ಹೊಳೆಯ ಮರಳು ಅಕ್ರಮ ಸಾಗಾಟ: ಸರಕಾರಿ ಮಾಲು ಕದ್ದ ಆರೋಪದಂತೆ 5 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಶಿರಿಯ ಹೊಳೆಯಿಂದ ಸರಿಯಾದ ದಾಖಲು ಪತ್ರಗಳಿಲ್ಲದೆ ಸರಕಾರಿ ಮಾಲು ಆಗಿರುವ ಹೊಳೆಯ ಹೊಯ್ಗೆಯನ್ನು ಟಿಪ್ಪರ್ ಲಾರಿಯಲ್ಲಿ ಕದ್ದು ಸಾಗಿಸಿದ ಆರೋಪದಂತೆ, ಲಾರಿ ಚಾಲಕ ಸೇರಿದಂತೆ ಐದು ಮಂದಿಯ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಯ್ಗೆ ಹೇರಿದ ಲಾರಿಯನ್ನು  ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಆದರೆ ಆರೋಪಿಗಳು ತಪ್ಪಿಸಿಕೊಂಡಿದ್ದರೆಂದೂ, ಸರಕಾರಿ ಮಾಲು ಆಗಿರುವ ಹೊಳೆ ಹೊಯ್ಗೆ ಕದ್ದು ಸಾಗಿಸಿದ ಆರೋಪದಂತೆ ಇವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ …

ಮಲಯಾಳಂ ಭಾಷಾ ಮಸೂದೆ ತಿದ್ದುಪಡಿಗೆ ಆಗ್ರಹಿಸಿ ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು ಸಭೆ

ಕಾಸರಗೋಡು: ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಾ ಅಲ್ಪ ಸಂಖ್ಯಾತರನ್ನು ಹೊರತು ಪಡಿಸಲು ಆಗ್ರಹಿಸಿ, ಮುಂದಿನ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಚುನಾಯಿತರಾದ ನೂತನ ಆಡಳಿತ ಸಮಿತಿ ಒಮ್ಮತದಿಂದ ಈ ಮಸೂದೆಯನ್ನು ಮರು ಪರಿಶೀಲಿಸಿ ಸೂಕ್ತ ತಿದ್ದುಪಡಿ ಯೊಂದಿಗೆ ಪುನ: ಅನುಷ್ಠಾನಗೊಳಿಸಬೇಕೆಂದು ಕಾಸರಗೋಡು ಪ್ರದೇಶದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒಗ್ಗೂಡಿ ‘ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು’ ಮೂಲಕ ಮನವಿ ಸಿದ್ಧಪಡಿಸಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಯಿತು.ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ …

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪಿಕಪ್‌ನ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಯುವಕ ಮೃತ್ಯು

ಕುಂಬಳೆ: ಕೆಟ್ಟುಹೋದ ಹಿನ್ನೆ ಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನದ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ತಲಪ್ಪಾಡಿ ಕೆ.ಸಿ ರೋಡ್ ನಿವಾಸಿ  ಮುಹಿಯುದ್ದೀನ್ ಸಿನಾನ್ (28) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ೬.೧೫ರ ವೇಳೆ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಮುಹಿಯುದ್ದೀನ್ ಸಿನಾನ್‌ರನ್ನು ಕೂಡಲೇ ಮಂಗಳೂ ರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮುಹಿಯುದ್ದೀನ್ ಸಿನಾನ್ ಉಪ್ಪಳ ಭಾಗದಿಂದ ಕುಂಬಳೆ ಭಾಗಕ್ಕೆ   ಬೈಕ್‌ನಲ್ಲಿ …

