ಸ್ವಾತಂತ್ರ್ಯ ಹೋರಾಟಗಾರರನ್ನು ಹೀಯಾಳಿಸುವುದು  ಸ್ವಾರ್ಥ ಹಿತಾಸಕ್ತಿಗಳ ಹವ್ಯಾಸ- ಪ್ರಕಾಶ್ ಮಲ್ಪೆ

ಬದಿಯಡ್ಕ: ಸ್ವಾತಂತ್ರ‍್ಯ ವೀರ ವಿನಾಯಕ ದಾಮೋದರ ಸಾವರ್ಕರನ್ನು ಅವಹೇಳನಗೊಳಿಸುವ ವರಲ್ಲಿ ಎರಡು ವಿಧ. ಎಲ್ಲಾ ತಿಳಿದುಕೊಂಡು ಬೇಕೆಂತಲೇ ದುರುದ್ದೇಶ ಪೂರ್ವಕವಾಗಿ ರಾಜಕೀಯ ಪ್ರೇರಿತವಾಗಿ ಅಪಹಾಸ್ಯ ಮಾಡುವವರು ಒಂದು ವಿಭಾಗ. ಇನ್ನೊಂದು ವಿಭಾಗ ಇವರ ಮಾತುಗಳನ್ನು ಕೇಳಿಕೊಂಡು ಅದನ್ನು ನಿಜವೆಂದೇ ನಂಬಿ ಅಪಾರ್ಥ ಮಾಡಿಕೊಂಡವರು. ಮೊದಲನೆ ವಿಭಾಗಕ್ಕೆ ಏನೂ ಮಾಡೋಕ್ಕಾಗದು. ಆದರೆ ಎರಡನೆ ವಿಭಾಗಕ್ಕೆ ನಿಜವೇ ನೆಂದು ಮನವರಿಕೆ ಮಾಡಿಕೊಡ ಬೇಕಾದ ಅನಿವಾರ್ಯತೆ ಇದೆ. ಅದು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಾಧ್ಯವಾಗಬೇ ಕೆಂದು ವಾಗ್ಮಿ, ಸಾಮಾಜಿಕ ಚಿಂತಕ ಪ್ರಕಾಶ್ …

ಜಿಲ್ಲಾ ಮಟ್ಟದ ಓಣಂ ಹಬ್ಬ ವಾರಾಚರಣೆ ಸಮಾಪ್ತಿ

ಕಾಸರಗೋಡು: ಜಿಲ್ಲಾ ಓಣಂ ವಾರಾಚರಣೆ ನಿನ್ನೆ ಸಮಾಪ್ತಿಗೊಂಡಿತು. ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಉದ್ಘಾಟಿಸಿದರು. ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದರು. ಶಾಸಕ ಎಕೆಎಂ ಅಶ್ರಫ್, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್, ಸಿನಿಮಾ ನಟ ಉಣ್ಣಿರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷ ಹನೀಫ್ ಕೆ.ಎಂ,  ವಿವಿಧ ಬ್ಲೋಕ್ ಪಂ. ಅಧ್ಯಕ್ಷರಾದ ಸಿ. ಬಾಲನ್, ಅಬ್ದುಲ್ಲ ಕುಂಞಿ, ಯು.ಕೆ. ಸೈಫುಲ್ಲಾ ತಂಙಳ್, ಉಪಾಧ್ಯಕ್ಷೆ …

