ಮಾಯಿಪ್ಪಾಡಿಗುತ್ತು ತರವಾಡು ಮನೆಯಲ್ಲಿ ದೈವಕೋಲ

ಮಾಯಿಪ್ಪಾಡಿ: ಮಾಯಿಪ್ಪಾಡಿ ಗುತ್ತು ತರವಾಡು ಮನೆಯಲ್ಲಿ ಶ್ರೀ ಧೂಮಾವತಿ ದೈವದ ಧರ್ಮನೇಮ ಮತ್ತು ಶ್ರೀ ಕೊರತಿ ದೈವದ ಕೋಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಗಣಹೋಮ, ತಂಬಿಲ, ಪಾನಕಪೂಜೆ, ಅನ್ನ ಸಂತರ್ಪಣೆ ಮಾಯಿಪ್ಪಾಡಿ ಶ್ರೀ ದುರ್ಗಾ ಮಹಿಳಾ ಭಜೇಶ್ವರಿ ಭಜನಾ ಸಂಘ ಮತ್ತು ಮಾಯಿಪಾಡಿಗುತ್ತು ಕುಟುಂ ಬಸ್ಥರಿಂದ ಭಜನೆ ನಡೆಯಿತು. ಪುತ್ತೂರುಕೊಟ್ಯದಿಂದ ಮಾಯಿಪ್ಪಾಡಿಗುತ್ತು ತರವಾಡಿಗೆ ಭಂಡಾರ ಆಗಮಿಸಿತು. ಎರಡು ಹರಕೆಯ ಕೊರತಿಕೋಲ ಸೇರಿದಂತೆ ಮೂರು ದಿನ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ರಾಪರ್‌ ವೇಡನ್‌ನಿಂದ ವಶಪಡಿಸಿದ್ದು ಯಥಾರ್ಥ ಹುಲಿ ಹಲ್ಲು: ಅರಣ್ಯ ಇಲಾಖೆಯಿಂದ ದೋಷಾರೋಪ ಪಟ್ಟಿ ಸಲ್ಲಿಸಲು ನಿರ್ಧಾರ

ಕೊಚ್ಚಿ: ಹುಲಿಯ ಹಲ್ಲು ವಶಪಡಿಸಿದ ಪ್ರಕರಣದಲ್ಲಿ ರಾಪರ್‌ವೇಡನ್‌ಗೆ ತಿರುಗೇಟು ಲಭಿಸಿದೆ. ವಶಪಡಿಸಿರುವುದು ನಿಜವಾದ ಹುಲಿಹಲ್ಲು ಆಗಿದೆ ಎಂದು ಖಚಿತಪಡಿಸಲಾಗಿದೆ. ಕೊಲ್ಕತ್ತದ ಜುವೋಲಜಿ ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಹುಲಿ ಹಲ್ಲು ಎಂದು ಖಚಿತಪಡಿಸಲಾಗಿದೆ. ಪ್ರಕರಣದಲ್ಲಿ ಆರಣ್ಯ ಇಲಾಖೆ ಕೂಡಲೇ ದೋಷಾರೋಪ ಪಟ್ಟಿ ಸಲ್ಲಿಸಲಿದೆ. ಅನಧಿಕೃತವಾಗಿ ಹುಲಿ ಹಲ್ಲು  ಕೈವಶವಿರಿಸಿಕೊಂಡಿರುವುದಕ್ಕೆ, ಮೃಗ ಬೇಟೆ ನಡೆಸಿರುವುದಾಗಿ ಆರೋಪಿಸಿ ವೇಡನ್ ವಿರುದ್ಧ ಈ ಮೊದಲೇ ಅರಣ್ಯ ಇಲಾಖೆ ಕೇಸು ದಾಖಲಿಸಿತ್ತು. ಆದರೆ ನಿಜವಾದ ಹುಲಿ ಹಲ್ಲು ಅಲ್ಲವೆಂದು ತಮಿಳುನಾಡಿನಿಂದ ಅಭಿಮಾನಿಯೋರ್ವ ಕೊಡುಗೆಯಾಗಿ ನೀಡಿರುವುದಾಗಿಯೂ …

