ಅಂಗಡಿಯಿಂದ ಮೋಟಾರ್ ಕಳವುಗೈದ ಆರೋಪಿ ಸೆರೆ

ಕಾಸರಗೋಡು: ದುರಸ್ತಿ ಕೆಲಸಕ್ಕಾಗಿ ಅಂಗಡಿಯಲ್ಲಿ ಇರಿಸಿದ್ದ ಮೋಟಾರ್ ಪಂಪನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಪೊಲೀಸರು ಕಾಸರಗೋಡು ನಿವಾಸಿಯನ್ನು ಬಂಧಿಸಿದ್ದಾರೆ. ಜಿಲ್ಲೆಯ ಚಿಟ್ಟಾರಿಕಲ್ ಕಡುಮೇನಿ ನಿವಾಸಿ ಥೋಮಸ್ (52) ಬಂಧಿತ ಆರೋಪಿ. ಕಣ್ಣೂರು ತೆಕ್ಕಿಬಜಾರ್‌ನಲ್ಲಿ ಅಂಗಡಿಯಲ್ಲಿ ದುರಸ್ತಿ ಕೆಲಸಕ್ಕಾಗಿ ಸಲಾಂ ಎಂಬವರು ತಂದಿರಿಸಿದ್ದ 18,೦೦೦ ರೂ. ಮೌಲ್ಯದ ಮೋಟಾರ್ ಪಂಪನ್ನು ಸೆ. 6ರಂದು ಕಳವುಗೈದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದರು.  ಇದಕ್ಕೆ ಸಂಬಂಧಿಸಿ ಪೊಲೀಸರು ನಡೆಸಿದ ತನಿಖೆಯಲ್ಲಿ ಆ ಪರಿಸರದ ಸಿಸಿ ಟಿವಿಯಲ್ಲಿ ಆರೋ ಪಿಯ …

ಅವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ: ವಿವಿಧೆಡೆಗಳಿಂದ ದಂಡ ವಸೂಲಿ

ಕಾಸರಗೋಡು: ತ್ಯಾಜ್ಯ ಸಂಸ್ಕರಣೆ ವಲಯದಲ್ಲಿ ಕಾನೂನುಗಳ ಉಲ್ಲಂಘನೆ ಪರಿಶೀಲಿಸುವ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ಮಂಜೇಶ್ವರ ಪಂಚಾಯತ್‌ನ ಹೊಸಂಗಡಿಯಲ್ಲಿರುವ ಯಾಫ್ಕೋ ಇಂಡಸ್ಟ್ರೀಸ್ ಎಂಬ ಫ್ಲೈವುಡ್ ಕಂಪೆನಿಯ ಅನ್ಯರಾಜ್ಯ ಕಾರ್ಮಿಕರು ಮಲಿನಜಲವನ್ನು ಬಹಿರಂಗವಾಗಿ ಹರಿಯಬಿಟ್ಟ ಹಿನ್ನೆಲೆಯಲ್ಲಿ ಮಾಲಕನಿಂದ 15,000 ರೂ. ದಂಡ ವಸೂಲಿ ಮಾಡಿ ಸೋಕ್‌ಪಿಟ್ ಸ್ಥಾಪಿಸಲು ನಿರ್ದೇಶ ನೀಡಲಾಯಿತು. ಮೀಂಜದ  ಇಂಗ್ಲಿಷ್ ಮಾಧ್ಯಮ ಶಾಲೆ, ವರ್ಕಾಡಿಯ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪ್ರತ್ಯೇಕವಾಗಿ ಸಿದ್ಧಪಡಿಸಿದ ಹೊಂಡಗಳಲ್ಲಿ ಪ್ಲಾಸ್ಟಿಕ್ ಸಹಿದ ತ್ಯಾಜ್ಯಗಳನ್ನು ಉರಿಸಿರುವುದು ಪತ್ತೆಹಚ್ಚಿದ್ದು, ಈ ಹಿನ್ನೆಲೆಯಲ್ಲಿ 5,000 …

ಕುಂಬಳೆ ಪ್ರೆಸ್ ಫಾರಂ ಸೋಶ್ಯಲ್  ಮೀಡಿಯಾ ಪ್ಲಾಟ್ ಫಾರಂಗಳ ಉದ್ಘಾಟನೆ

ಕುಂಬಳೆ: ಕುಂಬಳೆ ಪ್ರೆಸ್ ಫಾರಂ ಡಿಜಿಟಲೈಸೇಶನ್‌ನಂಗವಾಗಿ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಪೇಜ್‌ಗಳ ಉದ್ಘಾಟ ನೆಯನ್ನು  ಶಾಸಕ ಎಕೆಎಂ ಅಶ್ರಫ್, ಕಾಸರಗೋಡು ಬ್ಲೋಕ್ ಪಂಚಾ ಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಎಂಬಿವರು ಸೇರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ  ಶಾಸಕ ಎಕೆಎಂ ಅಶ್ರಫ್‌ರಿಗೆ ಲೇಖಕ ಕೆ.ಎಂ. ಅಬ್ಬಾಸ್ ಹಾಗೂ ಕಾಸರ ಗೋಡು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಅವರಿಗೆ ಶಾಸಕ ಎಕೆಎಂ ಅಶ್ರಫ್  ಪಾರಿತೋಷಕ ನೀಡಿ ಗೌರ ವಿಸಿದರು.  ಕಾರ್ಯಕ್ರಮದ ಪೂರ್ವ ಭಾವಿಯಾಗಿ  ಶಾಸಕ …

