ಭಾರತದಲ್ಲಿ ಮುಸ್ಲಿಮರು ಸುರಕ್ಷಿತರು; ಯಾವುದೇ ಸಂದಿಗ್ಧತೆಯಿಲ್ಲ- ಕಾಂತಾಪುರಂ

ದೆಹಲಿ: ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆಂದು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನುಡಿದರು. ತನ್ನ ಇಷ್ಟ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಂತಾಪುರಂ ಗಮನಾರ್ಹವಾದ ಈ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರಿಗೆ ಯಾವುದೇ ಸಂದಿಗ್ಧತೆ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಮಾತುಕತೆಯಲ್ಲಿ ಸಂತೋಷವಿದೆ ಎಂದು ಕಾಂತಾಪುರಂ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ವಕ್ಫ್, ತೀವ್ರ ಮತದಾರರ ಯಾದಿ ಪರಿಷ್ಕರಣೆ ಎಂಬೀ ವಿಷಯಗಳಲ್ಲಿ ಪ್ರಧಾನಮಂತ್ರಿಗೆ ತನ್ನ ಆತಂಕವನ್ನು ತಿಳಿಸಿರುವುದಾಗಿಯೂ ಅವರು ನುಡಿದರು. ಪ್ರಧಾನಮಂತ್ರಿಯೊಂದಿಗಿನ ಮಾತುಕತೆಯ ಹೆಚ್ಚಿನ ಮಾಹಿತಿಗಳನ್ನು ಬಳಿಕ ಸ್ಪಷ್ಟಪಡಿಸುವುದಾಗಿ ಅವರು ಈ ಸಂದರ್ಭದಲ್ಲಿ …

ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರಿಗೆ ಗಾಯ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಪುಳಿಕುತ್ತಿ ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ ಅಗರ್ತಿಮೂಲೆಯಲ್ಲಿ ಸ್ಥಳೀಯರಾದ ಇಕ್ಬಾಲ್ ಹಾಗೂ ರಾಧಾಕೃಷ್ಣರಿಗೆ ಬೀದಿನಾಯಿ ಕಚ್ಚಿದ್ದು, ಇವರು ಚಿಕಿತ್ಸೆ ಪಡೆದಿದ್ದಾರೆ. ಬಳಿಕ ನಾಯಿಯನ್ನು ಹಿಡಿದು ಸ್ಥಳೀಯರು ಕಟ್ಟಿಹಾಕಿದ್ದಾರೆ. ಪುಳಿಕುತ್ತಿ, ಪ್ರತಾಪ ನಗರ, ಅಗರ್ತಿ ಮೂಲೆ ಸಹಿತ ಪರಿಸರ ಪ್ರದೇಶಗಳಲ್ಲಿ ಬೀದಿನಾಯಿಗಳ ಕಾಟ ವ್ಯಾಪಕಗೊಂ ಡಿದ್ದು, ವಾಹನ ಸಂಚಾರದ ವೇಳೆಯೂ ಬೆನ್ನಟ್ಟುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೀದಿನಾಯಿ ಗಳ ನಿಯಂತ್ರಣಕ್ಕೆ ಅಗತ್ಯ …

ವಿಷಾಹಾರ: ಇಬ್ಬರು ಮೃತ್ಯು; ಹೋಟೆಲ್‌ಗೆ ಬೀಗ

ತಿರುವನಂತಪುರ: ವಿಳಿಂಞದ ಹೋಟೆಲ್‌ನಿಂದ ಆಹಾರ ಸೇವಿಸಿದ ಇಬ್ಬರು ಮೃತಪಟ್ಟಿದ್ದಾರೆ. ಕೊಲ್ಲಂ, ನಿಲಾಮೇಲ್ ನಿವಾಸಿಗಳಾದ ರಶೀದ ಬೀವಿ, ಅಳಿಯ ಶಾಜಿ ಎಂಬಿವರು ಮೃತಪಟ್ಟವರು. ವಿಷಾಹಾರ ಮರಣಕ್ಕೆ ಕಾರಣವೆಂದು ಶಂಕಿಸಲಾಗಿದೆ. ನಿನ್ನೆ ಸಂಜೆ ವಿಳಿಂಞದ ಹೋಟೆಲ್‌ನಿಂದ ರಶೀದ ಬೀವಿ ಹಾಗೂ ಶಾಜಿ ಸಹಿತದ ಆರು ಮಂದಿ ಆಹಾರ ಸೇವಿಸಿದ್ದರು. ಇವರಲ್ಲಿ ನಾಲ್ಕು ಮಂದಿಗೆ ದೈಹಿಕ ಅಸ್ವಸ್ಥತೆಗಳು ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ರಶೀದ ಬೀವಿ ಹಾಗೂ ಶಾಜಿಯವರ ಜೀವ ಉಳಿಸ ಲು ಸಾಧ್ಯವಾಗಲಿಲ್ಲ. ಶಾಜಿಯ ವರ ಪತ್ನಿ ಸಜಿನ …

