ಕ್ಷೇತ್ರಕ್ಕೆ ನುಗ್ಗಿದ ಕಳ್ಳ ಕಾಣಿಕೆ ಹುಂಡಿ ಕೊಂಡೊಯ್ಯಲಾಗದೆ ಉಪೇಕ್ಷಿಸಿ ಪರಾರಿ: ಸಿಸಿ ಕ್ಯಾಮರಾ ದೃಶ್ಯ ಕೇಂದ್ರೀಕರಿಸಿ ತನಿಖೆ
ಮುಳ್ಳೇರಿಯ: ದೇವಸ್ಥಾನಕ್ಕೆ ನುಗ್ಗಿದ ಕಳ್ಳ ಕಾಣಿಕೆ ಹುಂಡಿಯನ್ನು ಕಳವುಗೈದರೂ ಅದನ್ನು ಕೊಂಡೊಯ್ಯಲಾಗದೆ ಕ್ಷೇತ್ರ ಪರಿಸರದಲ್ಲೇ ಉಪೇಕ್ಷಿಸಿ ಕಾಲ್ಕಿತ್ತಿದ್ದಾನೆ. ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಈ ತಿಂಗಳ 25ರಂದು ಮುಂಜಾನೆ ಕಳ್ಳ ನುಗ್ಗಿದ್ದಾನೆ. ಸುತ್ತುಗೋಪುರದ ಬಾಗಿಲಿನ ಮೂಲಕ ಕ್ಷೇತ್ರಕ್ಕೆ ನುಗ್ಗಿದ ಕಳ್ಳ ಧ್ವಜಸ್ತಂಭದ ಬಳಿಯಲ್ಲಿದ್ದ ಕಾಣಿಕೆ ಹುಂಡಿಯನ್ನು ಅಪಹರಿಸಿದ್ದನು. ಅದನ್ನು ಬಳಿಕ ಕ್ಷೇತ್ರ ಸಮೀಪದ ರಸ್ತೆ ಬದಿ ಬಿಟ್ಟು ಪರಾರಿಯಾಗಿದ್ದಾನೆ. ಕಾಣಿಕೆ ಹುಂಡಿಯ ಬೀಗ ಮುರಿಯಲು ಸಾಧ್ಯವಾಗದುದರಿಂದ ಹಣ ದೋಚಲು ಕಳ್ಳನಿಗೆ ಸಾಧ್ಯವಾಗಲಿಲ್ಲ ಮಂಗಳವಾರ ಬೆಳಿಗ್ಗೆ ಕ್ಷೇತ್ರದ ಅರ್ಚಕರು …