ತಂದೆಯ ಇರಿತದಿಂದ ಮುದ್ದಿನ ಮಗಳು ಬಲಿ; ಗಾಯಗೊಂಡಿದ್ದ ಸಂಬಂಧಿಕನೂ ಮೃತ್ಯು, ಅವಳಿ ಕೊಲೆಯಿಂದ ಶೋಕ ಸಾಗರವಾದ ತೂಮಿನಾಡು

ಉಪ್ಪಳ: ತಂದೆಯ ಇರಿತದಿಂದ ಮುದ್ದಿನ ಮಗಳು ಸಾವಿಗೀಡಾದ ಘಟನೆಯಿಂದ ನಾಡು ಶೋಕಸಾಗರದಲ್ಲಿ ಮುಳುಗಿರುವಂತೆಯೇ   ಇರಿತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂಬಂಧಿಕನೂ ಮೃತಪಟ್ಟ ಘಟನೆ ನಡೆದಿದೆ. ಒಟ್ಟಾರೆಯಾಗಿ ಅವಳಿ ಕೊಲೆ ನಡೆದ ತೂಮಿನಾಡು ಹಾಗೂ ಪರಿಸರ ಪ್ರದೇಶಗಳಲ್ಲಿ ಶೋಕಸಾಗರ  ಸೃಷ್ಟಿಯಾಗಿದೆ.  ಘಟನೆ ಸ್ಥಳಕ್ಕೆ ಸಂಬಂಧಿಕರು, ನಾಗರಿಕರು ಸಹಿತ ಭಾರೀ ಸಂಖ್ಯೆಯಲ್ಲಿ ಜನರು ತಲುಪುತ್ತಿದ್ದು ಇಡೀ ನಾಡೇ ದುಃಖದಲ್ಲಿ ಮುಳುಗಿದೆ. ಮಂಜೇಶ್ವರ ತೂಮಿನಾಡು ಹಿಲ್‌ಟಾಪ್ ನಗರದಲ್ಲಿ ನಿನ್ನೆ ಸಂಜೆ ಈ ಭೀಕರ  ಘಟನೆ ನಡೆದಿದೆ. ಈ ಸಂಬಂಧ ಮೂಲತಃ …

ಕುಂಬ್ಡಾಜೆ ಪಂಚಾಯತ್‌ನಲ್ಲಿ ಮಿಷನ್-2026ಕ್ಕೆ ಚಾಲನೆ

ಕುಂಬ್ಡಾಜೆ?:ಪಂಚಾಯತ್ ಮತ್ತು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಆರು ಗುರಿಗಳನ್ನು ಸಾಧಿಸುವ ಮಿಷನ್ ೨೦೨೬ಕ್ಕೆ ಚಾಲನೆ ನೀಡಲಾಯಿತು. ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿ ಯಲ್ಲಿರುವ ಏಳು ಶಾಲಾ ಆವರಣಗಳನ್ನು ತಂಬಾಕುಮುಕ್ತಗೊಳಿಸಲಾಗುವುದು, ಪಾಲಿಯೇಟಿವ್ ಕೇರ್ ಪಡೆಯುವ ರೋಗಿಗಳು ಮತ್ತು ನಿರ್ಗತಿಕ ರೋಗಿಗಳಿಗೆ ಸಾಂತ್ವನ ನೀಡಲು ಜನರ ಸಹಾಯ ಸಮಿತಿ ರಚಿಸಲಾಗುವುದು, ಮಲೇರಿಯ ತಡೆಗಟ್ಟುವ ಚಟುವಟಿಕೆಗಳಿಗಾಗಿ 14 ವಾರ್ಡ್‌ಗಳಲ್ಲಿ ಆರೋಗ್ಯ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು.  ಕುಂಬ್ಡಾಜೆ ಪಂಚಾಯತ್‌ನ್ನು ಕ್ಷಯಮುಕ್ತ ಪಂಚಾಯತ್ ಮಾಡಲಾಗುವುದು,  ಮೊದಲಾದ ಕಾರ್ಯಗಳಿಗೆ ಗುರಿ ಇರಿಸಲಾಗಿದೆ. ಈ ಕುರಿತು ಕುಂಬ್ಡಾಜೆ …