ಕಳತ್ತೂರಿನಲ್ಲಿ ವ್ಯಾಪಾರಿ ಮನೆಯಿಂದ ನಗ-ನಗದು ಕಳವು: ತನಿಖೆ ಆರಂಭ; 7 ಬೆರಳಚ್ಚುಗಳು ಪತ್ತೆ

ಕುಂಬಳೆ: ಕಳತ್ತೂರಿನಲ್ಲಿ ವ್ಯಾಪಾರಿಯ ಮನೆಯಿಂದ  ಚಿನ್ನಾಭರಣ ಹಾಗೂ ಹಣ ಕಳವಿಗೀ ಡಾದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ವ್ಯಾಪಾರಿಯಾಗಿರುವ ಕಳತ್ತೂರು ಪಂಜಿಕಲ್ಲಿನ ಯು.ಕೆ.ಯೂಸಫ್‌ರ ಮನೆಯಿಂದ  ಕಳವು ನಡೆದಿದೆ. ಎರಡಂತಸ್ತಿನ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಡ್ ರೂಂನ  ಕಪಾಟುಗಳನ್ನು ತೆರೆದು 9 ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ.  ದೋಚಿದ್ದಾರೆ. ಶನಿವಾರ ರಾತ್ರಿ  7 ಗಂಟೆಯಿಂದ ನಿನ್ನೆ ಬೆಳಿಗ್ಗೆ 7 ಗಂಟೆ ಮಧ್ಯೆ ಕಳವು ನಡೆದಿರುವುದಾಗಿ ಸಂಶಯಿಸಲಾಗಿದೆ. ವಿಷಯ ತಿಳಿದು ಕುಂಬಳೆ ಪೊಲೀಸರು …

ಸೋಷ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಚಿನ್ನು ಪಾಪು ಸಾವಿನ ಬೆನ್ನಲ್ಲೇ ಸ್ನೇಹಿತ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಸೋಶ್ಯಲ್ ಮೀಡಿಯಾ  ಇನ್‌ಫ್ಲುವೆನ್ಸರ್ ಚಿನ್ನು ಪಾಪು ಯಾನೆ ರೇಷ್ಮ (24)ರ ಸ್ನೇಹಿತ  ಸಂದೇಶ್ (28)ರ ಸಾವು  ನೇಣು ಬಿಗಿದು  ಸಂಭವಿಸಿರುವುದಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ. ನಿನ್ನೆ ಮಧ್ಯಾಹ್ನ  2.30 ರ ವೇಳೆ ಸಂದೇಶ್ ಕೂಡ್ಲು ಮನ್ನಿಪ್ಪಾಡಿಯಲ್ಲಿರುವ ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.   ಸಂದೇಶ್‌ರ ಸ್ನೇಹಿತೆ ಆದೂರು ಆಲಂತಡ್ಕದ ಚಿನ್ನು ಪಾಪು ಯಾನೆ ರೇಷ್ಮ …