ಕಾಂಗ್ರೆಸ್ ಮುಖಂಡ ಗಂಗಾಧರನ್ ನಾಯರ್ ಸಂಸ್ಮರಣೆ

ಪೈವಳಿಕೆ : ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾಧ್ಯಕ್ಷ ಪಿ. ಗಂಗಾಧರನ್ ನಾಯರ್‌ರ ಸಂಸ್ಮರಣಾ ಕಾರ್ಯಕ್ರಮ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಜರುಗಿತು. ಗಂಗಾಧರನ್ ನಾಯರ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಹಿರಿಯ ಕಾರ್ಯಕರ್ತರಾದ ಅಬ್ದುಲ್ಲ ಶಾ, ಅಸಿಸ್ ಕಟ್ಟೆ, ಎಡ್ವರ್ಡ್ ಡಿ ಸೋಜ ಭಾಗವಹಿಸಿದರು. ಅಬ್ದುಲ್ ರಸಾಕ್ ಸ್ವಾಗತಿಸಿ, ಗಂಗಾಧರ ನಾಯಕ್ ವಂದಿಸಿದರು.

ಮಂಜೇಶ್ವರ ತಾಲೂಕು ಲೈಬ್ರರಿ  ಕೌನ್ಸಿಲ್ ತಾಲೂಕು ಸಂಗಮ ನಾಳೆ

ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ತಾಲೂಕು ಸಂಗಮ ನಾಳೆ ಬೆಳಿಗ್ಗೆ ೧೦ಕ್ಕೆ ಕುಂಬಳೆ ಜಿಎಸ್‌ಬಿಎಸ್ ಯುಪಿ ಶಾಲೆಯಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಾ. ಪಿ. ಪ್ರಭಾಕರನ್ ಉದ್ಘಾಟಿಸುವರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಕೆ. ಅಧ್ಯಕ್ಷತೆ ವಹಿಸುವರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ರಾಮಚಂದ್ರ ಎಂ. ಶ್ರದ್ಧಾಂಜಲಿ ಠರಾವು ಮಂಡಿಸುವರು. ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತ ಸಿ.ಎಚ್. ಮುಖ್ಯ ಅತಿಥಿಯಾಗಿರುವರು. ತಾಲೂಕು ಲೈಬ್ರರಿ ಕೌನ್ಸಿಲ್‌ನ ಕಾರ್ಯಕಾರಿ ಸಮಿತಿಗೆ …

ಮಹಿಳೆಯರಿಗೆ, ಮಕ್ಕಳಿಗೆ ಮಾತ್ರವಾಗಿ ಪ್ರತ್ಯೇಕ ಘಟಕ, ಅತ್ಯಾಧುನಿಕ ಪಿಡಿಯಾಟ್ರಿಕ್ ಐಸಿಯು ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಉದ್ಘಾಟನೆ

ಕಣ್ಣೂರು: ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಟಿಟಲ್‌ನಲ್ಲಿ ಮಹಿಳೆಯರಿಗೂ, ಮಕ್ಕಳಿಗೂ ಹೆಚ್ಚು ಸೌಕರ್ಯಪ್ರದವಾದ ಹಾಗೂ ಸಮಗ್ರ ಪರಿಚರಣೆ ಖಚಿತಪಡಿಸುವ ಹೊಸ ಸೆಂಟರ್ ಫಾರ್ ವುಮೆನ್ ಆಂಡ್ ಚೈಲ್ಡ್ ಅತ್ಯಾಧುನಿಕ ಪಿಡಿಯಾಟ್ರಿಕ್ ಐಸಿಯು ಉದ್ಘಾಟಿಸಲಾಯಿತು. ತಾಯಿಗೆ ಹಾಗೂ ಮಗುವಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ಚಿಕಿತ್ಸೆ ಸೌಕರ್ಯ ಲಭ್ಯಗೊಳಿಸುವ ಈ ಹೊಸ ಕ್ಲಸ್ಟರ್ ವ್ಯವಸ್ಥೆಯ ಆಸ್ಪತ್ರೆಯ ಸೇವಾ ರಂಗದಲ್ಲಿ ನೂತನ ಅಧ್ಯಯವೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಈ ಕೇಂದ್ರದಲ್ಲಿ ಒಬ್‌ಸ್ಟೆಸ್ಟ್ರಿಕ್ಸ್ ಆಂಡ್ ಗೈನೋಕಾಲಜಿ, ನೀಯೋ ನೆಟಾಲೋಜಿ ಪಿಡಿಯಾಟ್ರಿಕ್ಸ್, ಪಿಡಿಯಾಡ್ರಿಕ್ ಕ್ರಿಟಿಕಲ್ ಕೇರ್ ಎಂಬೀ …