ಬೀದಿನಾಯಿಗಳ ಉಪಟಳಕ್ಕೆ ಕಠಿಣ ಕ್ರಮ- ಬದಿಯಡ್ಕ ಪಂ. ಅಧ್ಯಕ್ಷ

ಬದಿಯಡ್ಕ: ಬೀದಿನಾಯಿಗಳ ಕಾಟವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಶಂಕರ ಡಿ. ತಿಳಿಸಿದ್ದಾರೆ. ವಿವಿಧ ವಾರ್ಡ್‌ಗಳ ಸದಸ್ಯರಿಂದ ಮಾಹಿತಿ ಪಡೆದುಕೊಂಡು ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳು ವುದಕ್ಕೆ ಸೂಚಿಸಿದರು. ಕುಂಟಿಕಾನ ಚೆನ್ನೆಗುಳಿಯಲ್ಲಿ ಬೀದಿನಾಯಿಗಳ ಆಕ್ರಮಣದಿಂದ, ಶಾಲಾ ಮಕ್ಕಳು, ಜನರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೆಗುಳಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಸಾಕುನಾಯಿಗಳನ್ನು ಕಟ್ಟಿಹಾಕುವಂತೆ ಜನರಲ್ಲಿ ಮನವಿ ಮಾಡಿದರು. ವಾರ್ಡ್ ಪ್ರತಿನಿಧಿ ಅನ್ನತ್ ಬೀವಿ, ಪೊಲೀಸ್ ಅಧಿಕಾರಿಗಳು, …

ಜಿಲ್ಲೆಯಲ್ಲಿ ಪೊಲೀಸ್, ಅಬಕಾರಿ ತಂಡದಿಂದ ಕಾರ್ಯಾಚರಣೆ: ಭಾರೀ ಪ್ರಮಾಣದ ಮಾದಕದ್ರವ್ಯ, ಗಾಂಜಾ ವಶ; ಮೂವರ ಸೆರೆ

ಕಾಸರಗೋಡು: ಜಿಲ್ಲೆಯಲ್ಲಿ ಪೊಲೀಸರು ಮತ್ತು ಅಬಕಾರಿ ತಂಡ ಪ್ರತ್ಯೇಕವಾಗಿ ನಡೆಸಿದ ಮೂರು ಕಾರ್ಯಾಚರಣೆಗಳಲ್ಲಾಗಿ ಭಾರೀ ಪ್ರಮಾಣದ ಮಾದಕದ್ರವ್ಯ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ನಿರ್ದೇಶ ಪ್ರಕಾರ ಜಿಲ್ಲೆಯ ಮಾದಕದ್ರವ್ಯ ಪತ್ತೆ ಸ್ಕ್ವಾಡ್ ಮತ್ತು ಕುಂಬಳೆ ಪೊಲೀಸರು ಮಂಗಲ್ಪಾಡಿ ಸೋಂಕಾಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಾಹನವೊಂದರಲ್ಲಿ ಸಾಗಿಸುತ್ತಿದ್ದ 54 ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಮಂಗಲ್ಪಾಡಿ ಅಂಬಾರ್‌ಪಳ್ಳಂ ನಿವಾಸಿ ಇದ್ದೀನ್ ಕುಂಞಿ ಯಾನೆ ಇರ್ಷಾದ್ (34) ಎಂಬಾತನನ್ನು ವಾಹನ ಸಹಿತ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. …

ಹಾಲು ಗಂಟಲಲ್ಲಿ ಸಿಲುಕಿ ನಾಲ್ಕು ತಿಂಗಳು ಪ್ರಾಯದ ಮಗು ಮೃತ್ಯು

ಕಾಸರಗೋಡು:  ನಾಲ್ಕು ತಿಂಗಳು ಪ್ರಾಯದ ಗಂಡುಮಗು  ಗಂಟಲಲ್ಲಿ ಹಾಲು ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ. ಬೇಕಲ  ಹದ್ದಾದ್‌ನಗರ ರಸೀನ ಮಂಜಿಲ್‌ನ ಕೆ. ಮುಹಮ್ಮದ್ ಹನೀಫರ ಪುತ್ರ ಲಿದಾನ್ ಫಾರ್ಮಿ ಮೃತಪಟ್ಟ  ಮಗುವಾಗಿದೆ. ನಿನ್ನೆ ರಾತ್ರಿ ಘಟನೆ ಸಂಭವಿಸಿದೆ. ಮಗುವಿಗೆ ತಾಯಿ ಎದೆಹಾಲು ನೀಡಿ ಮಲಗಿಸಿದ್ದರು. ರಾತ್ರಿ 11 ಗಂಟೆಗೆ  ಅಲುಗಾಟವಿಲ್ಲದ ಸ್ಥಿತಿಯಲ್ಲಿ ಮಗು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಬೇಕಲ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರ್ಕ್ ಶಾಪ್‌ನಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ, ಬಸ್‌ನಿಂದ ಡೀಸೆಲ್ ಕಳವು