ಯಶವಂತ ಕುಮಾರ್ ನಿಧನ

 ಮುಳ್ಳೇರಿಯ: ಒಂದು ತಿಂಗಳ ಹಿಂದೆ ನಿಧನ ಹೊಂದಿದ ನಿವೃತ್ತ ಮುಖ್ಯೋಪಾಧ್ಯಾಯ, ಕುಂಟಾರು ಹುಣ್ಸೆಡ್ಕ ನಿವಾಸಿ ವೀರೋಜಿ ರಾವ್‌ರ ಪುತ್ರ ಯಶವಂತ ಕುಮಾರ್ (52) ನಿನ್ನೆ ನಿಧನ ಹೊಂದಿದರು. ಇವರು ರಾಜ್ಯ ಸಾರಿಗೆ ಬಸ್‌ಗಳಲ್ಲಿ ತಾತ್ಕಾಲಿಕ ಚಾಲಕನಾಗಿದ್ದರು. ಅಲ್ಲದೆ ರಿಕ್ಷಾ ಚಾಲಕನಾಗಿಯೂ ದುಡಿದಿದ್ದರು. ಕೃಷಿಕರಾಗಿದ್ದಾರೆ. ಹೃದಯಾಘಾತ ಮರಣಕ್ಕೆ ಕಾರಣವೆನ್ನ ಲಾಗಿದೆ. ಮೃತರು ತಾಯಿ ಜಯಲಕ್ಷ್ಮಿ, ಪತ್ನಿ ಯಶೋಧ, ಮಕ್ಕಳಾದ ಚೈತನ್ಯ, ಶರಣ್ಯ, ಸಹೋದರರಾದ ಪ್ರವೀಣ್ ಕುಮಾರ್, ಕಿಶೋರ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಯೂಸಫ್  ನಿಧನ

ಪೆರ್ಲ: ಇಲ್ಲಿನ ಕೆ ಕೆ ರಸ್ತೆ ನಿವಾಸಿ, ಉಕ್ಕಿನಡ್ಕದ ಹಿರಿಯ ವ್ಯಾಪಾರಿ ಯೂಸಫ್ (92) ನಿಧನ ಹೊಂದಿದರು. ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಅಶ್ರಫ್, ಸಮದ್, ಸಮೀರ್, ಸಲೀಂ, ಸಾಬಿತ್, ಸಹಾನ, ಅಳಿಯಂದಿರಾದ ಸಫರಿ, ಮುಹಮ್ಮದ್, ಸೊಸೆಯಂದಿರಾದ ಸಾಜಿತ, ಸಫೂರ, ಸಹೋದರ ಮೂಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಅನ್ವರ್ ಹಾಗೂ ಇಬ್ಬರು ಸಹೋದರರು ಈ ಹಿಂದೆ ನಿಧನ ಹೊಂದಿದ್ದಾರೆ.

ಭವಾನಿ ನಿಧನ

ಕಾಸರಗೋಡು: ನೆಲ್ಲಿಕುಂಜೆ ಭವಾನಿ ನಿಲಯದ ದಿ| ಕೆ. ದಾಮೋದರ ಎಂಬವರ ಪತ್ನಿ ಭವಾನಿ (75) ನಿಧನಹೊಂದಿದರು. ಮೃತರು ಮಕ್ಕಳಾದ ಚಿತ್ತರಂಜನ್, ಶೋಭಾ, ಕಿಶೋರ್, ಅನಿಲ್, ಸುನಿಲ್ ಪ್ರವೀಣ್, ಅಳಿಯ ಸೊಸೆಯಂದಿರಾದ ಸುರೇಶ್ ಮಡಪ್ಪುರ (ಶಿಕ್ಷಣ ಕಚೇರಿ ನಿವೃತ್ತ ನೌಕರ), ಸುಧಾ, ವಿನಯ, ಸುಶ್ಮ, ನಿಶಾ, ಶರಣ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ರಾಜೀವಿ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಕಡಂಬಾರು ನಿವಾಸಿ ದಿ| ರಮೇಶ ಆಚಾರ್ಯ ರವರ ಪತ್ನಿ ರಾಜೀವಿ (82) ನಿನ್ನೆ ರಾತ್ರಿ ನಿಧನ ಹೊಂದಿದರು. ಮೃತರು ಮಕ್ಕಳಾದ ಭುವನೇಶ್ವರಿ, ಪ್ರದೀಪ, ಉದಯ, ಗೋಕುಲ, ಸೋಮನಾಥ, ತಾರಾನಾಥ, ಭಾರತಿ, ನವೀನ, ಯೋಗೀಶ್ವರಿ, ಸೊಸೆಯಂದಿರಾದ ನಳಿನಿ, ರೇಷ್ಮ, ಹೇಮಲತ, ರಶ್ಮಿ, ಕೃಪಾಲಕ್ಷ್ಮಿ ಅಳಿಯಂದಿರಾದ ಮಂಜುನಾಥ, ಮೌನೇಶ, ಜ್ಞಾನೇಶ, ಸಹೋದರ ಸಹೋದರಿಯರಾದ ಲಲಿತ, ಗಿರಿಜ, ಶಾರದಾ, ಲಕ್ಷ÷್ಮಣ, ಪ್ರಭಾಕರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರ ಸುಂದರ, ಸಹೋದರಿಯರಾದ ಉಮಾವತಿ, ಸುಲೋಚನ ಈ …

