಂಬುಜಾಕ್ಷಿ ದಂಪತಿಯ ಏಕ ಪುತ್ರ ಅಶ್ವಿನ್ ಅರವಿಂದ್ (18) ಸಾವನ್ನಪ್ಪಿದ ದುರ್ದೈವಿ ಯುವಕ. ಮನೆ ಪಕ್ಕದ ಬಾವಿ ಮೇಲೆ ಹಾದು ಹೋಗುತ್ತಿದ್ದ ವಿದ್ಯುತ್ ಸರ್ವೀಸ್ ತಂತಿ ಮೇಲೆ ತೆಂಗಿನ ಮರದಿಂದ ಮಡಲೊಂದು ಬಿದ್ದಿತ್ತು. ಅದನ್ನು ಕಂಡ ಅಶ್ವಿನ್ ನಿನ್ನೆ ಬಾವಿಕಟ್ಟೆ …

ಔಷಧ ಸಾಮಗ್ರಿಗಳ ಸುಂಕ ಶೇ.100ಕ್ಕೇರಿಸಿದ ಟ್ರಂಪ್

ನವದೆಹಲಿ: ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳ ಮೇಲೆ ಸುಂಕ ದಾಳಿ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅಮೆರಿಕಕ್ಕೆ ಪ್ರವೇಶಿಸುವ ಎಲ್ಲಾ ಬ್ರಾಂಡಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಸುಂಕವನ್ನು ಶೇ. 100ಕ್ಕೇರಿಸಿ ಹೊಸ ಅಧಿಸೂಚನೆ ಜ್ಯಾರಿಗೊಳಿಸಿದ್ದಾರೆ. ಈ ಸುಂಕವು ಅಕ್ಟೋಬರ್ 1ರಿಂದ ಜ್ಯಾರಿಗೆ ಬರಲಿದೆ. ಆದರೆ ಔಷಧ ಕಂಪೆನಿಗಳು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದರೆ ಅವುಗಳು ಸುಂಕಗಳಿಂದ ಪ್ರಭಾವಿತವಾಗುವುದಿ ಲ್ಲವೆಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಟ್ರಂಪ್‌ರ ಈ ಸುಂಕ ಸಮರ ಭಾರತ ಮಾತ್ರವಲ್ಲ …

ಗೇಟ್ ತಲೆಗೆ ಬಿದ್ದು ಮಗು ಮೃತ್ಯು

ಆಲಪ್ಪುಳ: ಗೇಟ್ ತಲೆಗೆ ಬಿದ್ದು ಒಂದೂವರೆ  ವರ್ಷದ ಮಗುವೊಂದು ಮೃತಪಟ್ಟ ಘಟನೆ ಆಲಪ್ಪುಳದಿಂದ ವರದಿಯಾಗಿದೆ. ವೈಕಂ ಟಿವಿಪುರಂ ಮಣಿಮಂದಿರ ನಿವಾಸಿ ಅಶಿಲ್ ಮಣಿಯಾನ್-ಅಶ್ವತಿ ದಂಪತಿಯ ಪುತ್ರ ಋದವ್ ಮೃತಪಟ್ಟ ಮಗುವಾಗಿದೆ. ಕಳೆದ ಸೋಮವಾರ ಆಲಪ್ಪುಳ ಪಳವೀಡ್ ಎಂಬಲ್ಲಿರುವ ಅಶ್ವತಿಯ ಮನೆಯಲ್ಲಿ ದುರ್ಘಟನೆ ಸಂಭವಿಸಿತ್ತು.  ಗೇಟ್ ಮುಚ್ಚುತ್ತಿದ್ದಂತೆ ಅದು ಮಗುವಿನ ತಲೆಗೆ ಬಿದ್ದಿತ್ತು. ಇದರಿಂದ ಗಂಭೀರ ಗಾಯಗೊಂಡ ಮಗುವನ್ನು ವಂಡಾನಂ ಮೆಡಿಕಲ್ ಕಾಲೇಜು ಆಸತ್ರೆಯಲ್ಲಿ  ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ.