ಕಲ್ಲಿಕೋಟೆ ಬಳಿ ರೈಲಿಗೆ ಕಲ್ಲೆಸೆತ: ಯುವತಿಗೆ ಗಾಯ

ಕಲ್ಲಿಕೋಟೆ: ಕಲ್ಲಿಕೋಟೆ ಸಮೀಪ ಸಂಚರಿಸುತ್ತಿದ್ದ ರೈಲಿನ ಮೇಲೆ ಕಲ್ಲೆಸೆತವುಂಟಾಗಿದ್ದು   ಇದ ರಿಂದ  ಪ್ರಯಾಣಿಕೆ ಗಾಯಗೊಂ ಡಿದ್ದಾರೆ.  ವಡಗರ ಪುರಮೇರಿ ಎರಂ ಞೋಳಿ ತಾಯಕುನಿಯದ ಐಶ್ವರ್ಯ ರಾಮಕೃಷ್ಣ (೧೮) ಎಂಬವರು  ಗಾಯಗೊಂಡಿದ್ದಾರೆ.  ಇವರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಲುವಾದಿಂದ  ವಡಗರೆಗೆ ಪ್ರಯಾ ಣಿಸುತ್ತಿದ್ದರು.  ಕಲ್ಲು ಐಶ್ವರ್ಯರ ಮುಖಕ್ಕೆ ಬಡಿದಿದ್ದು, ಇದರಿಂದ ಇವರ ಮೂರು ಹಲ್ಲುಗಳು ಕಿತ್ತುಹೋಗಿದ್ದು, ತುಟಿಗೂ ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ರೈಲುಗಾಡಿ ಕಡಲುಂಡಿ ಸೇತುವೆ ಹಾಗೂ  ಫರೋಕ್‌ನ ಮಧ್ಯೆ ತಲುಪಿದಾಗ ನಿನ್ನೆ ರಾತ್ರಿ ೧೦ ಗಂಟೆ ವೇಳೆ …

ಶಂಕರನಾರಾಯಣ ಭಟ್ ನಿಧನ

ಮಧೂರು: ಇಲ್ಲಿಗೆ ಸಮೀಪದ ಅರ್ಜುನಗುಳಿ ನಿವಾಸಿ ಶಂಕರನಾರಾ ಯಣ ಭಟ್ (66) ನಿಧನಹೊಂ ದಿದರು.  ಕೃಷಿಕನಾಗಿದ್ದರು ಇವರು ಉಪ ವೃತ್ತಿಯಾಗಿ ನೀರ್ಚಾಲು ಪೇಟೆಯಲ್ಲಿ ಜೀಪುಟ್ಯಾಕ್ಸಿ ನಡೆಸುತ್ತಿದ್ದರು.  ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮತ್ತು  ಮುಳ್ಳೇರಿಯ ಹವ್ಯಕ ಮಂಡಲದ ಕಾಸರಗೋಡು ವಲಯದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮೃತರು ಪತ್ನಿ ಸವಿತಾ ಎಸ್.ಎನ್. ಭಟ್, ಪುತ್ರ ಅನೀಶ್‌ಕೃಷ್ಣ (ಇಂಜಿನಿ ಯರ್ ಬೆಂಗಳೂರು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕಾಸರಗೋಡು ಬ್ರಾಹ್ಮಣ ಮಹಾಸಭಾ  ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಕನ್ನಡಿಗ ವೈದ್ಯೆ ಡಾ| ಚೇತನಾರಿಗೆ ಇಂಗ್ಲೆಂಡ್‌ನ ರಾಯಲ್ ಕಾಲೇಜಿನ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ

ಕಾಸರಗೋಡು: ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜೆನ್ಸ್ ನೀಡುವ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿಯಾದ ಹಾಲಟ್ ಪ್ರೈಜ್ ಮೆಡಲ್ ಪ್ರಶಸ್ತಿಯನ್ನು ಮೇಲ್ಪರಂಬ ನಿವಾಸಿ ಕನ್ನಡಿಗರಾದ ಡಾ| ಚೇತನಾ ಅವರಿಗೆ ಪ್ರದಾನ ಮಾಡಲಾ ಯಿತು. ಎಂಆರ್‌ಸಿಎಸ್ ಪರೀಕ್ಷೆಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದರೆ ಮಾತ್ರವೇ ಈ ಪ್ರಶಸ್ತಿಗೆ ಅರ್ಹತೆಯಿದೆ. ಡಾ| ಚೇತನಾ ಪ್ರಥಮ ಪ್ರಯತ್ನದಲ್ಲೇ ಶೇ. 92 ಅಂಕ ಗಳಿಸಿ ಪ್ರಥಮಸ್ಥಾನ ಪಡೆದು ಈ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಭಾರತದಲ್ಲಿ ಕೆಲವೇ ವೈದ್ಯರುಗಳು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಾಸರಗೋಡಿನ ಕನ್ನಡಿಗ …