ಕುಂಬಳೆ: ರಿಪೇರಿ ಕೆಲಸಗಳಿಗಾಗಿ ವರ್ಕ್ ಶಾಪ್‌ನಲ್ಲಿ ನಿಲ್ಲಿಸಿದ್ದ  ಭಾರತ್ ಬೆನ್ಸ್ ಲಾರಿಗಳಿಂದ ನಾಲ್ಕು ಬ್ಯಾಟರಿಗಳನ್ನು  ಹಾಗೂ  ಮಹಾಲಕ್ಷ್ಮಿ ಬಸ್‌ನಿಂದ ಡೀಸೆಲ್ ಕಳವು ನಡೆಸಲಾಗಿದೆ. ಮೊನ್ನೆ ರಾತ್ರಿ ಕುಂಬಳೆ ಪೆರ್ವಾಡ್‌ನ ಎಸ್‌ಜಿ ಆಟೋ ವರ್ಕ್ ಶಾಪ್‌ನ ಹಿಂಭಾಗದಲ್ಲಿ  ಲಾರಿಗಳನ್ನು ಹಾಗೂ ಬಸ್ ನಿಲ್ಲಿಸಲಾಗಿದೆ. ಈ ಲಾರಿಗಳಿಂದ ಬ್ಯಾಟರಿ ಹಾಗೂ ಬಸ್‌ನಿಂದ ಡೀಸೆಲ್  ಕಳವಿಗೀಡಾಗಿರುವುದು ನಿನ್ನೆ ಅರಿವಿಗೆ ಬಂದಿದೆ.  ಬ್ಯಾಟರಿಕಳವಿನಿಂದ ಸುಮಾರು 1 ಲಕ್ಷ ರೂಪಾಯಿ ನಷ್ಟ ಉಂಟಾಗಿದೆಯೆಂದು ದೂರಲಾಗಿದೆ. ವರ್ಕ್ ಶಾಪ್ ಮಾಲಕನ ದೂರಿನಂತೆ  ಕುಂಬಳೆ ಪೊಲೀಸರು ಕೇಸು …

ಚಿನ್ನದ ಬೆಲೆಯಲ್ಲಿ ಇಳಿಕೆ

ಕಾಸರಗೋಡು: ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಲೇ ಸಾಗಿದ ಚಿನ್ನದ ಬೆಲೆಯಲ್ಲಿ ಇಂದು  ಅಲ್ಪ ಇಳಿಕೆ ಉಂಟಾಗಿದೆ. ಇಂದು ಪವನ್‌ಗೆ 6,640 ರೂ. ಕಡಿಮೆಯಾಗಿ 1,11,120 ರೂ.ಗೆ  ತಲುಪಿದೆ.  ಅದೇ ರೀತಿ ಗ್ರಾಂಗೆ 830 ರೂ. ಕಡಿಮೆಯಾಗಿ  13,890 ರೂ.ಗೆ ತಲುಪಿದೆ. ಜನವರಿ ೨೯ರಂದು   ಕೇರಳದಲ್ಲಿ ಚಿನ್ನಕ್ಕೆ  ಸಾರ್ವಕಾಲಿಕ ಬೆಲೆಯೇರಿಕೆಯುಂ ಟಾಗಿತ್ತು. ಅಂದು  1,31,160 ರೂಪಾಯಿಯಂತೆ ಮಾರುಕಟ್ಟೆಯಲ್ಲಿ ಚಿನ್ನ ಮಾರಾಟ ನಡೆದಿದೆ. ಅನಂತರದ ದಿನಗಳಲ್ಲಿ ಚಿನ್ನಕ್ಕೆ ಬೆಲೆ ಇಳಿಮುಖದತ್ತ ಸಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 8ರಿಂದ

