ತಾಯಿಯನ್ನು ಕುತ್ತಿಗೆ ಇರಿದು ಕೊಲೆಗೈದ ಪುತ್ರ: ಕೊಲೆಗೀಡಾಗಿರುವುದು ಮಹಿಳಾ ಮೋರ್ಛಾ ಜಿಲ್ಲಾ ಸಮಿತಿ ಸದಸ್ಯೆ; ಆರೋಪಿ ಪೊಲೀಸರ ಮುಂದೆ ಶರಣು
ಕಣ್ಣೂರು: ಸ್ವಂತ ತಾಯಿಯನ್ನು ಪುತ್ರ ಕುತ್ತಿಗೆ ಇರಿದು ಕೊಲೆಗೈದ ಭೀಕರ ಘಟನೆ ನಡೆದಿದೆ. ಕೃತ್ಯದ ಬಳಿಕ ಆರೋಪಿ ಪುತ್ರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕೇಳಗಂ ಕೊಳಕ್ಕಾಡ್ ತಾನಿಕುನ್ನು ವಿನ ಮಡತ್ತಿಪರಂಬಿಲ್ ತಂಗಚ್ಚನ್ ಎಂಬವರ ಪತ್ನಿ ಗೀತಮ್ಮ (50) ಕೊಲೆಗೀಡಾದ ಮಹಿಳೆಯಾಗಿದ್ದಾರೆ. ಇವರನ್ನು ಪುತ್ರ ಕ್ರಿಸ್ಟಿ (25) ಕುತ್ತಿಗೆ ಇರಿದು ಕೊಲೆಗೈದಿರುವುದಾಗಿ ದೂರಲಾಗಿದೆ. ಕೊಲೆಗೀಡಾದ ಗೀತಮ್ಮ ಮಹಿಳಾ ಮೋರ್ಛಾ ಕಣ್ಣೂರು ಜಿಲ್ಲಾ ಸಮಿತಿ ಸದಸ್ಯೆಯಾಗಿದ್ದಾರೆ. ನಿನ್ನೆ ರಾತ್ರಿ 10.30ರ ವೇಳೆ ಈ ಕೊಲೆ ಕೃತ್ಯ ನಡೆದಿದೆ. ಗೀತಮ್ಮರೊಂದಿಗೆ …