ವಿದ್ಯುತ್ ನಿಯಂತ್ರಣ :ಸಿಪಿಎಂನಿಂದ ದೊಂದಿ ಮೆರವಣಿಗೆ

ಬೆಳ್ಳೂರು: ವಿದ್ಯುತ್ ನಿಯಂತ್ರಣವನ್ನು ಪ್ರತಿಭಟಿಸಿ ಸಿಪಿಎಂ ಬೆಳ್ಳೂರು ಲೋಕಲ್ ಕಮಿಟಿ ನೇತೃತ್ವದಲ್ಲಿ ನಿನ್ನೆ ರಾತ್ರಿ ದೊಂದಿ ಮೆರವಣಿಗೆ ನಡೆಸಲಾಯಿತು. ನಾಟೆಕಲ್ಲು ಪೇಟೆಯಲ್ಲಿ ನಡೆದ ಪ್ರತಿಭಟನೆಗೆ ಸಿಪಿಎಂ ಬೆಳ್ಳೂರು ಸೆಕ್ರೆಟರಿ ಸೂಫಿ ಕೆ.ಎಚ್. ನೇತೃತ್ವ ನೀಡಿದರು. ಕಾರಡ್ಕ ಬ್ಲಾಕ್ ಪಂ. ಉಪಾಧ್ಯಕ್ಷೆ ಉಷಾ, ನೇತಾರರಾದ ಶಶಿಧರ ಗೋಳಿಕಟ್ಟೆ, ಸುನಿತಾ, ಎ.ಕೆ. ಕುಶಲ ಮೊದಲಾದವರು ಭಾಗವಹಿಸಿದರು.

ಬದಿಯಡ್ಕ ಶ್ರೀ ಗಣೇಶೋತ್ಸವ ವಿಗ್ರಹ ಶೋಭಾಯಾತ್ರೆಯೊಂದಿಗೆ ಸಮಾಪ್ತಿ

ಬದಿಯಡ್ಕ: 55ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ 7ನೇ ವರ್ಷದ ಪ್ರತಿಷ್ಠಾದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರಗಿದ್ದು, ನಿನ್ನೆ ಶ್ರೀಗಣೇಶ ವಿಗ್ರಹ ಜಲಸ್ತಂಭನ ದೊಂದಿಗೆ ಸಮಾಪ್ತಿಗೊಂಡಿತು. ಸಹಸ್ರಾರು ಮಂದಿ ಪಾಲ್ಗೊಂಡರು. ವೇದಮೂರ್ತಿ ಶಿವಶಂಕರ ಭಟ್ ಪಳ್ಳತ್ತಡ್ಕ ಇವರ ಪೌರೋಹಿತ್ಯದಲ್ಲಿ ಶ್ರೀಗಣೇಶ ವಿಗ್ರಹ ಪ್ರತಿಷ್ಠೆ, ಪೂಜಾದಿ ಕಾರ್ಯಗಳು ಜರಗಿತು. ಶಿವಾಜಿ ಗಲ್ಲಿ, ಯುವಶಕ್ತಿ, ಛತ್ರಪತಿ, ಓಂಕಾರ್, ಆರ್‌ಸಿಬಿ, ದಿsÃರಾಸ್, ಅಗ್ನಿ, ಶಕ್ತಿ ಕುಣಿತ ಭಜನೆಯ ತಂಡಗಳಿAದ ವಿವಿಧ ಸಾಂಸ್ಕೃತಿಕ ಕಲಾಕೃತಿಗಳು ಜರಗಿತು. ಮುತ್ತುಕೊಡೆ, ಸಿಂಗಾರಿಮೇಳ, ಚೆಂಡೆ …

ಕ.ಸಾ.ಪದಿಂದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ: ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ

ಕಾಸರಗೋಡು:  ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪಕರಲ್ಲೊಬ್ಬರಾದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಹಾಗೂ ಕನ್ನಡ ಪತ್ರಕರ್ತ ರೊಂದಿಗೆ ಸೌಹಾರ್ದ ಸಂವಾದ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಅಡ್ಕತ್ತಬೈಲ್ ನಲ್ಲಿರುವ ಹೋಟೆಲ್ ಉಡುಪಿ ಗಾರ್ಡನ್‌ನ ಸಭಾಂಗಣದಲ್ಲಿ ನಡೆಯಿ ತು.  ಹಿರಿಯ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸರ್ ಎಂ. ವಿಶ್ವೇಶ್ವರಯ್ಯ ನವರ ಬದುಕು, ವ್ಯಕ್ತಿತ್ವ, ಸಾಧನೆಗಳ ಕುರಿತು ಮಾತನಾಡಿದರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ| …