ತಿರುವನಂತಪುರ: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ, ಟಿಎಚ್‌ಎಸ್ ಎಲ್‌ಸಿ, ಎಎಚ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 5ರಿಂದ ಆರಂಭಗೊಂಡು 30ರಂದು ಕೊನೆಗೊಳಲಿದೆ. ಎಸ್‌ಎಸ್‌ಎಲ್‌ಸಿ ಐಟಿ ಪರೀಕ್ಷೆಗಳು ಇಂದು ಆರಂಭಗೊಂಡಿದ್ದು 13ರಂದು ಕೊನೆಗೊಳ್ಳಲಿದೆ. ಮೋಡೆಲ್ ಪರೀಕ್ಷೆ 16ರಿಂದ 20ರ ವರೆಗೆ ನಡೆಯಲಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಪ್ರಿಲ್ 7ರಿಂದ 25ರ ವರೆಗೆ ನಡೆಯಲಿದೆ. ಫಲಿತಾಂಶ ಮೇ 8ರಂದು ಘೋಷಿಸುವುದಾಗಿ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.

ಕೇರಳ ಭಾರತದ ಭೂಪಟದಲ್ಲಿಲ್ಲವೇ? ಬಜೆಟ್ ಬಗ್ಗೆ ಎಂ.ವಿ. ಗೋವಿಂದನ್ ಪ್ರಶ್ನೆ

ಕಾಸರಗೋಡು: ಕೇಂದ್ರ ಹಣಕಾಸು ಸಚಿವೆ ಲೋಕಸಭೆಯಲ್ಲಿ ನಿನ್ನೆ ಮಂಡಿಸಿದ ಬಜೆಟ್‌ನಲ್ಲಿ ಕೇರಳವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ ಯೆಂದೂ ಕೇರಳ ಭಾರತದ ಭೂಪಟದಲ್ಲಿಲ್ಲವೇ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಪ್ರಶ್ನಿಸಿದ್ದಾರೆ. ಇಂದು ಬೆಳಿಗ್ಗೆ ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.  ಕೇಂದ್ರ ಬಜೆಟ್ ತಯಾರಿಸುವ ಮೊದಲು ರಾಜ್ಯಸರಕಾರ ಕೇಂದ್ರದೊಡನೆ 29 ಬೇಡಿಕೆಗಳನ್ನು ಮುಂದಿರಿಸಿತ್ತು. ಅದರಲ್ಲಿ ಯಾವುದನ್ನೂ ಬಜೆಟ್‌ನಲ್ಲಿ ಅಂಗೀಕರಿಸಲಾಗಿಲ್ಲ. ಆದ್ದರಿಂದ ಬಜೆಟ್‌ನಲ್ಲಿ ಕೇರಳವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ. ಇದು ಪ್ರತಿಭಟನಾರ್ಹವೆಂದು ಅವರು ಹೇಳಿದ್ದಾರೆ.

ಶಬರಿಮಲೆ ಚಿನ್ನ ಕಳವು: ನ್ಯಾಯಾಂಗಬಂಧನದಲ್ಲಿರುವ ತಂತ್ರಿಗೆ ಎದೆನೋವು; ಆಸ್ಪತ್ರೆಗೆ ದಾಖಲು

ತಿರವನಂತಪುರ: ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ತಂತ್ರಿ ಕಂಠರರ್ ರಾಜೀವರ್‌ರನ್ನು ಎದೆನೋವಿನ ಹಿನ್ನೆಲೆಯಲ್ಲಿ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆಯ ಜೈಲು ಸೆಲ್‌ನಲ್ಲಿ ಇವರನ್ನು ದಾಖಲಿಸಲಾಗಿದ್ದು, ಆಂಜಿಯೋ ಗ್ರಾಮ್ ತಪಾಸಣೆ ನಡೆಸಲಾಗಿದೆ. ಕೇಸಿನಲ್ಲಿ 13ನೇ ಆರೋಪಿಯಾಗಿರುವ ತಂತ್ರಿಯ ಪತ್ನಿ ನೀಡಿದ ಜಾಮೀನು ಅರ್ಜಿಯನ್ನು ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯ ಪರಿಗಣಿಸಲಿದೆ. ಚಿನ್ನ ಕಳ್ಳತನದಲ್ಲಿ ತಂತ್ರಿಯವರಿಗೂ ಪಾಲಿದೆ ಎಂದು ಪ್ರತ್ಯೇಕ ತನಿಖಾ ತಂಡ ಆರೋಪಿಸುತ್ತಿದೆ.