ಅಲಂಕೃತಗೊಂಡ ಅಡ್ಕತ್ತಬೈಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪುನಃಪ್ರತಿಷ್ಠಾ ವಾರ್ಷಿಕ ದಿನಾಚರಣೆ ಆರಂಭ

ಕಾಸರಗೋಡು: ಅಡ್ಕತ್ತಬೈಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಹೊಸಮನೆಯಲ್ಲಿ ಪುನಃಪ್ರತಿಷ್ಠಾ ವಾರ್ಷಿಕ ದಿನಾಚರಣೆ, ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವ ಇಂದು ಆರಂಭಗೊಂಡಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ಮುಡಿಪು ಶುದ್ಧಿ (ಪಾನಕ ಪೂಜೆ) ನಡೆಯಿತು. ಬಳಿಕ ನಾಗತಂಬಿಲ, ಬ್ರಹ್ಮೆರ್, ದೇಯಿ ಬೈದ್ಯೆತಿ, ಕೋಟಿಚೆನ್ನಯ್ಯ ಹಾಗೂ ಇತರ ದೈವಗಳಿಗೆ ಪೂಜಾ ಕಾರ್ಯಕ್ರಮಗಳು, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ರಿಂದ ವಿದ್ಯಾಶ್ರಯ ಭಜನ್ಸ್ ಮಜಲ್ ಇವರಿಂದ ಭಜನೆ, ರಾತ್ರಿ 7ಕ್ಕೆ ಸಂಧ್ಯಾಪೂಜೆ, ೮ಕ್ಕೆ ಗುಳಿಗ ದೈವಕೋಲ, ಕೊರತಿಅಮ್ಮನ …

ಪ್ರಚಾರಕ್ಕೆ ಹುರುಪು ನೀಡಿ ಕಲ್ಲಟ್ರ ಮಾಹಿನ್ ಹಾಜಿಯವರ ವಾಕತ್ತೋನ್

ಕಾಸರಗೋಡು: ಯುಡಿವೈಎಫ್, ಯುಡಿಎಸ್‌ಎಫ್ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ನೇತೃತ್ವದಲ್ಲಿ ಬೆಳಿಗ್ಗೆ ವಿದ್ಯಾನಗರ ಮೈದಾನ ಪರಿಸರದಲ್ಲಿ ನಡೆಸಿದ ವಾಕತ್ತೋನ್ ಚುನಾವಣಾ ಚಟುವಟಿಕೆಗಳಿಗೆ ಹುರುಪು ನೀಡಿತು. ಕಲ್ಲಟ್ರ ಮಾಹಿನ್ ಹಾಜಿ ಜೊತೆಯಲ್ಲೇ ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದರು.  ವ್ಯಾಯಮಕ್ಕಾಗಿ ಮೈದಾನಕ್ಕೆ ತಲುಪಿದ ವ್ಯಕ್ತಿಗಳು ಐಕ್ಯರಂಗದ ಅಭ್ಯರ್ಥಿಯನ್ನು ಸ್ವಾಗತಿಸಿದರು. ವಿದ್ಯಾನಗರ ಮೈದಾನ ನವೀಕರಣೆ ಸಹಿತದ ಕ್ರೀಡಾವಲಯಕ್ಕೆ ಅಗತ್ಯವಾದ ಹಲವಾರು ಬೇಡಿಕೆಗಳನ್ನು ಅಲ್ಲಿದ್ದವರು ಅಭ್ಯರ್ಥಿಯೊಂದಿಗೆ ಚರ್ಚಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಪಿ.ಎಂ. ಮುನೀರ್ ಹಾಜಿ, ಗೋವಿಂದನ್ ನಾಯರ್ ಸಹಿತ ಹಲವರು ಭಾಗವಹಿಸಿದರು.