ಖೋಟಾನೋಟಿನಿಂದ ವಂಚಿತರಾಗದಿರಲು ಸೂಚನೆ: 200 ರೂ. ಖೋಟಾ ನೋಟು ವ್ಯಾಪಕ

ಕಾಸರಗೋಡು: ಜಿಲ್ಲೆಯಲ್ಲಿ ವ್ಯಾಪಕವಾಗಿ 200 ರೂ.ಗಳ ಖೋಟಾ ನೋಟು ಚಲಾವಣೆ ಮಾಡಲಾಗುತ್ತಿದೆಯೆಂಬ ಮಾಹಿತಿ ಲಭಿಸಿದೆ. ಬೇಡಗಂ ಪೊಲೀಸ್  ಠಾಣೆ ವ್ಯಾಪ್ತಿಯ ಕುಂಟಂಗುಳಿಯಲ್ಲಿ ಖೋಟಾನೋಟು ವ್ಯಾಪಕವಾಗಿ ಈಗ ಚಲಾವಣೆಯಲ್ಲಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಸಲಿ ನೋಟು ಎಂದೇ ಕಂಡುಬರುವ ಈ ಖೋಟಾ ನೋಟುಗಳಿಗೆ ಹಲವಾರು ಮಂದಿ ಈಗಾಗಲೇ ವಂಚಿತರಾಗಿದ್ದಾರೆ. ಇದೇ ವೇಳೆ 200 ರೂ.ಗಳ ಚಲಾವಣೆಯಲ್ಲಿರುವ ನೋಟು ಫ್ಯಾನ್ಸಿ ನೋಟಾಗಿದೆ ಎಂದು ಪೊಲೀಸರು ತಿಳಿಸುತ್ತಾರೆ. ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬದಲಾಗಿ ಮನೋರಂಜನ್ ಬ್ಯಾಂಕ್ ಆಫ್ ಇಂಡಿಯಾ …

ಅವೈಜ್ಞಾನಿಕವಾಗಿ ತಾಜ್ಯ ಉಪೇಕ್ಷೆ ಸ್ಕ್ವಾಡ್‌ನಿಂದ ದಂಡ

ಮುಳ್ಳೇರಿಯ: ಕಾರಡ್ಕ ಪಂಚಾಯತ್‌ನ ಉಯಿತ್ತಡ್ಕದಲ್ಲಿ ಕಸಾಯಿಖಾನೆಯ ತ್ಯಾಜ್ಯದಿಂದಾಗಿ ದುರ್ವಾಸನೆ ಇದೆ ಎಂಬ ದೂರಿನಂತೆ ತಪಾಸಣೆ ನಡೆಸಿದಾಗ ತ್ಯಾಜ್ಯವನ್ನು ಸ್ವಂತ ಹಿತ್ತಿಲಲ್ಲಿ ಅವೈಜ್ಞಾನಿಕವಾಗಿ ಉಪೇಕ್ಷಿ ಸಿರುವುದನ್ನು ಪತ್ತೆಹಚ್ಚಲಾಗಿದೆ. ಇದಕ್ಕಾಗಿ ಸ್ಥಳದ ಮಾಲಕನಿಗೆ 15,000 ರೂ. ದಂಡ ಹೇರಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ನಿರ್ದೇಶಿಸಲಾಗಿದೆ. ಸಂಸ್ಥೆ ಹಾಗೂ ಪರಿಸರವನ್ನು ಶುಚಿಯಾಗಿರಿಸ ದಿರುವುದಕ್ಕೆ ಅಡೂರಿನ ಜನರಲ್ ಸ್ಟೋರ್, ಗ್ರೋಸರಿ, ಅಣಂಗೂರಿನ ಮಾರ್ಟ್, ಹೋಟೆಲ್, ಕ್ವಾರ್ಟರ್ಸ್, ಪುಲ್ಲೂರಿನ ಸೂಪರ್ ಮಾರ್ಕೆಟ್, ಬೇಕರಿ, ವಿದ್ಯಾನಗರ ಅಪಾರ್ಟ್‌ಮೆಂಟ್ ಎಂಬೀ ಸಂಸ್ಥೆಗಳ ಮಾಲಕರಿಗೆ 22,000 ರೂ. ದಂಡ …

