ಕಾರು ಬಾವಿಗೆ ಬಿದ್ದು 6 ಮಕ್ಕಳ ಸಹಿತ 9 ಮಂದಿ ಮೃತ್ಯು

ನಾಸಿಕ್: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಪಕ್ಕದ ಬಾವಿಗೆ ಬಿದ್ದು ಕಾರಿನಲ್ಲಿದ್ದ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ  ಹೃದಯ ವಿದ್ರಾವಕ ಘಟನೆ ನಿನ್ನೆ ತಡರಾತ್ರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ಶಿವಾಜಿನಗರದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕಾರು ನಿನ್ನೆ ತಡರಾತ್ರಿ ಶಿವಾಜಿನಗರದ ದಿಂಡೋರಿ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಅದು ದಿಢೀರ್ ನಿಯಂತ್ರಣ  ತಪ್ಪಿ ರಸ್ತೆ ಪಕ್ಕದಲ್ಲಿರುವ ರಾಜು ರಾಜೀವ ಎಂಬವರ  ಬಾವಿಗೆ ಬಿದ್ದಿದ್ದು  ಅದು ಭಾರೀ ಆಳದ  ಆ …

ಮೂರನೇ ಮಗು ಕೂಡಾ ಹೆಣ್ಣು: ನಿರಾಶೆಗೊಂಡ ಯುವಕ ಪತ್ನಿ, ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ

ಹೈದರಾಬಾದ್: ಗರ್ಭಿಣಿಯಾದ ಪತ್ನಿಯನ್ನು ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಈಜುಕೊಳದಲ್ಲಿ ಮುಳುಗಿಸಿ ಕೊಲೆಗೈದ ಪ್ರಕರಣದಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾನ ಇನಾವೋಲು ಪುನ್ನೋಲು  ಗ್ರಾಮದಲ್ಲಿ ಇತ್ತೀಚೆಗೆ  ದಾರುಣವಾದ ಘಟನೆ ಸಂಭವಿಸಿದೆ. ಪತ್ನಿ ಫರ್ಹಾನ (26), ಮಕ್ಕಳಾದ ಉಮೇರ (9), ಆಯಿಶ(5) ಎಂಬಿವರನ್ನು ಕೊಲೆಗೈದ ಪ್ರಕರಣದಲ್ಲಿ ಹೋಲೋಬ್ರಿಕ್ಸ್ ನಿರ್ಮಾಣ ಘಟಕ ಮಾಲಕ ಅಸ್‌ಹರುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂರು ಮಂದಿಯ ಮೃತದೇಹಗಳನ್ನು ಈಜುಕೊಳದಿಂದ ಪತ್ತೆಹಚ್ಚಲಾಗಿದೆ. ಕಾಲುಜಾರಿ ಈಜುಕೊಳಕ್ಕೆ ಬಿದ್ದಿರುವುದಾಗಿ ಯುವಕ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಪುತ್ರಿಯ ಜನ್ಮ ದಿನಾಚರಣೆಯಂಗವಾಗಿ …

ಎನ್‌ಡಿಎ ಚುನಾವಣಾ ಪ್ರಚಾರ: ಅಬ್ದುಲ್ಲ ಕುಟ್ಟಿ ಕಾಸರಗೋಡಿನಲ್ಲಿ

ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲ ಕುಟ್ಟಿ ಭಾಗವಹಿಸುತ್ತಿದ್ದಾರೆ. ಇಂದು ಬೆಳಿಗ್ಗೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಳಿಕ ಬಿಸಿ ರೋಡ್, ಅಣಂಗೂರು, ರೈಲ್ವೇ ನಿಲ್ದಾಣ, ಚೇನೆಕ್ಕೋಡ್, ಮಧೂರು, ಚೌಕಿ, ಪೆರಿಯಡ್ಕ, ಪೆರ್ನಡ್ಕ, ಉಳಿಯತ್ತಡ್ಕ ಎಂಬೆಡೆಗಳಲ್ಲಿ ನಡೆಯುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಚುನಾವಣೆ: ಸಮೀಕ್ಷೆಗಳಲ್ಲಿ ಹಲವು ಆಧಾರ ರಹಿತ-ವಿ.ಡಿ. ಸತೀಶನ್