ಮಟ್ಟಲಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಿರುಕು : ತನಿಖಾ ತಂಡ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ

ಹೊಸದುರ್ಗ: ಚೆರುವತ್ತೂರು ಮಟ್ಟಲಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣ ರಸ್ತೆಯಲ್ಲಿ ಬಿರುಕು ಪತ್ತೆಯಾದ ಘಟನೆಯಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನೇಮಕ ಮಾಡಿದ ಆರ್‌ಡಿಒ ನೇತೃತ್ವದಲ್ಲಿರುವ ತನಿಖಾ ತಂಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಮಳೆಗಾಲದಲ್ಲಿ ದುರಂತ ಹೊರತುಪಡಿಸಲು ಕಠಿಣ ಕ್ರಮಗಳಿಗೆ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶ ನೀಡಿದ್ದಾರೆ. ಮುಂದಿನ ಕ್ರಮಗಳಿಗಾಗಿ ವರದಿ ಯನ್ನು ಸರಕಾರಕ್ಕೆ ಸಲ್ಲಿಸಲಾಗು ವುದು. ಹೆದ್ದಾರಿ ಪ್ರಾಧಿಕಾರದೊಂದಿಗೆ ಸೇರಿಕೊಂಡು ಮುಂದಿನ ನಿರ್ಮಾಣ ಚಟುವಟಿಕೆಗಳನ್ನು ನಿರೀಕ್ಷಿಸುವುದಕ್ಕೆ ಕಾಞಂಗಾಡ್ ಆರ್‌ಡಿಒರಿಗೆ ಜಿಲ್ಲಾಧಿಕಾರಿ ಹೊಣೆ ನೀಡಿದರು. ನಿರ್ಮಾಣದಲ್ಲಿನ ಲೋಪದೋಷಗಳನ್ನು …

ಹೊಸಂಗಡಿ ರೈಲ್ವೇ ಗೇಟ್‌ನಲ್ಲಿ ವಾಹನಗಳ ದಟ್ಟಣೆ: ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ

ಮಂಜೇಶ್ವರ: ಹೊಸಂಗಡಿ ರೈಲ್ವೇಗೇಟ್ ಮುಚ್ಚಿದ ಬಳಿಕ ತೆರೆಯಲು ವಿಳಂಬಗೊಳ್ಳುತ್ತಿ ರುವುದು ವಾಹನ ಸಂಚಾರಕ್ಕೆ ಅಡಚಣೆಗೆ ಕಾರಣವಾಗುತ್ತಿದೆ. ವಾಹನಗಳ ಸರದಿ ಸಾಲು ಹೆದ್ದಾರಿಗೆ ತಲುಪುತ್ತಿರುವುದ ರಿಂದ ಇತರ ವಾಹನ ಸಂಚಾ ರಕ್ಕೆ ಅಡಚಣೆ ಉಂಟಾಗುತ್ತಿದ್ದು, ಮೇಲ್ಸೇತುವೆ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸಿ ದ್ದಾರೆ. ಗೇಟ್ ಮುಚ್ಚಿದ ಬಳಿಕ ತೆರೆಯಲು ಸುಮಾರು 20ನಿಮಿಷಗಳ ಕಾಲ ಬೆೆÃಕಾಗುತ್ತಿದೆ. ಇದರಿಂದ ಹೊಸಂಗಡಿ ಪೇಟೆಯಿಂದ ಬಂಗ್ರಮAಜೇಶ್ವರ ಭಾಗಗಳಿಗೆ ತೆರಳಬೇಕಾದ ವಾಹನಗಳ ಸಾಲು ಹೆದ್ದಾರಿ ತನಕ ತಲುಪುತ್ತಿದೆ.ಇದು ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಹೆದ್ದಾರಿ ಅಭಿವೃದ್ದಿಯಿಂದ ರೈಲ್ವೇ …