ಕಳವು ಪ್ರಕರಣಗಳಲ್ಲಿ ಆರೋಪಿಯಾದ ಮಂಜೇಶ್ವರ ನಿವಾಸಿ 10 ವರ್ಷ ಬಳಿಕ ಸೆರೆ

ಮಂಜೇಶ್ವರ: ಎರಡು ಕಳವು ಪ್ರಕರಣಗಳಲ್ಲಿ ಆರೋಪಿಯಾದ ಮಂಜೇಶ್ವರ ನಿವಾಸಿ 10 ವರ್ಷದ ಬಳಿಕ ಸೆರೆಗೀಡಾಗಿದ್ದಾನೆ. ಮಂಜೇಶ್ವರ ಕುಳೂರಿನ ಅಶ್ರಫ್ (32) ಎಂಬಾತ ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. 2015 ಆಗಸ್ಟ್ 7ರಂದು ವಿಟ್ಲ ಪೇಟೆಯ ಜಗದೀಶ್ ಕಾಮತ್‌ರ ಮೇಲೆ ಮೆಣಸಿನ ಪುಡಿ ಎರಚಿ ಕಳವು ನಡೆಸಿದ ಪ್ರಕರಣದಲ್ಲಿ ಅಶ್ರಫ್ ಆರೋಪಿಯಾಗಿ ದ್ದಾನೆ. 2016 ಜನವರಿ 23ರಂದು ಕೊಲ್ನಾಡು ಗ್ರಾಮದ ವೈನ್ ಶಾಪ್ ಒಂದಕ್ಕೆ ನುಗ್ಗಿ ಹಣ ಕಳವುಗೈದ ಪ್ರಕರಣ ವನ್ನೂ ಈತನ ಮೇಲೆ ದಾಖಲಿಸ ಲಾಗಿದೆ. ಎರಡು …

ಮಾದಕದ್ರವ್ಯ ಸಹಿತ ಓರ್ವ ಸೆರೆ: ಇನ್ನೋರ್ವ ಪರಾರಿ

ಕಾಸರಗೋಡು: ಮಾದಕದ್ರವ್ಯ ಕೈವಶವಿರಿಸಿಕೊಂಡ ಆರೋಪದಂತೆ ಮೇಲ್ಪರಂಬ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿ ದ್ದಾರೆ. ತೆಕ್ಕಿಲ್ ಚಟ್ಟಂಚಾಲ್ ನಿಜಾಮುದ್ದೀನ್‌ನಗರದ ಕೊರಕುನ್ನು ಮೊಟ್ಟದ ಅಹಮ್ಮದ್ ಕಬೀರ್ ಬಿ.ಎಂ (36) ಮತ್ತು ಕಣ್ಣೂರು ನಿವಾಸಿ ಎನ್ನಲಾಗಿರುವ ಡಾ. ಮುಹಮ್ಮದ್ ಸುನೀರ್  ಎಂಬಿವರ ವಿರುದ್ಧ ಈ ಪ್ರಕರಣ ದಾಖಲಿಸ ಲಾಗಿದ್ದು, ಆ ಪೈಕಿ ಅಹಮ್ಮದ್ ಕಬೀರ್‌ನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಆ ವೇಳೆ ಪರಾರಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ೩.೨೮ ಗ್ರಾಂ ಎಂಡಿಎಂಎ ಮತ್ತು ೧೦.೬೫ ಗ್ರಾಂ ಗಾಂಜಾವನ್ನು ಆರೋ ಪಿಗಳಿಂದ …