ಕಾಸರಗೋಡು: ಇದೀಗ ಬಹಿರಂಗಗೊಂಡ ಸಮೀಕ್ಷೆಗಳಲ್ಲಿ ಹಲವು ಪೈಡ್ ಸಮೀಕ್ಷೆಗಳಾಗಿವೆ ಎಂದು  ಕಾಂಗ್ರೆಸ್ ನೇತಾರ ವಿ.ಡಿ. ಸತೀಶನ್ ಅಭಿಪ್ರಾಯಪಟ್ಟಿದ್ದಾರೆ. ಕಾಸರಗೋಡಿನಲ್ಲಿ ಚುನಾವಣಾ ಪ್ರಚಾರಕ್ಕೆ ತಲುಪಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ ಈ ಬಗ್ಗೆ ತಿಳಿಸಿದ್ದಾರೆ. ಸರ್ವೆಗಳಲ್ಲಿ ಹಲವು ಸುಳ್ಳಾಗಿವೆ ಎಂದು ಆರೋಪಿಸಿದ ಅವರು ಜನರಲ್ಲಿ ತಪ್ಪು ಭಾವನೆ ಮೂಡಿಸುವ ಇಂತಹ ಯತ್ನ ಫಲಕಾರಿಯಾಗದೆಂದು ತಿಳಿಸಿದರು. ಯುಡಿಎಫ್ ನೂರಕ್ಕೂ ಹೆಚ್ಚು ಸೀಟುಗಳನ್ನು ಗಳಿಸಿ ಅಧಿಕಾರಕ್ಕೇರಲಿದೆ ಎಂದು ಅವರು ತಿಳಿಸಿದರು. ಎಸ್‌ಡಿಪಿಐ- ಆರ್‌ಎಸ್‌ಎಸ್ ಬೆಂಬಲದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೌನ ಪಾಲಿಸುತ್ತಿರುವುದಾಗಿಯೂ …

ಗೇಮಿಂಗ್ ಆಪ್‌ನಲ್ಲಿ  ಠೇವಣಿಯಿರಿಸಿದ ಹಣ ನಷ್ಟಗೊಂಡ ವ್ಯಥೆ: ಯುವಕ ಇಲಿವಿಷ ಸೇವಿಸಿ ಆತ್ಮಹತ್ಯೆಗೆತ್ನ

ಕಾಸರಗೋಡು: ಗೇಮಿಂಗ್ ಆಪ್ ಮೂಲಕ ಠೇವಣಿ ಯಿರಿಸಿದ ಹಣ ನಷ್ಟಗೊಂಡಿರುವುದರಿಂದ ಮನನೊಂದು ಯುವಕನೋರ್ವ  ಇಲಿವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿ ದ್ದಾನೆ.  ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಗುರು ಪುರಂ ನಿವಾಸಿಯಾದ ೨೫ರ ಹರೆಯದ ಯುವಕ  ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಈತನನ್ನು ಚೆಂಗಳದ ಇ.ಕೆ. ನಾಯನಾರ್ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಯುವಕನ ದೂರಿನಂತೆ ಕಾಸರಗೋಡು ನಿವಾಸಿಯಾದ ಅನ್ಸಾರ್ ಎಂಬಾತನ ವಿರುದ್ಧ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಮೆಡಿಕಲ್ ಆಫೀಸರ್ ಹಾಗೂ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ಯುವಕನಿಂದ …

ಅಡುಗೆ ಅನಿಲ ಕ್ಷಾಮ: ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳಿಗೆ ಬೇಕಾಬಿಟ್ಟಿ ಬೆಲೆ; ದರಪಟ್ಟಿ ಪ್ರದರ್ಶಿಸಲು ಆಗ್ರಹ