ಕೊಲೆ ಪ್ರಕರಣದ ಆರೋಪಿಯಾದ 34ರ ಯುವತಿಗೆ ದೌರ್ಜನ್ಯ: ಪುತ್ರನ ಗೆಳೆಯನ ವಿರುದ್ಧ ಕೇಸು

ಕಾಸರಗೋಡು: ಬೇಕಲ್ ಪೊಲೀಸ್ ಸಬ್ ಡಿವಿಷನ್ ವ್ಯಾಪ್ತಿಯ ಕೋಲಾಹಲ ಮೂಡಿಸಿದ್ದ ಕೊಲೆ ಪ್ರಕರಣವೊಂದರ ಆರೋಪಿಯಾದ ಯುವತಿಯನ್ನು  ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. 34ರ ಹರೆಯದ ಯುವತಿ ನೀಡಿದ ದೂರಿನಲ್ಲಿ ಪುತ್ರನ ಗೆಳೆಯನಾದ 22ರ ಹರೆಯದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. 2025 ನವೆಂಬರ್ 21ರಂದು ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿದೆ. ಪುತ್ರನ ಗೆಳೆಯನಾದ ಯುವಕನ ಜೊತೆ ಕಲ್ಲಿಕೋಟೆಗೆ ತೀರ್ಥಾಟನೆಗೆ ಯುವತಿ ತೆರಳಿದ್ದರು. ಅಂದು ಕಲ್ಲಿಕೋಟೆಯ ಒಂದು ವಸತಿಗೃಹದಲ್ಲಿ ಇವರಿಬ್ಬರು ವಾಸವಾಗಿದ್ದರು. ಅಲ್ಲಿ ಯುವಕ ಮಾನಭಂಗಗೈದಿರುವುದಾಗಿಯೂ, ದೃಶ್ಯವನ್ನು ಫೋನ್‌ನಲ್ಲಿ ದಾಖಲಿಸಿರುವುದಾಗಿಯೂ ಹೇಳಲಾಗಿದೆ. …

ಖಾಸಗಿ ಬಸ್ ಚಾಲಕನಿಗೆ ಆಕ್ರಮಿಸಿ ದಾರಿ ಮಧ್ಯೆ ಉಪೇಕ್ಷೆ: ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬಂದಡ್ಕದಲ್ಲಿ ಖಾಸಗಿ ಬಸ್ ಚಾಲಕನಿಗೆ ಮಾರಕವಾಗಿ ಹಲ್ಲೆಗೈದ ಬಳಿಕ ದಾರಿ ಮಧ್ಯೆ ಉಪೇಕ್ಷಿಸಿದ ಘಟನೆ ನಡೆದಿದೆ. ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲುಗೊಂಡ ಚಾಲಕನಿಗೆ ಪ್ರಜ್ಞೆ ಮರಳಿರುವುದರೊಂದಿಗೆ ಘಟನೆ ಬಹಿರಂಗಗೊಂಡಿದೆ. ಬೇಡಡ್ಕ ಪೊಲೀಸರು ಸ್ವತಃ ತನಿಖೆ ಆರಂಭಿಸಿದ್ದಾರೆ. ಚಾಲಕನಿಂದ ಸಮಗ್ರವಾದ ಹೇಳಿಕೆ ಸಂಗ್ರಹಿಸಿದ ಬಳಿಕ ಕೇಸು ದಾಖಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಖಾಸಗಿ ಬಸ್ ಚಾಲಕ  ಬುಧವಾರ ಬೆಳಿಗ್ಗೆ ಬಂದಡ್ಕ ಬಸ್ ನಿಲ್ದಾಣದ ಸಮೀಪ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ಬಂದಡ್ಕದ …

