ಎರಡು ಕ್ವಿಂಟಾಲ್ ಸುಲಿದ ಅಡಿಕೆ ಕಳವು

ಮುಳ್ಳೇರಿಯ: ಮನೆ ಬಳಿ ದಾಸ್ತಾನು ಕೊಠಡಿಯಲ್ಲಿರಿಸಿದ್ದ ಎರಡು ಕ್ವಿಂಟಾಲ್ ಸುಲಿದ ಅಡಿಕೆ ಕಳವಿಗೀ ಡಾಗಿದೆ. ಮುಳ್ಳೇರಿಯ ಬೇಂಗತ್ತಡ್ಕ, ನಾವುಂಗಾಲ್‌ನ ಎನ್. ಬಾಲಕೃಷ್ಣನ್ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು  ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜುಲೈ ೧೯ರಿಂದ ೨೯ರ ಮಧ್ಯೆಗಿನ ಯಾವುದೋ ದಿನ  ಅಡಿಕೆ ಕಳವಿಗೀಡಾಗಿರುವುದಾಗಿ ಸಂಶಯಿಸ ಲಾಗುತ್ತಿದೆ. ಅಡಿಕೆ ಸಂಗ್ರಹಿಸಿಡಲು ಪ್ರತ್ಯೇಕ ಸಿದ್ಧಪಡಿಸಿದ್ದ ದಾಸ್ತಾನು ಕೊಠಡಿಯಲ್ಲಿ ಮೂರು ಗೋಣಿ ಚೀಲಗಳಲ್ಲಿ ಅಡಿಕೆ ತುಂಬಿಸಿಡಲಾಗಿತ್ತು. ಸುಮಾರು ಒಂದು ಲಕ್ಷ ರೂಪಾಯಿಗಳ ಅಡಿಕೆ ಕಳವಿಗೀಡಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಯುವತಿಯ ನೀರಿನ ಬಾಟಲಿಯಲ್ಲಿ ಮೂತ್ರ ತುಂಬಿಸಿಟ್ಟ ಸಹೋದ್ಯೋಗಿಗಳಾದ ಇಬ್ಬರ ವಿರುದ್ಧ ಕೇಸು

ಕುಂಬಳೆ: ಯುವತಿಯ ನೀರಿನ  ಬಾಟಲಿಯಲ್ಲಿ  ಮೂತ್ರ ತುಂಬಿಸಿಟ್ಟ ಆರೋಪದಂತೆ  ಆಕೆಯ ಸಹೋದ್ಯೋಗಿಗಳಾದ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೆಕ್ರಾಜೆ ಗ್ರಾಮದಲ್ಲಿ  ವಾಸಿಸುವ 30ರ ಹರೆಯದ ಯುವತಿ ನೀಡಿದ ದೂರಿನಂತೆ  ಮೊಗ್ರಾಲ್‌ನ  ಖಾಸಗಿ ಸಂಸ್ಥೆಯೊಂದರ ನೌಕರನಾದ ವೈಶಾಖ್, ಎಬಿನ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆಯಂಗವಾಗಿ ಸಂಸ್ಥೆಯ ಸಿಸಿ ಟಿವಿ ಕ್ಯಾಮರಾಗಳನ್ನು ಇಂದು ಪರಿಶೀಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಜುಲೈ 25ರಂದು ಸಂಜೆ 5.30ರಿಂದ 27ರಂದು ಬೆಳಿಗ್ಗೆ 9.30ರ ಸಮಯದಲ್ಲಿ ಯುವತಿಯ ನೀರಿನ …

ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ : 13,700 ರೂ.ಸಹಿತ ನಾಲ್ವರ ಸೆರೆ

ಕುಂಬಳೆ: ಕುಂಟಂಗೇರಡ್ಕ ಅಂಗನವಾಡಿ ಸಮೀಪದ ಸಾರ್ವ ಜನಿಕ ಪ್ರದೇಶದಲ್ಲಿ ಹಣವಿರಿಸಿ ಜೂಜಾಟ ನಡೆಸುತ್ತಿದ್ದ ಕೇಂದ್ರಕ್ಕೆ ಕುಂಬಳೆ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿ  ನಾಲ್ವರನ್ನು ಸೆರೆಹಿಡಿ ದ್ದಾರೆ. ಈ ಕೇಂದ್ರದಿಂದ  13,700 ರೂ. ವಶಪಡಿಸಲಾಗಿದೆ.    ಕುಂಟಂಗೇರಡ್ಕದ ಮುರುಗೇಶ (41), ಅಜಿತ್ (28), ಕಣ್ಣೂರು ಎಡಕ್ಕಾಡ್‌ನ ದಿವೇಶ್ ಎನ್.ಪಿ (36) ಮತ್ತು ಕಲ್ಯಾಶ್ಶೇರಿ ಕಣ್ಣಾಪುರದ ನಾಗೇಶ್(51)ಎಂಬವರು ಬಂಧಿತ ವ್ಯಕ್ತಿಗಳಾಗಿದ್ದಾರೆ.