ಸರಕಾರ ರಚನೆಗೆ ವಿ.ಡಿ. ಸತೀಶನ್‌ರಿಗೆ ರಾಜ್ಯಪಾಲ ಆಹ್ವಾನ:  ಪ್ರಮಾಣವಚನ ಸೋಮವಾರ

ತಿರುವನಂತಪುರ: ಚುನಾವಣಾ  ಫಲಿತಾಂಶ ಹೊರಬಂದ ದಿನದಿಂದ ಆರಂಭಗೊಂಡು ಸತತ ಹತ್ತು ದಿನಗಳ ತನಕ ದೀರ್ಘ ಚರ್ಚೆಯ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸಲ್ಪಟ್ಟ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್   ಲೋಕಭವನ್‌ನಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ರನ್ನು ಸಂದರ್ಶಿಸಿ ಸರಕಾರ ರಚನೆಗಾಗಿರುವ ವಿದ್ಯುಕ್ತ ಹಕ್ಕು ಮಂಡನೆ ಸಲ್ಲಿಸಿದ್ದಾರೆ.  ಅದನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಸರಕಾರ ರಚನೆಗೆ ವಿ.ಡಿ. ಸತೀಶನ್‌ರಿಗೆ ಆಹ್ವಾನ ನೀಡಿದ್ದಾರೆ. ಇದರಂತೆ ಸೋಮವಾರ  ಬೆಳಿಗ್ಗೆ 10 ಗಂಟೆಗೆ ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಅದ್ದೂರಿಯ ಸಮಾರಂಭದಲ್ಲಿ ವಿ.ಡಿ. ಸತೀಶನ್ …

ಒಂದೇ ಪ್ರದೇಶದಲ್ಲಿ ರಾತ್ರಿ ಮೂರು ಲಾರಿಗಳ ಬ್ಯಾಟರಿ ಕಳವು: ಸಮಗ್ರ ತನಿಖೆ ಆರಂಭ

ಕುಂಬಳೆ: ರಸ್ತೆ ಬಳಿ ನಿಲ್ಲಿಸಿದ್ದ ಮೂರು ಲಾರಿಗಳ ಬ್ಯಾಟರಿಗಳನ್ನು ಒಂದೇ ದಿನದಂದು ರಾತ್ರಿ ಕಳ್ಳರು ಕದ್ದು ಸಾಗಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ.  ಈ ಬಗ್ಗೆ ಕರ್ನಾಟಕ ರಾಜ್ಯ ನೋಂದಾಯಿತ ಲಾರಿಯೊಂದರ ಮಾಲಕ ಕುಂಬಳೆ ಕೊಯಿಪ್ಪಾಡಿ ನಾರಾಯಣಮಂ ಗಲದ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಬಳಿಯ ಐಶ್ವರ್ಯ ನಿಲಯದ ವಿದ್ಯಾಧರ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈತಿಂಗಳ 11ರಂದು ರಾತ್ರಿ ನಾರಾಯಣಮಂಗಲ ಶ್ರೀ ಚೀರುಂಬಾ ದೇವಸ್ಥಾನ ಪರಿಸರದಲ್ಲಿ ನಾನು ಲಾರಿ ನಿಲ್ಲಿಸಿದ್ದೆನೆಂದೂ …

ವ್ಯಾಪಾರಿ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ

ಮುಳ್ಳೇರಿಯ : ಪುಂಡೂರು ಬಳಿಯ ಮಾಳಂಗೈಯಲ್ಲಿ ಅಂಗಡಿ ನಡೆಸುತ್ತಿದ್ದ ಯುವಕ ನೇಣು ಬಿಗಿದು ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಮಾಳಂಗೈ ನಿವಾಸಿ ಮಣಿಕಂಠನ್ (46) ಆತ್ಮಹತ್ಯೆಗೈದ ಯುವಕ. ಅಂಗಡಿಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಇವರು ಈ ಹಿಂದೆ ಕಾರಡ್ಕದಲ್ಲಿ ಶೇಂದಿ ಅಂಗಡಿಯಲ್ಲಿ ಕಾರ್ಮಿಕರಾಗಿದ್ದರು. ದಿವಂಗತರಾದ ಎ.ಕೆ. ಗೋಪಾಲನ್- ಕಲ್ಯಾಣಿ ದಂಪತಿ ಪುತ್ರನಾದ ಮೃತರು ಪತ್ನಿ ಶೈಲಜಾ, ಮಕ್ಕಳಾದ ಕಾರ್ತಿಕ್, ಆದಿ, ಸಹೋದರರಾದ ಎ.ಕೆ. ಕುಮಾರನ್, ಎ.ಕೆ.ಶ್ರೀಧರನ್, ಎ.ಕೆ. ಉಪೇಂದ್ರನ್, ಎ.ಕೆ. ಶಶಿಧರನ್,  …