ಟಿಪ್ಪರ್ ಲಾರಿ ಮನೆ ಮೇಲೆ ಬಿದ್ದು ಚಾಲಕ ದಾರುಣ ಮೃತ್ಯು

ಹೊಸದುರ್ಗ: ಮಡಿಕೈ ಕಾಞಿರಪೊಯಿಲ್ ಕುಳಂ ಙಾಟ್‌ನಲ್ಲಿ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಘಟನೆ ನಡೆದಿದ್ದು, ಈ ದುರಂತದಲ್ಲಿ ಚಾಲಕ ಮೃv ಪಟ್ಟಿದ್ದಾರೆ. ಚಾಯೋಂ ನಿವಾಸಿ ಸಾದಿಕ್ (40) ಮೃತಪಟ್ಟ ಚಾಲಕನಾಗಿದ್ದಾರೆ. ಇಂದು ಬೆಳಿಗ್ಗೆ 7.30ರ ವೇಳೆ ಕಾಞಿರಪೊಯಿಲ್ ಕುಳಂಙಾಟ್‌ನಲ್ಲಿ ಅಪಘಾತ ಸಂಭವಿಸಿದೆ. ಕೆಂಪುಕಲ್ಲು ಇಳಿಸಿದ ಬಳಿಕ ಲಾರಿಯನ್ನು ಹಿಂದಕ್ಕೆ ತೆಗೆಯುತ್ತಿದ್ದ ಮಧ್ಯೆ ನಿಯಂತ್ರಣ ತಪ್ಪಿದೆ. ಈ ವೇಳೆ ಸಮೀಪದ ಪಿ. ಗೋಪಾಲನ್ ಎಂಬವರ ಮನೆಗೆ ಲಾರಿ ಮಗುಚಿದೆ. ಇದರಿಂದ ಅಡುಗೆ ಕೊಠಡಿ ಭಾಗ …

ಮುಖ್ಯಮಂತ್ರಿಯ ಕಾರು ತಡೆದು ನಿಲ್ಲಿಸಿದ ಕಾಂಗ್ರೆಸ್ ನೇತಾರನ ಬಂಧನ

ತಿರುವನಂತಪುರ: ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಕಾರನ್ನು ತಡೆದು ನಿಲ್ಲಿಸಿ ಅವರೊಂದಿಗೆ ಅನುಚಿತ ರೀತಿ ಯಲ್ಲಿ  ವರ್ತಿಸಿದ ಕಾಂಗ್ರೆಸ್ ನೇತಾರ ನನ್ನು ತಿರುವನಂತಪುರ ಶ್ರೀಕಾರ್ಯಂ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್‌ನ ತಿರುವನಂತಪುರ ಜಿಲ್ಲಾ ಸಮಿತಿ ಸದಸ್ಯ ಚೆಂದಿ ಅನಿಲ್  ಬಂಧಿತ ವ್ಯಕ್ತಿ. ಮುಖ್ಯಮಂತ್ರಿಯ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸುವಿಕೆ, ಅವರ ವಾಹನ ತಡೆದು ನಿಲ್ಲಿಸುವಿಕೆ, ಅವರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸುವಿಕೆ ಮತ್ತು ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸುವಿಕೆ ಎಂಬೀ ಸೆಕ್ಷನ್‌ಗಳ ಪ್ರಕಾರ ಚೆಂದಿ ಅನಿಲ್‌ನ ವಿರುದ್ಧ ಪೊಲೀಸರು  ಪ್ರಕರಣ ದಾಖಲಿಸಿಕೊಂ …

ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

ಕಾಸರಗೋಡು: ಸ್ನೇಹಿತರ ಜತೆಗೆ ಕೆರೆಯಲ್ಲಿ ಸ್ನಾನಕ್ಕಿಳಿದ ವಲಸೆಕಾರ್ಮಿಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೊಗ್ರಾಲ್ ಪುತ್ತೂರು ಬಳಿ ನಿನ್ನೆ ನಡೆದಿದೆ. ರಾಜಸ್ಥಾನ ಜೈಪುರ ಈದ್ರ ದಿಲ್ಲಿ ರಸ್ತೆ ಬಳಿಯ ಫರೀದ್ ಖಾನ್-ಝಹೀನಾ ದಂಪತಿ ಪುತ್ರ ಅಲ್ ರೆhದ್ ಫರ್ದೀನ್ ಖಾನ್ (23) ಸಾವನ್ನಪ್ಪಿದ ದುರ್ದೈವಿ.  ವಲಸೆ ಕಾರ್ಮಿಕನಾಗಿರುವ ಈ ಯುವಕ ಮೊಗ್ರಾಲ್ ಪುತ್ತೂರಿಗೆ ಸಮೀಪದ ಉಜ್ರೆಕೆರೆ ಬಳಿಯ ಫ್ಲಾಟ್ ಒಂದರಲ್ಲಿ ಇತರ ವಲಸೆ ಕಾರ್ಮಿಕರೊಂದಿಗೆ ವಾಸಿಸುತ್ತಿದ್ದು, ನಿನ್ನೆ ಸಂಜೆ ಅಲ್ಲೇ ಪಕ್ಕದ ಕೆರೆಗೆ ಸ್ನಾನಕ್ಕೆಂದು ಸ್ನೇಹಿತರ ಜತೆ …

ಕ್ಲಿನಿಕ್‌ನಲ್ಲಿ ಕುಸಿದು ಬಿದ್ದು ಕಟ್ಟಡ ನಿರ್ಮಾಣ ಕಾರ್ಮಿಕ ಮೃತ್ಯು

ಅಡೂರು: ಎದೆನೋವು ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಖಾಸಗಿ ಕ್ಲಿನಿಕ್‌ಗೆ ತಲುಪಿದ ವ್ಯಕ್ತಿ ಕುಸಿದು ಬಿದ್ದ ಘಟನೆ ಅಡೂರಿನಲ್ಲಿ ಸಂಭವಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮುಳ್ಳೇರಿಯದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಅಡೂರು ಮಂಡೆಬೆಟ್ಟು ನಿವಾಸಿ, ಕಟ್ಟಡ ನಿರ್ಮಾಣ ಕಾರ್ಮಿಕ ಬಾಲಕೃಷ್ಣನ್ (48) ಕುಸಿದು ಬಿದ್ದು ನಿಧನ ಹೊಂದಿದವರು. ನಿನ್ನೆ ಮಧ್ಯಾಹ್ನ ಇವರು ಚಿಕಿತ್ಸೆಗಾಗಿ ಅಡೂರಿನ ಖಾಸಗಿ ಕ್ಲಿನಿಕ್‌ಗೆ ತಲುಪಿದ್ದರು. ಅಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಮುಳ್ಳೇರಿಯ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಇವರು ದಿ| ಗೋಪಾಲನ್- ಮಾಧವಿ ದಂಪತಿ ಪುತ್ರನಾಗಿದ್ದು, …