ಕುಂಜತ್ತೂರಿನಲ್ಲಿ ಯುವಕನ ಮೇಲೆ ತಂಡದಿಂದ ಹಲ್ಲೆ

ಮಂಜೇಶ್ವರ: ಕುಂಜತ್ತೂರು ಜಮಾಲಿಯ ಮಸೀದಿ ಬಳಿಯ ನಿವಾಸಿ, ಕುಂಜತ್ತೂರಿನ ಲೈಟ್ ಆಂಡ್ ಸೌಂಡ್ಸ್ ಸಂಸ್ಥೆಯ ನೌಕರನಾದ  ಇಬ್ರಾಹಿಂ ಖಲೀಲ್ (32) ಎಂಬವರ ಮೇಲೆ ತಂಡವೊಂದು ಮಾರಕಾಯುಧ ಗಳಿಂದ ಹಲ್ಲೆಗೈದು ಗಾಯಗೊಳಿಸಿದೆ. ಜತೆಗೆ ಕೆಲಸ ನಿರ್ವಹಿಸುವ ಲತೀಫ್ ಎಂಬಾತನ ನೇತೃತ್ವದಲ್ಲಿ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಗಾಯಗೊಂಡ ಇಬ್ರಾಹಿಂ ಖಲೀಲ್‌ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಕುಂಜತ್ತೂರಿನಲ್ಲಿ ಹೊನಲು ಬೆಳಕಿನ  ಕ್ರಿಕೆಟ್ ಪಂದ್ಯಾಟ ನಡೆದಿತ್ತು. ಈ ವೇಳೆ ಇಬ್ರಾಹಿಂ ಖಲೀಲ್ ಹಾಗೂ ಲತೀಫ್ ಮಧ್ಯೆ ವಾಗ್ವಾದವುಂಟಾಗಿ ತ್ತೆನ್ನಲಾಗಿದೆ. …

ಜಾನುವಾರು ಸಾಗಾಟ ಆರೋಪಿಸಿ ಇಬ್ಬರಿಗೆ ಹಲ್ಲೆ:  ಆರು ಮಂದಿ ಸೆರೆ

ಮಂಜೇಶ್ವರ: ಕಸಾಯಿಖಾನೆಗೆ ಜಾನುವಾರುಗಳನ್ನು ತಲುಪಿಸುತ್ತಿರು ವುದಾಗಿ ಆರೋಪಿಸಿ ಉತ್ತರಪ್ರದೇಶ ನಿವಾಸಿಗಳಾದ ಇಬ್ಬರಿಗೆ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆಗೈಯ್ಯ ಲೆತ್ನಿಸಿದ ಪ್ರಕರಣದಲ್ಲಿ ಪ್ರಾಯಪೂ ರ್ತಿಯಾಗದ ಇಬ್ಬರ ಸಹಿತ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ಕುಂಜತ್ತೂರಿನ ಅನಿಲ್ ಕುಮಾರ್ (23), ಪೆರ್ಮುದೆಯ ಭರತ್‌ರಾಜ್ (19), ಇಚ್ಲಂಗೋಡಿನ ಭರತ್ (19), ರಕ್ಷಿತ್ (21) ಎಂಬಿವರನ್ನು ಹಾಗೂ 16 ವರ್ಷ ಪ್ರಾಯದ ಮತ್ತಿಬ್ಬರನ್ನು ಮಂಜೇಶ್ವರ  ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ.  ಪ್ರಾಯಪೂರ್ತಿಯಾಗ ದವರನ್ನು ರಕ್ಷಕರೊಂದಿಗೆ ಕಳುಹಿಸಲಾ …

ಆರು ತಿಂಗಳ ಹಿಂದೆ ನಾಪತ್ತೆಯಾದ ಯುವಕ ಪ್ರತ್ಯೇಕ ತನಿಖಾ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆ

ಉಪ್ಪಳ: ಆರು ತಿಂಗಳ ಹಿಂದೆ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಯುವಕನನ್ನು ಪೊಲೀಸರು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಯಿತು. ಮಂಗಲ್ಪಾಡಿ ಸೋಂಕಾಲು ಪ್ರತಾಪನಗರದ ಶಿವಾನಂದ ಎಂಬವರ ಪುತ್ರ ಕೃಪೇಶ್ (23) ರನ್ನು ಕರ್ನಾಟಕದ ಶಿವಮೊಗ್ಗ ಬಳಿಯ ಕಳಸದಿಂದ ಪತ್ತೆಹಚ್ಚಲಾಗಿದೆ. ಹೈಕೋ ರ್ಟ್‌ನ ನಿರ್ದೇಶ ಪ್ರಕಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿಯವರ ನೇತೃತ್ವದಲ್ಲಿ ರೂಪೀಕರಿಸಿದ ಸ್ಪೆಶಲ್ ಸ್ಕ್ವಾಡ್ ನಡೆಸಿದ ಕಾರ್ಯಾ ಚರಣೆಯಲ್ಲಿ  ಕೃಪೇಶ್‌ರನ್ನು ಪತ್ತೆಹಚ್ಚಲಾ ಗಿದೆ. ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸರಾದ  ದಿನೇಶ್, ಮನು, ಚಂದ್ರ ಕಾಂತ್, …