ಕೇರಳವನ್ನು ವೃದ್ಧರ ಕೇಂದ್ರವಾಗಿ ಮಾಡಿರುವುದೇ ಎಡ-ಬಲ ಒಕ್ಕೂಟಗಳ ಸಾಧನೆ-ಸಿ. ಸದಾನಂದನ್ ಮಾಸ್ತರ್

ಕಾಸರಗೋಡು:  ಉನ್ನತ ಶಿಕ್ಷಣ ಸಂಸ್ಥೆಗಳು, ಉತ್ತಮ ಉದ್ಯೋಗಾ ವಕಾಶಗಳ ಕೊರತೆಯಿಂದ ಸ್ಥಳೀಯ ರಾದ ಯುವಕರನ್ನು ಕೇರಳದಿಂದ ಹೊರಗೆ ಕಳುಹಿಸಿ ವೃದ್ಧರಾಜ್ಯವನ್ನಾಗಿ  ಮಾಡಿರುವುದು ಎಡ-ಬಲ ಒಕ್ಕೂಟಗಳ ಆಡಳಿತ ಸಾಧನೆಯೆಂದು ರಾಜ್ಯ ಸಭಾ ಸದಸ್ಯ ಸಿ. ಸದಾನಂದನ್ ಮಾಸ್ತರ್ ನುಡಿದರು.  ಮಹಿಳಾ ಮೋರ್ಛಾದ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆಸಿದ ಮಹಿಳಾ ನಾಯಕತ್ವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯರಾದ ಕಾರ್ಮಿಕರ ಕೊರತೆ ಕಾರಣದಿಂದಾಗಿ ಕೃಷಿ,  ಕಿರು ಕೈಗಾರಿಗೆಗಳು ಸಹಿತ ಸಂದಿಗ್ಧತೆಯಲ್ಲಿದೆ. ಕೇಂದ್ರ ಸರಕಾರದ ಮೂಲಭೂತ ಸೌಲಭ್ಯ ಅಭಿವೃದ್ಧಿ …

ಹೊಸಂಗಡಿಯಲ್ಲಿ ಎಡರಂಗದ ಚುನಾವಣಾ ಸಭೆ

ಮಂಜೇಶ್ವರ: ಎಡರಂಗದ ಮಂಜೇಶ್ವರ ಮಂಡಲ ಅಭ್ಯರ್ಥಿ ಕೆ.ಆರ್. ಜಯಾನಂದರ ಪರವಾಗಿ ನಿನ್ನೆ ಹೊಸಂಗಡಿಯಲ್ಲಿ ಚುನಾವಣಾ ಸಭೆ ಜರಗಿತು. ಸಿಪಿಐ ರಾಜ್ಯ ಕಾರ್ಯದರ್ಶಿ  ಬಿನೋಯ್ ವಿಶ್ವಂ ಪ್ರಧಾನ ಭಾಷಣ ಮಾಡಿದರು. ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ ಜಯರಾಮ ಬಲ್ಲಂಗುಡೇಲು ಅಧ್ಯಕ್ಷತೆ ವಹಿಸಿದರು. ಸಿಪಿಎಂನ ಸಿಜಿ ಮ್ಯಾಥ್ಯು ಪ್ರಸ್ತಾಪಿಸಿದರು. ಅಭ್ಯರ್ಥಿ ಕೆ.ಆರ್. ಜಯಾನಂದ, ಜಿಲ್ಲಾ ಪಂ. ಮಾಜಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು, ಜಿಲ್ಲಾ ಅಸಿಸ್ಟೆಂಟ್ ಸೆಕ್ರೆಟರಿ ಬಿ. ರಾಜನ್,  ಸಿಪಿಎಂ ಕುಂಬಳೆ ಏರಿಯಾ …