ವಿದ್ಯುತ್ ತಂತಿ ಮೇಲೆ ಬಿದ್ದ ಮಡಲು ತೆಗೆಯುತ್ತಿದ್ದ ವೇಳೆ ಬಾವಿಗೆ ಬಿದ್ದು ಯುವಕ ದಾರುಣ ಸಾವು
ಕಾಸರಗೋಡು: ವಿದ್ಯುತ್ ಸರ್ವೀಸ್ ತಂತಿ ಮೇಲೆ ಬಿದ್ದಿದ್ದ ಮಡಲನ್ನು ತೆಗೆಯುತ್ತಿದ್ದ ಯುವಕ ಬಾವಿಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಉದುಮ ವಲಿಯವಳಪ್ಪಿನ ನಿವಾಸಿ ಹಾಗೂ ಉದುಮ ನಾಲಾಂವಾದುಕ್ಕಲ್ ರಸ್ತೆ ಬಳಿಯ ಹೊಟೇಲೊಂದರ ಮಾಲಕರಾದ ಅರವಿಂದನ್- ಅಂಬುಜಾಕ್ಷಿ ದಂಪತಿಯ ಏಕ ಪುತ್ರ ಅಶ್ವಿನ್ ಅರವಿಂದ್ (18) ಸಾವನ್ನಪ್ಪಿದ ದುರ್ದೈವಿ ಯುವಕ. ಮನೆ ಪಕ್ಕದ ಬಾವಿ ಮೇಲೆ ಹಾದು ಹೋಗುತ್ತಿದ್ದ ವಿದ್ಯುತ್ ಸರ್ವೀಸ್ ತಂತಿ ಮೇಲೆ ತೆಂಗಿನ ಮರದಿಂದ ಮಡಲೊಂದು ಬಿದ್ದಿತ್ತು. ಅದನ್ನು ಕಂಡ ಅಶ್ವಿನ್ ನಿನ್ನೆ ಬಾವಿಕಟ್ಟೆ …
Read more “ವಿದ್ಯುತ್ ತಂತಿ ಮೇಲೆ ಬಿದ್ದ ಮಡಲು ತೆಗೆಯುತ್ತಿದ್ದ ವೇಳೆ ಬಾವಿಗೆ ಬಿದ್ದು ಯುವಕ ದಾರುಣ ಸಾವು”