ಕೆಎಸ್‌ಆರ್‌ಟಿಸಿ ಬಸ್‌ಗಳ ಸುರಕ್ಷತೆ ಖಚಿತಪಡಿಸಲು ತುರ್ತು ಕ್ರಮ ಅಗತ್ಯ- ಎಂ.ಎಲ್. ಅಶ್ವಿನಿ

ಕಾಸರಗೋಡು: ನೀಲೇಶ್ವರ ಬಳಿ ಪಡನಕ್ಕಾಡ್ ಕೆಎಸ್‌ಆರ್‌ಟಿಸಿ ಪ್ರಿಯ ದರ್ಶಿನಿ ಬಸ್‌ನ ಪ್ಲಾಟ್‌ಫಾರ್ಮ್ ಕುಸಿದು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಸರ ಗೋಡಿನಲ್ಲಿ ಸರ್ವೀಸ್ ನಡೆಸುವ ಎಲ್ಲಾ ಸರಕಾರಿ ಬಸ್‌ಗಳ ಫಿಟ್‌ನೆಸ್ ಹಾಗೂ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ನುಡಿದಿದ್ದಾರೆ. ಪ್ರಯಾಣಿಕರು ಮತ್ತು ಉದ್ಯೋಗಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಬಸ್‌ಗಳ ತುರ್ತು ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಕೇರಳದ ಅನೇಕ ಹಳೆಯ ಸರಕಾರಿ ಬಸ್‌ಗಳು ಕಾಸರಗೋಡು ಜಿಲ್ಲೆಯಲ್ಲಿ ಸೇವೆ …

ಪ್ರತಾಪನಗರ ಶ್ರೀ ಗಣೇಶೋತ್ಸವ ಸಮಾಪ್ತಿ

ಮಂಗಲ್ಪಾಡಿ: ಪ್ರತಾಪನಗರದಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದ 43ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ನಿನ್ನೆ ಸಮಾಪ್ತಿಗೊಂಡಿತು. ಗಣಪತಿ ವಿಗ್ರಹದ ಶೋಭಯಾತ್ರೆಯಲ್ಲಿ ಭಜನೆ, ಕುಣಿತ ಭಜನೆ, ಚೆಂಡೆ, ವಾದ್ಯಘೋಷ, ಮುತ್ತುಕೊಡೆ ಹಾಗೂ ಮಕ್ಕಳು, ಮಾತೆಯರ ಸಹಿತ ಹಿರಿಯರು ಪಾಲ್ಗೊಂಡಿದ್ದರು. ಮೆರವಣಿಗೆ ಉತ್ಸವಾಂಗಣದಿAದ ಹೊರಟು ಸೋಂಕಾಲು, ಕೈಕಂಬ, ಐಲ ದ್ವಾರದ ಮೂಲಕ ಸಾಗಿ ಪಾರಕಟ್ಟೆ ರಸ್ತೆಯಿಂದ ಐಲ ಶಿವಾಜಿನಗರದ ಸಿಂಧೂ ಮಹಾಸಾಗರದಲ್ಲಿ ಜಲಸ್ತಂಭನ ನೆರವೇರಿತು. ಶ್ರೀ ಗಣೇಶೋತ್ಸವ ಮತ್ತು ಶ್ರೀ ಶಾರದೋತ್ಸವ ವಿಸರ್ಜನಾ ಸ್ವಾಗತ …

ನೀಲಮ್ಮ ನಿಧನ

ನಾರಂಪಾಡಿ: ಇಲ್ಲಿನ ನಿವಾಸಿ ದಿ| ಈಶ್ವರ ರೈಯವರ ಪತ್ನಿ ನೀಲಮ್ಮ (88) ನಿಧನ ಹೊಂದಿ ದರು. ಅಲ್ಪ ಕಾಲದಿಂದ ಅನಾರೋಗ್ಯ ತಗಲಿ ಚಿಕಿತ್ಸೆಯಲ್ಲಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಮೃತರು ಮಕ್ಕಳಾದ ರತಿದೇವಿ, ಪದ್ಮಾವತಿ, ಸರೋಜಿನಿ, ಅಶೋಕ್ ರೈ ನಾರಂಪಾಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಸೌಖ್ಯ: ಮಹಿಳೆ ನಿಧನ

ಪೆರ್ಲ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ನಿಧನಹೊಂ ದಿದರು. ಖಂಡಿಗೆ ಚಾಕೊಟೆ ನಿವಾಸಿ ದಿವಂಗತರಾದ ಕೊರಗ-ಪಾರ್ವತಿ ದಂಪತಿ ಪುತ್ರಿ ನೀಲ (53) ಸ್ವ-ಗೃಹದಲ್ಲಿ ನಿಧನಹೊಂದಿದ್ದಾರೆ. ಅವಿವಾಹಿತೆಯಾಗಿದ್ದರು.  ಮೃತರು ಸಹೋದರರಾದ ಕೃಷ್ಣ ನಾಯ್ಕ, ರಾಮ ನಾಯ್ಕ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.