ಕಾಡುತ್ಪನ್ನ ಮಾರಾಟ ಅಂಗಡಿಯಲ್ಲಿ ಕಳವು
ಕಾಸರಗೋಡು: ಕಾಡುತ್ಪನ್ನಗಳ ಮಾರಾಟದಂಗಡಿಗೆ ಕಳ್ಳರು ನುಗ್ಗಿ ಬಾರೀ ಕಾಡುತ್ಪನ್ನಗಳನ್ನು ಕದ್ದು ಸಾಗಿಸಿದ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಮುಟ್ಟತ್ತೋಡಿ ಗ್ರಾಮದ ಆಲಂಪಾಡಿ ಸಿ.ಎಚ್.ನಗರ ದತ್ತ್ ಮೂಲೆ ಹೌಸ್ ನ ಇಸ್ಮಾಯಿಲ್ ಎಂಬವರ ಅಂಗಡಿಯಲ್ಲಿ ಈ ಕಳವು ನಡೆದಿದೆ. ಆಲಂಪಾಡಿ ಸಿ.ಎಚ್. ನಗರದಲ್ಲಿರುವ ತನ್ನ ಕಾಡುತ್ಪನ್ನ ಮಾರಾಟದಂಗಡಿಗೆ ಜೂನ್ 30ರಿಂದ ಜುಲೈ 1ರ ನಡುವಿನ ಯಾವುದೋ ಸಮಯದಲ್ಲಿ ಕಳ್ಳರು ಅಂಗಡಿಯ ಬೀಗ ಒಡೆದು ಒಳನುಗ್ಗಿ ಅಲ್ಲಿ ದಾಸ್ತಾನು ಇರಿಸಲಾಗಿದ್ದ 450 ಕಿಲೋ ಅಡಿಕೆ, 10 ಕಿಲೋದಷ್ಟು …