ಪತ್ನಿ ಮೇಲಿನ ಕೋಪದಿಂದ ಇಬ್ಬರು ಮಕ್ಕಳನ್ನು ಕಡಿದು ಕೊಂದ ತಂದೆ: ಓರ್ವ ಪುತ್ರನಿಗೆ  ಗಂಭೀರ

ಬೆಂಗಳೂರು: ಪತ್ನಿ ಮೇಲಿನ ಕೋಪದಿಂದ ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳ ಮೇಲೆ ಕೊಡಲಿಯಿಂದ ಕಡಿದಿದ್ದು, ಈಪೈಕಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿ ಓರ್ವ ಪುತ್ರ ಗಂಭೀರಗಾಯಗೊಂಡ ಭೀಬತ್ಸ ಘಟನೆ ಯಾದಗಿರಿ ಸಮೀಪದ  ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ. ಹತ್ತಿಕುಣಿ ನಿವಾಸಿ ಶರಣಪ್ಪ ದುಗನೂರ ಎಂಬಾತ ಈ ಕೃತ್ಯವೆಗಿದ್ದಾನೆಂದು ಹೇಳಲಾಗುತ್ತಿದೆ. ನಾಲ್ಕು ವರ್ಷ ಪ್ರಾಯದ ಸ್ಟಾನಿ, ಮೂರು ವರ್ಷದ ಭಾರ್ಗವ ಎಂಬಿಬ್ಬರು ಮಕ್ಕಳು ಕೊಲೆಗೀಡಾಗಿದ್ದಾರೆ. ಎಂಟು ವರ್ಷದ ಹೇಮಂತ ಗಂಭೀರ ಗಾಯಗೊಂಡಿದ್ದು, ಈತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ಶರಣಪ್ಪನ …

ಬಿಜೆಪಿ ಗೃಹ ಸಂಪರ್ಕಕ್ಕೆ ಎಂ.ಟಿ. ರಮೇಶ್‌ರಿಂದ ಚಾಲನೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆ ಪ್ರಚಾರಾರ್ಥ ಬಿಜೆಪಿ ಆಯೋಜಿಸುವ ಗೃಹ ಸಂಪರ್ಕದ ಜಿಲ್ಲಾ ಮಟ್ಟದ ಉದ್ಘಾಟನೆ ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಹತ್ತನೇ ವಾರ್ಡ್ ಕೇಳುಗುಡ್ಡೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ನಿರ್ವಹಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಮನುಲಾಲ್ ಮೇಲತ್ತ್, ಎನ್. ಬಾಬುರಾಜ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, …

ಆಸ್ಟರ್ ಡಿ.ಎಂ. ಹೆಲ್ತ್‌ಕೇರ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಮಂತ್ರಿಯಿಂದ ಅ.2ರಂದು ಉದ್ಘಾಟನೆ

ಕಾಸರಗೋಡು: ದೇಶದ ಮುಂಚೂಣಿ ಆರೋಗ್ಯ ಸೇವಾದಾತರಾದ ಆಸ್ಟರ್ ಡಿ.ಎಂ. ಹೆಲ್ತ್ ಕೇರ್, ಕೇರಳದಲ್ಲಿ ಅದರ 8ನೇ ಆಸ್ಪತ್ರೆಯಾದ ಆಸ್ಟರ್ ಮಿಮ್ಸ್ ಕಾಸರಗೋಡು ಇದರ ಚಟುವಟಿಕೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ವಿಶ್ವೋತ್ತರ ದರ್ಜೆಯ ಆರೋಗ್ಯ ಪರಿಪಾಲನೆ, ರಾಜ್ಯದಲ್ಲಿ  ಇನ್ನಷ್ಟು ಕಡೆಗಳಿಗೆ ತಲುಪಿಸುವುದು ಎಂಬ ಆಸ್ಟರ್‌ನ ಉದ್ದೇಶಕ್ಕೆ ಬಲ ನೀಡಲಿದೆ ಹೊಸ ಆಸ್ಪತ್ರೆ. ಅಕ್ಟೋಬರ್ 2ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ಪತ್ರೆಯನ್ನು ಉದ್ಘಾಟಿಸುವರು. ಕರ್ನಾಟಕ ಆರೋಗ್ಯ ಕುಟುಂಬ ಕ್ಷೇಮ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. 2.1 ಲಕ್ಷ ಚದರ …