ಕೊಯಿಪ್ಪಾಡಿಯಲ್ಲಿ ಕಡಲ್ಕೊರೆತ ತೀವ್ರ: ಎರಡು ಕುಟುಂಬಗಳ ಸ್ಥಳಾಂತರ; ರಸ್ತೆ, ವಿದ್ಯುತ್ ಕಂಬಗಳು ಅಪಾಯಭೀತಿಯಲ್ಲಿ

ಕುಂಬಳೆ: ಕೊಯಿಪ್ಪಾಡಿ ಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಸಮುದ್ರ ತಡೆಗೋಡೆ ಸಮುದ್ರಪಾಲಾಗಿದೆ.  20ರಷ್ಟು ತೆಂಗಿನ ಮರಗಳು ಈಗಾಗಲೇ ಸಮುದ್ರದ ಅಲೆಯಲ್ಲಿ ಕೊಚ್ಚಿಹೋಗಿದೆ. ವಿದ್ಯುತ್ ಕಂಬಗಳು  ಧರಾಶಾಹಿ ಯಾಗುವ ಭೀತಿಯಲ್ಲಿದೆ.  ಈ ಪ್ರದೇಶದ ಸವಿತಾ ಹಾಗೂ ವಿಮಲ ಎಂಬಿವರ ಕುಟುಂಬಗಳನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸ ಲಾಗಿದೆ.  ಕೊಯಿಪ್ಪಾಡಿ ಕಡಪ್ಪುರ ದಿಂದ ಕೋಟಿ ರಸ್ತೆಯ ಫಿಶರೀಸ್ ಎಲ್‌ಪಿ ಶಾಲೆಗೆ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಯಾವುದೇ ಕ್ಷಣ ಕುಸಿಯುವ ಭೀತಿಯಲ್ಲಿದೆ. ಇದೇ ವೇಳೆ  ಪ್ರತೀ ವರ್ಷ  ಕೋಟ್ಯಂತರ ರೂಪಾಯಿಗಳ ಕಗ್ಗಲ್ಲುಗಳನ್ನು ಸಮುದ್ರ ಕಿನಾರೆಯಲ್ಲಿರಿಸುತ್ತಿದ್ದು, …

ವ್ಯಾಪಾರಿಯ ತಲೆಗೆ  ಹೊಡೆದು ಹಣ ದರೋಡೆಗೆತ್ನಿಸಿದ ಆರೋಪಿ 22 ವರ್ಷಗಳ ಬಳಿಕ ಸೆರೆ

ಕಾಸರಗೋಡು: ಕಾಡುತ್ಪನ್ನ ವ್ಯಾಪಾರಿಯ ತಲೆಗೆ ಹೊಡೆದು ಹಣ ದರೋಡೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯನ್ನು 22 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಅಲವಿಲ್ ನಿವಾಸಿ ಎಚ್. ಮುನ್ನ ಯಾನೆ ಮುನೀರ್ (45) ಬಂಧಿತ ಆರೋಪಿ. ಹೊಸದುರ್ಗದ ಕಾಫಿಯಾ ಟ್ರೇಡರ್ಸ್ ಎಂಬ ಹೆಸರಿನ ಕಾಡುತ್ಪನ್ನ ಮಾರಾಟದಂಗಡಿಯ ಮಾಲಕ ಸಿ. ಅಬ್ದುಲ್ಲ ಹಾಜಿ ಎಂಬವರು 2004 ಜನವರಿ 9ರಂದು  ರಾತ್ರಿ ಅಂಗಡಿ ಮುಚ್ಚಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ದಾರಿ ಮಧ್ಯೆ ಹೊಸದುರ್ಗ ಪೇಟೆಯಲ್ಲಿ ಅಕ್ರಮಿಗಳ ತಂಡವೊಂದು ಅವರ ಮೇಲೆರಗಿ ತಲೆಗೆ ಹೊಡೆದು …