ಕಾಸರಗೋಡು: ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಕ್ಷಾಮವನ್ನು ನೆಪ ಮಾಡಿಕೊಂಡು ಹೋಟೆಲ್ ಗಳಲ್ಲಿ ಆಹಾರ ಪದಾರ್ಥಗಳಿಗೆ ಬೇಕಾಬಿಟ್ಟಿ ಬೆಲೆ ವಸೂಲು ಮಾಡುತ್ತಿರುವುದಾಗಿ ದೂರಲಾಗಿದೆ. ಜಿಲ್ಲೆಯ ಹೋಟೆಲ್‌ಗಳಲ್ಲಿ ಆಹಾರಕ್ಕೆ 10ರಿಂದ 20ಶೇ. ವರೆಗೆ ಹೆಚ್ಚುವರಿ ಬೆಲೆ ವಸೂಲು ಮಾಡುತ್ತಿರುವುದಾಗಿ ದೂರು ಕೇಳಿ ಬಂದಿದೆ. ಹೋಟೆಲ್  ಆಹಾರವನ್ನೇ ಆಶ್ರಯಿಸುವವರಿಗೆ ಇದು ದೊಡ್ಡ ಆಘಾತ ಸೃಷ್ಟಿಸಿದೆ. ಆಹಾರ ಪದಾರ್ಥಗಳಿಗೆ ಇಮ್ಮಡಿ ದರ ನೀಡಬೇಕಾಗಿ ಬರುತ್ತಿದ್ದು, ಆಹಾರ ಪದಾರ್ಥಗಳ ದರ ಪಟ್ಟಿಯನ್ನು ಪ್ರದರ್ಶಿಸಬೇಕೆಂದು ಗ್ರಾಹಕರು ಆಗ್ರಹಿಸಿದ್ದಾರೆ. ಆದರೆ ಹೋಟೆಲ್ ಮಾಲಕರು ಇದಕ್ಕೆ ಸಿದ್ಧರಾಗುತ್ತಿಲ್ಲ. ಕೇಂದ್ರ …

ಕಂಗುಮೆಯಲ್ಲಿ ಹನುಮಾನ್ ಜಯಂತಿ ಆಚರಣೆ

ಮಂಜೇಶ್ವರ: ಮೂಡಂಬೈಲು ಕಂಗುಮೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ವೀರಾಂಜನೇಯ ಮಂದಿರದ ಸ್ಥಳದಲ್ಲಿ ಹನುಮಾನ್ ಜಯಂತಿ ಕಾರ್ಯಕ್ರಮ ನಡೆಯಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಅವರು ದೀಪ ಪ್ರಜ್ವಲನೆಗೊಳಿಸಿ ಆಶೀರ್ವಚನ ನೀಡಿದರು. ಗುಡ್ಡಕ್ಕೇರಿ ಶ್ರೀ ಕಲ್ಪವೃಕ್ಷ ಮಹಾಮಾಯ ಭಜನಾ ಮಂಡಳಿ ವತಿಯಿಂದ ಹನುಮಾನ್ ಚಾಲೀಸ್ ಪಾರಾಯಣ, ಸ್ಥಳೀಯರಿಂದ ಭಜನೆ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳದಾನಿ ಪಿ.ಆರ್. ಶೆಟ್ಟಿ ಕುಳೂರು, ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಆಚಾರ್ಯ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮೋಹನ್ ಮಜ್ಜಾರ್, …

ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಸಭಾಭವನದಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ

ಬದಿಯಡ್ಕ: ಅರಶಿನ ಕುಂಕುಮ ಹಿಂದೂಧರ್ಮದ ಸಂಸ್ಕೃತಿಯಾಗಿದೆ. ಮನುಷ್ಯ ಜೀವನದಲ್ಲಿ ನಡೆಯುವ ಪ್ರತೀ ಹೆಜ್ಜೆ ಮತ್ತು ಬದುಕು ಒಂದು ಪರಿಪಾಠವಾಗಿದೆ. ನಾವು ಬದುಕುವ ಮಹತ್ವವೇ ಹಿಂದುತ್ವ, ಹಿಂಧೂಧರ್ಮ ಅಂತ ನಮ್ಮ ನೆನಪಲ್ಲಿರಬೇಕು ಎಂದು ವಾಗ್ಮಿ ಸಹನಾ ಕುಂದರ್ ಉಡುಪಿ ಹೇಳಿದರು. ಸನಾತನ ಸಾಂಸ್ಕೃತಿಕ ಯುವ ಕಲಾವೇದಿಕೆ ಕಾಸರಗೋಡು ಇವರ ನೇತೃತ್ವದಲ್ಲಿ ನಿನ್ನೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಸಭಾಭವನದಲ್ಲಿ ಜರಗಿದ ಅರÀಶಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯÁಗಿ ಪಾಲ್ಗೊಂಡು ಅವರು ಮಾತನಾಡಿದರು.ತೊಟ್ಟಿಲು ತೂಗುವ ಕೈ ಇಂದು ದೇಶವನ್ನು ಆಳುವ …