ಜಿಲ್ಲೆಯಲ್ಲಿ 11ಕ್ಕೂ ಹೆಚ್ಚು ಮನೆಗಳಿಗೆ ಹಾನಿ: ಮಲೆನಾಡು ಪ್ರದೇಶಗಳಲ್ಲಿ ಭೂಕುಸಿತ, ಹಲವು ಕುಟುಂಬಗಳ ಸ್ಥಳಾಂತರ

ಕಾಸರಗೋಡು: ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಹನ್ನೊಂದಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಜಿಲ್ಲೆಯ ಮಲೆನಾಡು ಪ್ರದೇಶವಾದ ಚೆರ್ವತ್ತೂರು ಸಮೀಪದ ಮಯೀಚ್ಚದಲ್ಲಿ ಭೂಕುಸಿತ ಉಂಟಾಗಿದ್ದು ಇದರಿಂದ ಅಲ್ಲಿನ ೩೩ರಷ್ಟು ಕುಟುಂಬಗಳನ್ನು ನಿನ್ನೆ ರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ೪೦ರಷ್ಟು ಮನೆಯವರು  ನೆರೆ ಭೀತಿಯಲ್ಲಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಮಳೆಗೆ ಭೂಕುಸಿತ ಉಂಟಾದ ಪರಿಣಾಮ ತಗ್ಗು ಪ್ರದೇಶಗಳೆಲ್ಲವೂ ನೀರಿನಿಂದಾವೃತವಾಗಿದೆ.  ದೇಲಂಪಾಡಿ ಗ್ರಾಮದ ಊಜಂಪಾಡಿಯಲ್ಲಿ ಮನೆಯೊಂದು ಆಂಶಿಕವಾಗಿ ಕುಸಿದಿದ್ದು ಇದರಿಂದ ಅಶ್ವಿನಿ(14) ಎಂಬ ಬಾಲಕಿ ಗಾಯಗೊಂಡಿದ್ದಾಳೆ.  ಹೊಸದುರ್ಗ, ವೆಳ್ಳರಿಕುಂಡ್ ತಾಲೂಕುಗಳಲ್ಲಿ ಅತೀ ಹೆಚ್ಚು …

ದೈಗೋಳಿಯ ಸೇವಾಶ್ರಮದಿಂದ ವ್ಯಕ್ತಿ ನಾಪತ್ತೆ

ಉಪ್ಪಳ: ಕೊಡ್ಲಮೊಗರು ದೈಗೋಳಿಯಲ್ಲಿರುವ ಸಾಯಿ ನಿಕೇತನ್  ಸೇವಾಶ್ರಮದ ನಿವಾಸಿಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉತ್ತರಪ್ರದೇಶದ ಆಗ್ರ ಪ್ರಯಾಗ್‌ರಾಜ್ ನಿವಾಸಿ ವಿಷ್ಣು  ಕುಮಾರ್ (25) ನಾಪತ್ತೆಯಾದ ವ್ಯಕ್ತಿ.  ಆಶ್ರಮದ ನೌಕರ  ಕೆ.ಆದಿಶ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಳೆದ ಗುರುವಾರ ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ ಗಂಟೆ ಮಧ್ಯೆಗಿನ ಸಮ ಯದಲ್ಲಿ ವಿಷ್ಣುಕುಮಾರ್ ನಾಪತ್ತೆ ಯಾಗಿರುವುದಾಗಿ ತಿಳಿಸಲಾಗಿದೆ. ದೈಗೋಳಿಯಲ್ಲಿ ತಿರುಗಾಡುತ್ತಿದ್ದ ವಿಷ್ಣುಕುಮಾರ್‌ರನ್ನು ಒಂದು ತಿಂಗಳ ಹಿಂದೆ ಸೇವಾಶ್ರಮಕ್ಕೆ ಸೇರಿಸಲಾಗಿತ್ತು.

ಪತ್ನಿಯ ನಿಧನದ 10ನೇ ದಿನ ಪತಿಯೂ ನಿಧನ

ಕಾಸರಗೋಡು: ಪತ್ನಿ ಮೃತಪಟ್ಟ 10ನೇ ದಿನ ಪತಿ ಕೂಡಾ ನಿಧನ ಹೊಂದಿದರು. ಪಾಕಂ ಕಣ್ಣಂವಯಲ್ ಕಿಳಕ್ಕೇವೀಟಿಲ್ ಅಡುಕ್ಕಾಡುಕ್ಕಂ ತರವಾಡು ಕಾರ್ನವರ್ ಕೆ. ಕೃಷ್ಣನ್ ನಾಯರ್ (86) ನಿಧನ ಹೊಂದಿದರು. ಇವರ ಪತ್ನಿ ಮುಂಙತ್ ಕಾರ್ತ್ಯಾಯಿನಿ ಅಮ್ಮ ಕಳೆದ ತಿಂಗಳ 23ರಂದು ನಿಧನ ಹೊಂದಿದ್ದರು. ಮೃತರು ಮಕ್ಕಳಾದ ಎಂ. ತಂಬಾನ್ ನಾಯರ್, ಸೀತಾ ಕುಮಾರಿ, ಉಷಾ, ಚಂದ್ರನ್, ವಿನೋದ್, ಅಳಿಯಂದಿರಾದ ಕುಂಞಿಕಣ್ಣನ್, ಗೋಪಿನಾಥನ್, ಸೊಸೆಯಂದಿರಾದ ಎಂ. ಸೀನ, ಎ. ಅರ್ಚನ, ಸಹೋದರಿ ನಾರಾಯಣಿಅಮ್ಮ, ಸಹೋದರರಾದ ನಾರಾಯಣನ್ ನಾಯರ್, ಕುಮಾರನ್ …

ಬದಿಯಡ್ಕದಲ್ಲಿ ಕಾಂಗ್ರೆಸ್ ನೇತಾರ ರಾಮ ಪಾಟಾಳಿಯವರ ಸಂಸ್ಮರಣೆ

ಬದಿಯಡ್ಕ:  ಬದಿಯಡ್ಕ ಪಂಚಾ ಯತ್‌ನ ಮಾಜಿ ಅಧ್ಯಕ್ಷ, ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರೂ ಆದ ದಿ| ಬಿ. ರಾಮ ಪಾಟಾಳಿಯವರ  ಏಳನೇ ಸಂಸ್ಮರಣಾ ವಾರ್ಷಿಕವನ್ನು  ಇಂಡಿಯನ್ ನೇಶನಲ್ ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ  ಮಂಡಲ ಸಮಿತಿ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು.  ಕಾಂಗ್ರೆಸ್ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಾರಿಜಾಕ್ಷನ್ ಅವರು ರಾಮ ಪಾಟಾಳಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಳಿಕ ನಡೆದ ಸಂಸ್ಮರಣಾ ಕಾರ್ಯಕ್ರಮವನ್ನು  ಕಾಂಗ್ರೆಸ್ …

ಅಮೈ ಬಯಲಿನಲ್ಲಿ ಪರಿವಾರ ಬಂಟರ ಸಂಘದಿಂದ ಕೆಸರುಗದ್ದೆ ಕ್ರೀಡೋತ್ಸವ

ಕಾಸರಗೋಡು: ಪರಿವಾರ ಬಂಟರ ಸಂಘ ಕಾಸರಗೋಡು ವಲಯದ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ವತಿಯಿಂದ ಅಮೈ ಬಯಲಿನಲ್ಲಿ ಪಂಚವಾರ್ಷಿಕ ಕೆಸರು ಗದ್ದೆ ಕ್ರೀಡೋತ್ಸವ ಆಚರಿಸಲಾಯಿತು. ವಿಶ್ವ ಪರಿವಾರ ಬಂಟರ ಸಂಘದ ಉಪಾದ್ಯಕ್ಷ ರಘುವೀರ ನಾಯ್ಕ ಉದ್ಘಾಟಿಸಿ, ಗ್ರಾಮೀಣ ಆಟೋಟ ಸ್ಪರ್ಧೆ ಮತ್ತು ಕೆಸರುಗದ್ದೆ ಕ್ರೀಡೋತ್ಸವ ನಮ್ಮ ಹಿಂದಿನ ಜನಾಂಗದವರಿಗೆ ವಿನೋದವಾಗಿತ್ತು. ಗದ್ದೆಯ ಕೆಸರು ಮನುಷ್ಯ ಶರೀರವನ್ನು ರೋಗ ರುಜಿನುಗಳಿಂದ ಕಾಪಾಡುವುದು ಎಂದರು. ಪ್ರೊಫೆಸರ್ ಡಾ. ಜಯಪ್ರಕಾಶ ನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬೀರಂತಬೈಲು ಸಂತಾನ ಗುರಿಕ್ಕಾರ …