ಸಿದ್ಧರಾಮಯ್ಯ ನಾಳೆ ಮುಳ್ಳೇರಿಯಕ್ಕೆ

ಮುಳ್ಳೇರಿಯ: ಕಾಸರಗೋಡು ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರ ಪರವಾಗಿ ಮತ ಯಾಚಿಸಲು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಳೆ ಮುಳ್ಳೇರಿಯಕ್ಕೆ ತಲುಪುವರು. ಸಂಜೆ ೫ ಗಂಟೆಗೆ ಜರಗುವ ಸಭೆಯಲ್ಲಿ ಅವರು ಮಾತನಾಡುವರು. ಕಾಸರಗೋಡು ವಿಧಾನಸಭಾ ಮಂಡಲ ಐಕ್ಯರಂಗ ಚುನಾವಣಾ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಕೇರಳ ವಿಪಕ್ಷ ಮುಖಂಡ ವಿ.ಡಿ. ಸತೀಶನ್ ಇಂದು ಜಿಲ್ಲೆಗೆ ತಲುಪಿದರು. ಬೆಳಿಗ್ಗೆ ಬದಿಯಡ್ಕ ಪೇಟೆಯಲ್ಲಿ ನಡೆದ ಐಕ್ಯರಂಗದ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಿದರು. ಬಳಿಕ ಬೋವಿಕ್ಕಾನ …

ಅಭಿವೃದ್ಧಿಯಲ್ಲಿ ಮಾತ್ರವಲ್ಲ ಕ್ರೀಡಾರಂಗದಲ್ಲೂ ಮಂಜೇಶ್ವರ ಮಂಡಲದ ಕಡೆಗಣನೆ- ಪಿ.ಟಿ. ಉಷಾ

ಹೊಸಂಗಡಿ: ಮಂಜೇಶ್ವರ ಅಭಿವೃದ್ಧಿಯಲ್ಲಿ ಮಾತ್ರವಲ್ಲ, ಕ್ರೀಡಾರಂಗದಲ್ಲಿಯೂ ಸಂಪೂರ್ಣ ಕಡೆಗಣಿಸಲ್ಪಟ್ಟ ಮಂಡಲವಾಗಿದ್ದು, ಇಲ್ಲಿ ಪ್ರತಿಭಾವಂತ ಕ್ರೀಡಾಳುಗಳಿಗೆ ಅಭ್ಯಾಸ ನಡೆಸಲು ಮೈದಾನಗಳಿಲ್ಲ, ಅಂತಾ ರಾಷ್ಟ್ರೀಯ ಮಾನ್ಯತೆಯ ಸ್ಟೇಡಿಯಂ ಗಳಿಲ್ಲವೆಂದು ರಾಜ್ಯಸಭಾ ಸದಸ್ಯೆ, ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪದ್ಮಶ್ರೀ ಪಿ.ಟಿ. ಉಷಾ ನುಡಿದರು. ಹೊಸಂಗಡಿ ಪ್ರೇರಣಾದಲ್ಲಿ ಕ್ರೀಡಾಭಾರತಿ ಕಾಸರಗೋಡು ಹಮ್ಮಿಕೊಂಡ  ಯುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭಾಷಾ ಪ್ರಾವೀಣ್ಯತೆಯ ಮಂಜೇಶ್ವರದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಳುಗಳು ತಯಾರಾಗುತ್ತಿಲ್ಲ, ಪ್ರತಿಭಾವಂತ ಯುವ ಕ್ರೀಡಾಪಟುಗಳಿಗೆ ತರಬೇತಿ ಲಭಿಸುತ್ತಿಲ್ಲವೆಂದು ಅವರು ಆಪಾದಿಸಿದರು. ಮೀರಾ ಟೀಚರ್ ಅಧ್ಯಕ್ಷತೆ …